Home ತಾಜಾ ಸುದ್ದಿ ಸುರಕ್ಷತೆಯ ಗ್ಯಾರಂಟಿ ನೀಡುತ್ತದೋ, ತಮ್ಮ ʼಬ್ರದರ್‌ʼಗಳ ರಕ್ಷಣೆಗೆ ನಿಲ್ಲುತ್ತದೋ

ಸುರಕ್ಷತೆಯ ಗ್ಯಾರಂಟಿ ನೀಡುತ್ತದೋ, ತಮ್ಮ ʼಬ್ರದರ್‌ʼಗಳ ರಕ್ಷಣೆಗೆ ನಿಲ್ಲುತ್ತದೋ

0

ಬೆಂಗಳೂರು: ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದಾಗಿ ಸಮಾಜಘಾತುಕ ಶಕ್ತಿಗಳಿಗೆ ರಾಜ್ಯದಲ್ಲಿ ಕಾನೂನಿನ ಭಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಲ್ತಾಫ್‌ ಎಂಬ ದುರುಳ ತನ್ನ ದುಷ್ಟ ಗ್ಯಾಂಗ್ ನೊಂದಿಗೆ ಅಪಹರಿಸಿ ಮಾದಕದ್ರವ್ಯ ನೀಡಿ ಗ್ಯಾಂಗ್ ರೇಪ್ ನಡೆಸಿರುವ ಅಮಾನುಷ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ, ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರಾಜ್ಯದ ಹೆಣ್ಣುಮಕ್ಕಳು, ಮಹಿಳೆಯರಿಗೆ ಸುರಕ್ಷತೆಯ ಗ್ಯಾರೆಂಟಿ ನೀಡುತ್ತದೋ ಅಥವಾ ತಮ್ಮ ‘ಬ್ರದರ್‌’ ಗಳ ರಕ್ಷಣೆಗೆ ನಿಲ್ಲುತ್ತದೋ ನೋಡಬೇಕು.

Exit mobile version