<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>#MotherSentiment Archives - Samyukta Karnataka</title>
	<atom:link href="https://samyuktakarnataka.in/tag/mothersentiment/feed/" rel="self" type="application/rss+xml" />
	<link>https://samyuktakarnataka.in/tag/mothersentiment/</link>
	<description>News that connects you to Karnataka since 1921</description>
	<lastBuildDate>Tue, 21 Apr 2026 09:49:02 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>#MotherSentiment Archives - Samyukta Karnataka</title>
	<link>https://samyuktakarnataka.in/tag/mothersentiment/</link>
	<width>32</width>
	<height>32</height>
</image> 
	<item>
		<title>ಹೆತ್ತವ್ವನ ಅಂತ್ಯ ಸಂಸ್ಕಾರಕ್ಕೆ ಕರೆದ್ರೆ ನಾವೀಗ ತುಂಬಾ ಬ್ಯುಸಿ ಎಂದ ಇಬ್ಬರು ಮಕ್ಕಳು; ಕರ್ನಾಟಕದಲ್ಲೇ ಘೋರ ಘಟನೆ</title>
		<link>https://samyuktakarnataka.in/districts/belagavi/belagavi-sons-refuse-mothers-last-rites-humanity-shame/</link>
		
		<dc:creator><![CDATA[Samyuktha Karnataka]]></dc:creator>
		<pubDate>Tue, 21 Apr 2026 09:49:01 +0000</pubDate>
				<category><![CDATA[ಬೆಳಗಾವಿ]]></category>
		<category><![CDATA[ರಾಜ್ಯ]]></category>
		<category><![CDATA[#Belagavi]]></category>
		<category><![CDATA[#Heartbreaking]]></category>
		<category><![CDATA[#Humanity]]></category>
		<category><![CDATA[#MotherSentiment]]></category>
		<category><![CDATA[#RespectParents]]></category>
		<guid isPermaLink="false">https://samyuktakarnataka.in/?p=96017</guid>

					<description><![CDATA[<p>ಹೆತ್ತ ಕರುಳಿಗಿಂತ ಹಣ ಮತ್ತು ಸ್ವಾರ್ಥ ದೊಡ್ಡದಾದಾಗ ಮನುಷ್ಯತ್ವ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಬೆಳಗಾವಿಯಲ್ಲಿ ನಡೆದ ಈ ಘಟನೆ ಒಂದು ಕನ್ನಡಿಯಂತಿದೆ. ಹಡೆದ ಮಕ್ಕಳಿಬ್ಬರಿದ್ದರೂ, ಹೆತ್ತವ್ವನ ಶವಸಂಸ್ಕಾರಕ್ಕೆ ಬರಲಾಗದಷ್ಟು ಆ ಮಕ್ಕಳು &#8216;ಬ್ಯುಸಿ&#8217;ಯಾಗಿದ್ದರು ಎಂದರೆ ನೀವು ನಂಬಲೇಬೇಕು. ಬೆಳಗಾವಿಯ ಶಾಹು ನಗರದ ನಿವಾಸಿ ಅಂಜನಾ ಧಮೋನೆ ಎಂಬ ವೃದ್ಧೆ ಕಳೆದ ಏಪ್ರಿಲ್ 15 ರಂದು ಕೊನೆಯುಸಿರೆಳೆದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಂದಹಾಗೆ, ಈ ತಾಯಿ ತನ್ನ ಮಕ್ಕಳನ್ನು ಹತ್ತಿರದ ಕಷ್ಟಗಳನ್ನು ಸಹಿಸಿ, ಹೊಟ್ಟೆ ಬಟ್ಟೆ [&#8230;]</p>
<p>The post <a href="https://samyuktakarnataka.in/districts/belagavi/belagavi-sons-refuse-mothers-last-rites-humanity-shame/">ಹೆತ್ತವ್ವನ ಅಂತ್ಯ ಸಂಸ್ಕಾರಕ್ಕೆ ಕರೆದ್ರೆ ನಾವೀಗ ತುಂಬಾ ಬ್ಯುಸಿ ಎಂದ ಇಬ್ಬರು ಮಕ್ಕಳು; ಕರ್ನಾಟಕದಲ್ಲೇ ಘೋರ ಘಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಹೆತ್ತ ಕರುಳಿಗಿಂತ ಹಣ ಮತ್ತು ಸ್ವಾರ್ಥ ದೊಡ್ಡದಾದಾಗ ಮನುಷ್ಯತ್ವ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಬೆಳಗಾವಿಯಲ್ಲಿ ನಡೆದ ಈ ಘಟನೆ ಒಂದು ಕನ್ನಡಿಯಂತಿದೆ. ಹಡೆದ ಮಕ್ಕಳಿಬ್ಬರಿದ್ದರೂ, ಹೆತ್ತವ್ವನ ಶವಸಂಸ್ಕಾರಕ್ಕೆ ಬರಲಾಗದಷ್ಟು ಆ ಮಕ್ಕಳು &#8216;ಬ್ಯುಸಿ&#8217;ಯಾಗಿದ್ದರು ಎಂದರೆ ನೀವು ನಂಬಲೇಬೇಕು.</p>



<p class="wp-block-paragraph">ಬೆಳಗಾವಿಯ ಶಾಹು ನಗರದ ನಿವಾಸಿ ಅಂಜನಾ ಧಮೋನೆ ಎಂಬ ವೃದ್ಧೆ ಕಳೆದ ಏಪ್ರಿಲ್ 15 ರಂದು ಕೊನೆಯುಸಿರೆಳೆದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಂದಹಾಗೆ, ಈ ತಾಯಿ ತನ್ನ ಮಕ್ಕಳನ್ನು ಹತ್ತಿರದ ಕಷ್ಟಗಳನ್ನು ಸಹಿಸಿ, ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ್ದರು. ಆದರೆ ವಿಪರ್ಯಾಸವೆಂದರೆ, ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಾಯಿಯನ್ನು ಒಬ್ಬಂಟಿಯಾಗಿಸಿದ್ದರು. ಅಂಜನಾ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಒಂಟಿತನದಲ್ಲೇ ಕಳೆದರು.</p>



<p class="wp-block-paragraph">ಯಾವಾಗ ಅಂಜನಾ ಅವರು ಮೃತಪಟ್ಟರೋ, ಆಗ ಸ್ಥಳೀಯರು ತಕ್ಷಣವೇ ಅವರ ಮಕ್ಕಳಿಗೆ ವಿಷಯ ಮುಟ್ಟಿಸಿದರು. ಆದರೆ ಆಗ ನಡೆದಿದ್ದೇ ಒಂದು ದೊಡ್ಡ ದುರಂತ. ತಾಯಿ ಸತ್ತ ಸುದ್ದಿ ಕೇಳಿದ ಆ ಮಕ್ಕಳು ಕಣ್ಣೀರು ಹಾಕುವ ಬದಲು, ಕನಿಷ್ಠ ಅಂತಿಮ ದರ್ಶನಕ್ಕೆ ಬರುವ ಆಸಕ್ತಿ ತೋರಲಿಲ್ಲ. &#8220;ನಮಗೆ ಬರಲು ಆಗುವುದಿಲ್ಲ, ನೀವೇ ಸಂಸ್ಕಾರ ಮಾಡಿ ಮುಗಿಸಿ&#8221; ಎಂದು ಅತ್ಯಂತ ನಿರ್ಲಕ್ಷ್ಯದಿಂದ ಉತ್ತರಿಸಿದರು. ಈ ಮಾತುಗಳನ್ನು ಕೇಳಿ ಅಕ್ಕಪಕ್ಕದ ಮನೆಯವರು ಮತ್ತು ಸ್ಥಳೀಯರು ಬೆಚ್ಚಿಬಿದ್ದರು.</p>



<p class="wp-block-paragraph">ಒಂಬತ್ತು ತಿಂಗಳು ಹೊತ್ತು ಹಡೆದ ತಾಯಿಗೆ ತರ್ಪಣ ಬಿಡಲು ಬರದ ಈ &#8216;ಕಲಿಯುಗದ ಶ್ರವಣಕುಮಾರರ&#8217; ನಡೆಗೆ ಇಡೀ ಬೆಳಗಾವಿ ಮರುಗುತ್ತಿದೆ. ಕೊನೆಗೆ ಆ ತಾಯಿಯ ಅನಾಥ ಪ್ರೇತಕ್ಕೆ ಮುಕ್ತಿ ನೀಡಲು ನಗರದ ಕೆಲವು ಸಾಮಾಜಿಕ ಕಾರ್ಯಕರ್ತರು ಮುಂದೆ ಬಂದರು. ಮಕ್ಕಳೇ ಇಲ್ಲದವರಂತೆ ಆ ಕಾರ್ಯಕರ್ತರೇ ಅಂಜನಾ ಅವರ ಅಂತ್ಯಕ್ರಿಯೆಯನ್ನು ವಿಧಿವಿಧಾನಗಳಂತೆ ನೆರವೇರಿಸಿದರು. ಮನೆತುಂಬಾ ಸಂಪತ್ತಿರಬಹುದು, ದೊಡ್ಡ ಪದವಿ ಇರಬಹುದು. ಆದರೆ ಹೆತ್ತ ತಾಯಿ ಸತ್ತಾಗ ಹೆಗಲು ಕೊಡದ ಆ ಬದುಕು ಏತಕ್ಕೆ? ಈ ಘಟನೆ ನಮ್ಮ ಸಮಾಜದ ಕ್ರೂರತೆಗೆ ಸಾಕ್ಷಿಯಾಗಿದೆ. ತಾಯಿಯನ್ನು ಕಡೆಗಣಿಸುವ ಪ್ರತಿಯೊಬ್ಬ ಮಗನಿಗೂ ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಲಿ.</p>
<p>The post <a href="https://samyuktakarnataka.in/districts/belagavi/belagavi-sons-refuse-mothers-last-rites-humanity-shame/">ಹೆತ್ತವ್ವನ ಅಂತ್ಯ ಸಂಸ್ಕಾರಕ್ಕೆ ಕರೆದ್ರೆ ನಾವೀಗ ತುಂಬಾ ಬ್ಯುಸಿ ಎಂದ ಇಬ್ಬರು ಮಕ್ಕಳು; ಕರ್ನಾಟಕದಲ್ಲೇ ಘೋರ ಘಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
