Home News ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ ಎಚ್ಚರಿಕೆ ಸಂದೇಶ

ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ ಎಚ್ಚರಿಕೆ ಸಂದೇಶ

ಯೋಧರನ್ನು ಭೇಟಿಯಾದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಶ್ರೀನಗರ: ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಅಮಾಯಕ ಜನರನ್ನು ಅವರ ‘ಧರ್ಮ’ ಕೇಳುವ ಮೂಲಕ ಕೊಂದರು. ಅದರ ನಂತರ ಭಾರತಿಯ ಯೋಧರು ಭಯೋತ್ಪಾದಕರನ್ನು ಅವರ ‘ಕರ್ಮ’ಗಳನ್ನು ನೋಡಿ ಹೊಡೆದುಹಾಕಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ
ಅಪರೇಷನ್ ಸಿಂಧೂರ ಯಶಸ್ವಿ ನಂತರ ಜಮ್ಮುಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿ ಯೋಧರಿಗೆ ಕೃತಜ್ಞತೆ ಸಲ್ಲಿಸಿ ಸೇನಾ ಕಚೇರಿಯಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿ ಉಗ್ರರು ಅಮಾಯಕರನ್ನು ಅವರ ‘ಧರ್ಮ’ ನೋಡಿ ಕೊಂದರು, ಇದು ಪಾಕಿಸ್ತಾನದ ‘ಕರ್ಮ’ವಾಗಿತ್ತು. ನಾವು ಅವರ ‘ಕರ್ಮ’ ನೋಡಿ ಅವರನ್ನು ನಿರ್ಮೂಲನೆ ಮಾಡಿದ್ದೇವೆ, ಇದು ನಮ್ಮ ‘ಭಾರತೀಯ ಧರ್ಮ’ವಾಗಿದೆ ಎಂದರು. ಪಹಲ್ಗಾಮ್‌ನಲ್ಲಿ ದಾಳಿ ಮಾಡಿದವರಿಗೆ ತಕ್ಕ ಶಾಸ್ತಿ ಆಗಿದೆ. ಪಾಕ್‌ಗೆ ಹಾಗೂ ಉಗ್ರರಿಗೆ ಕಠಿಣ ಸಂದೇಶ ರವಾನೆಯಾಗಿದೆ. ಉಗ್ರರ ದಾಳಿಯನ್ನ ಇಡೀ ವಿಶ್ವವೇ ಖಂಡಿಸಿದೆ. ಭಾರತ ಶಾಂತಿ ಪ್ರಿಯ ದೇಶ ಎಂಬುದು ಜಗತ್ತಿಗೆ ಗೊತ್ತಿದೆ. ಆದರೆ ಭಾರತೀಯರ ತಂಟೆಗೆ ಬಂದರೆ ಶಿಕ್ಷೆ ಘೋರವಾಗಿರುತ್ತದೆ. ಮಣ್ಣಲ್ಲಿ ಹೂತು ಹಾಕುತ್ತೇವೆ. ‘ಆಪರೇಷನ್ ಸಿಂಧೂರ್’ ಕೇವಲ ಹೆಸರಲ್ಲ, ‘ಆಪರೇಷನ್ ಸಿಂಧೂರ್’ ಎಚ್ಚರಿಕೆಯ ಸಂದೇಶವಾಗಿದೆ,ದೇಶದ ಜನರ ಪರವಾಗಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Exit mobile version