Home ತಾಜಾ ಸುದ್ದಿ ಆದಿವಾಸಿ ಅರ್ಥ ತಿಳಿಸಿದ ರಾಹುಲ್

ಆದಿವಾಸಿ ಅರ್ಥ ತಿಳಿಸಿದ ರಾಹುಲ್

0

ಮಹಾರಾಷ್ಟ್ರ: ಆದಿವಾಸಿ ಹಾಗೂ ವನವಾಸಿ ವ್ಯತ್ಯಾಸ್‌ ನಿಮಗೆ ಗೊತ್ತಾ.. ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ನಂದೂರ್‌ನಲ್ಲಿ ‘ಆದಿವಾಸಿ ನ್ಯಾಯ ಸಮ್ಮೇಳನದಲ್ಲಿ’ ಭಾಗವಹಿಸಿ ಮಾತಾನಾಡಿರುವ ಅವರು ‘ವನವಾಸಿ’ ಮತ್ತು ‘ಆದಿವಾಸಿ’ ನಡುವಿನ ವ್ಯತ್ಯಾಸವೇನೆಂದರೆ, ‘ಆದಿವಾಸಿ’ ಪದದೊಂದಿಗೆ, ನೆಲ, ಜಲ ಮತ್ತು ಕಾಡಿನ ಹಕ್ಕನ್ನು ಜೋಡಿಸಲಾಗಿದೆ, ಆದರೆ ‘ವನವಾಸಿ’ಯೊಂದಿಗೆ ಅಂತಹ ಯಾವುದೇ ಹಕ್ಕುಗಳಿಲ್ಲ. ಅದಕ್ಕಾಗಿಯೇ ಬಿಜೆಪಿ ನಿಮ್ಮನ್ನು ವನವಾಸಿ ಎಂದು ಕರೆಯುತ್ತದೆ. ಮತ್ತು ನಾವು (ಕಾಂಗ್ರೆಸ್) ‘ಆದಿವಾಸಿ’,” ಎಂದು ಕರೆಯುವುದಾಗಿ ಹೇಳಿದರು, ಬುಡಕಟ್ಟು ಜನರು ಭಾರತದ ಮೊದಲ ಮಾಲೀಕರು. ದೇಶದಲ್ಲಿ ನೀರು, ಕಾಡು, ನೆಲ, ಸಂಪತ್ತು ಏನೇ ಇದ್ದರೂ ಆದಿವಾಸಿಗಳೇ ಅದರ ನಿಜವಾದ ಒಡೆಯರು. ನೀರು, ಅರಣ್ಯ ಮತ್ತು ಭೂಮಿಯ ಹಕ್ಕು ಬುಡಕಟ್ಟು ಪದದೊಂದಿಗೆ ಸಂಬಂಧಿಸಿದೆ. ಆದರೆ ಅರಣ್ಯವಾಸಿ ಪದಕ್ಕೆ ಯಾವುದೇ ಅಧಿಕಾರವಿಲ್ಲ. ಅದಕ್ಕಾಗಿಯೇ ನಾವು ನಿಮ್ಮನ್ನು ಬುಡಕಟ್ಟು(ಆದಿವಾಸಿ) ಎಂದು ಕರೆಯುತ್ತೇವೆ ಮತ್ತು ಬಿಜೆಪಿ ನಿಮ್ಮನ್ನು ಅರಣ್ಯವಾಸಿ ಎಂದು ಕರೆಯುತ್ತದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ಮತ್ತು ಆರ್ಥಿಕ, ಆರ್ಥಿಕ ಸಮೀಕ್ಷೆ ನಡೆಸಲಿದೆ ಎಂದು ಮಹಾರಾಷ್ಟ್ರದ ಬುಡಕಟ್ಟು ರ್ಯಾಲಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಆದಿವಾಸಿ ಅರ್ಥ ತಿಳಿಸಿದ ರಾಹುಲ್ ಗಾಂಧಿ