ದೇವಸ್ಥಾನದಿಂದ ಅಪಹರಣಗೊಂಡ ಹೋರಿ 24 ಗಂಟೆಯೊಳಗೆ ಪತ್ತೆ

ದಾವಣಗೆರೆ: ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಕಳ್ಳತನವಾಗಿದ್ದ ಗೂಳಿ (ಹೋರಿ)ಯನ್ನು ಬಸವಾಪಟ್ಟಣ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೂ. 30ರ ರಾತ್ರಿ ದುಷ್ಕರ್ಮಿಗಳು ಬೊಲೆರೋ ಪಿಕ್‌ಅಪ್ ವಾಹನದಲ್ಲಿ ಬಂದು ದೇವಸ್ಥಾನಕ್ಕೆ ಸೇರಿದ ಗೂಳಿ(ಹೋರಿ)ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್ … Continue reading ದೇವಸ್ಥಾನದಿಂದ ಅಪಹರಣಗೊಂಡ ಹೋರಿ 24 ಗಂಟೆಯೊಳಗೆ ಪತ್ತೆ