ನ್ಯಾಯಕ್ಕಾಗಿ ತಾಯಿಯ ಸಮಾಧಿ ಅಗೆದ ಮಕ್ಕಳು; ಮರು ಮರಣೋತ್ತರ ಪರೀಕ್ಷೆಗೆ ಬೈಕ್‌ನಲ್ಲಿ ಶವ ಸಾಗಾಟದ ವೇಳೆ ಅಪಘಾತ‌

ದಾವಣಗೆರೆ: ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಮಕ್ಕಳು ಸಮಾಧಿಯಿಂದ ಹೊರತೆಗೆದು ಬೈಕ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹರಿಹರ ತಾಲೂಕಿನ ಆದಾಪುರ ಗ್ರಾಮದ ಈರಮ್ಮ ಎಂಬ ಮಹಿಳೆ ಕಳೆದ ಏಪ್ರಿಲ್ 29ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಕ್ಕಳಾದ ಮಂಜುನಾಥ್ ಹಾಗೂ ವೆಂಕಟೇಶ್, 11 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ … Continue reading ನ್ಯಾಯಕ್ಕಾಗಿ ತಾಯಿಯ ಸಮಾಧಿ ಅಗೆದ ಮಕ್ಕಳು; ಮರು ಮರಣೋತ್ತರ ಪರೀಕ್ಷೆಗೆ ಬೈಕ್‌ನಲ್ಲಿ ಶವ ಸಾಗಾಟದ ವೇಳೆ ಅಪಘಾತ‌