ನಾಟಕದ ಮೂಲಕ ಸಮಾನತೆಯ ಸಂದೇಶ ಸಾರಿದ ‘ನನ್ನ ಅಂಬೇಡ್ಕರ್’

ಬೆಂಗಳೂರು: ನಗರದ ಮಲ್ಲತಹಳ್ಳಿಯ ಕಲಾಗ್ರಾಮ ಸಮುಚ್ಚಯ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಮಾಸಿಕ ನಾಟಕ ಪ್ರದರ್ಶನ ಸರಣಿಯ ಅಂಗವಾಗಿ ಜುಲೈ 18ರಂದು ಬೆಳಗಾವಿಯ ಆಶಾದೀಪ ಸಮುದಾಯ ಕಲಾಕೇಂದ್ರದ ವತಿಯಿಂದ ಕೋಟಗಾನಹಳ್ಳಿ ರಾಮಯ್ಯ ಅವರ ‘ನನ್ನ ಅಂಬೇಡ್ಕರ್’ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಚಿಂತಕ ಹಾಗೂ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, “ನಮ್ಮನ್ನು ಉಳಿಸಬಲ್ಲ, ಕಾಪಾಡಬಲ್ಲ ಅತ್ಯಂತ ಶ್ರೇಷ್ಠವಾದ ಧರ್ಮಗ್ರಂಥ ಯಾವುದಾದರೂ ಇದ್ದರೆ ಅದು ಭಾರತದ ಸಂವಿಧಾನ” ಎಂದು ಹೇಳಿದರು. ಕರ್ನಾಟಕ ನಾಟಕ … Continue reading ನಾಟಕದ ಮೂಲಕ ಸಮಾನತೆಯ ಸಂದೇಶ ಸಾರಿದ ‘ನನ್ನ ಅಂಬೇಡ್ಕರ್’