Home ನಮ್ಮ ಜಿಲ್ಲೆ ಬೆಂಗಳೂರು Bengaluru Suburban Rail: ಭೂ ಸ್ವಾಧೀನ ಕುರಿತು ಮಹತ್ವದ ಅಪ್‌ಡೇಟ್

Bengaluru Suburban Rail: ಭೂ ಸ್ವಾಧೀನ ಕುರಿತು ಮಹತ್ವದ ಅಪ್‌ಡೇಟ್

0
Bengaluru Suburban Rail: ಭೂ ಸ್ವಾಧೀನ ಕುರಿತು ಮಹತ್ವದ ಅಪ್‌ಡೇಟ್

Bengaluru Suburban Rail. ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಜಾರಿಗೊಳಿಸುತ್ತಿದೆ. ಆದರೆ ಭೂ ಸ್ವಾಧೀನದ ವಿಚಾರಕ್ಕೆ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಕರ್ನಾಟಕ ಸರ್ಕಾರ ಈ ಯೋಜನೆ ಅನುಷ್ಠಾನಕ್ಕಾಗಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಸ್ಥಾಪನೆ ಮಾಡಿದೆ. ಈಗ ರೈಲು ಯೋಜನೆಯ ಭೂ ಸ್ವಾಧೀನ ಕುರಿತು ಅಪ್‌ಡೇಟ್ ಒಂದಿದೆ.

ಹೊಸ ಅಪ್‌ಡೇಟ್‌ ಏನು?: ದಿನಾಂಕ 20.09.2025ರಂದು ಬೆಂಗಳೂರು ಉಪನಗರ ರೈಲು ಯೋಜನೆ ಕಾರಿಡಾರ್ -2ರ ನಿರ್ಮಾಣಕ್ಕಾಗಿ ಯಲಹಂಕ ತಾಲ್ಲೂಕು, ಪೀಣ್ಯ ಪ್ಲಾಂಟೇಶನ್ ಗ್ರಾಮದ ಸ.ನಂ 2ಕ್ಕೆ ಹೊಂದಿಕೊಂಡಂತೆ ಇರುವ ಸರಹದ್ದಿನ ರೈಲ್ವೆ ರಸ್ತೆ ಜಮೀನಿನ ಒತ್ತುವರಿ ತೆರವುಗೊಳಿಸಿರುವ ಕುರಿತು ಅಪ್‌ಡೇಟ್ ನೀಡಲಾಗಿದೆ.

ಬೆಂಗಳೂರು ಉಪನಗರ ಯೋಜನೆ ಕಾರಿಡಾರ್ -2ಕ್ಕೆ ಸಂಬಂಧಿಸಿದಂತೆ ಅಲೈನ್‌ಮೆಂಟ್‌ಗೆ ಅವಶ್ಯಕತೆಯಿರುವ ಬೆಂಗಳೂರು ಉತ್ತರ ತಾಲ್ಲೂಕು ಮ್ಯಾಕಲ ಚನ್ನೇನಹಳ್ಳಿ, ಗ್ರಾಮ ಹಾಗೂ ಯಲಹಂಕ ತಾಲ್ಲೂಕು, ಪೀಣ್ಯ ಪ್ಲಾಂಟೇಶನ್ ಗ್ರಾಮದ ಗಡಿ ಮಧ್ಯದಲ್ಲಿ 00-20 ಗುಂಟೆ ಜಮೀನಿನ ಸರಹದ್ದಿನಲ್ಲಿ ರೈಲ್ವೆ ರಸ್ತೆಗೆ ಸೇರಿದ ಸುಮಾರು 500 ಮೀಟರ್ ಖರಾಬು ಜಮೀನು ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರ ಮೌಲ್ಯವು ಅಂದಾಜು 40 ಕೋಟಿ ಬೆಲೆಬಾಳುವಂತಾದ್ದಾಗಿರುತ್ತದೆ ಎಂದು ಹೇಳಿದೆ.

ಈ ಸದರಿ ಖರಾಬು ಜಮೀನಿಗೆ ಹೊಂದಿಕೊಂಡಿರುವ ಜಾಗವನ್ನು ಮೆ|| ಬಾಗಮನೆ ಡೆವಲಪರ್ಸ್‌ರವರು ಒತ್ತುವರಿ ಮಾಡಿದ್ದು, ಸ್ಥಳ ಪರಿಶೀಲನೆ ಸಮಯದಲ್ಲಿ ಸದರಿ ಜಾಗವು ರೈಲ್ವೆ ಸರಹದ್ದಿನ ರಸ್ತೆಗೆ ಸೇರಿದ ಜಮೀನಾಗಿರುವುದುದೆಂದು ಭೂದಾಖಲೆಗಳ ಸಹಾಯಕ ನಿರ್ದೇಶಕರು ಬೆಂಗಳೂರು ಉತ್ತರ ತಾಲ್ಲೂಕು ಹಾಗೂ ಯಲಹಂಕ ತಾಲ್ಲೂಕು ರವರು ದೃಢೀಕರಿಸಿರುತ್ತಾರೆ.

ಈ ಸಮಯದಲ್ಲಿ ಮೆ|| ಬಾಗಮನೆ ಡೆವಲಪರ್ಸ್‌ರವರ ಪ್ರತಿನಿಧಿಗಳು ಸಹ ಹಾಜರಿದ್ದು ಅವರಿಗೆ ಒತ್ತುವರಿ ಬಗ್ಗೆ ತಿಳುವಳಿಕೆ ನೀಡಿ, ಒತ್ತುವರಿಯನ್ನು ತೆರವುಗೊಳಿಸಿ, ಬೌಂಡರಿ ಕಲ್ಲುಗಳನ್ನು ಕೆ- ರೈಡ್ ಮತ್ತು ರೈಲ್ವೆ ಇಲಾಖೆಯಿಂದ ಅಳವಡಿಸಿ, ಜಮೀನನ್ನು ಕೆ-ರೆಡ್ ಸಂಸ್ಥೆಗೆ ಕಾಮಗಾರಿ ಕೈಗೊಳ್ಳಲು ಹಸ್ತಾಂತರ ಪಡೆಯಲಾಯಿತು.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ದಿನಾಂಕ 20/09/2025 ರಂದು ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸಮಯದಲ್ಲಿ ವಿಶೇಷ ಜಿಲ್ಲಾಧಿಕಾರಿ ಕೆ-ರೈಡ್, ತಹಶೀಲ್ದಾರ್ ಕೆ-ರೈಡ್, ತಹಶೀಲ್ದಾರ್, ಯಲಹಂಕ ತಾಲ್ಲೂಕು ಮತ್ತು ಬೆಂಗಳೂರು ಉತ್ತರ ತಾಲ್ಲೂಕು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಬೆಂಗಳೂರು ಉತ್ತರ ತಾಲ್ಲೂಕು ಹಾಗೂ ಯಲಹಂಕ ತಾಲ್ಲೂಕು, ಪ್ರಧಾನ ವ್ಯವಸ್ಥಾಪಕರು, ಕಾರಿಡಾರ್ -2 ಕೆ-ರೈಡ್, ರೈಲ್ವೆ ಇಲಾಖೆಯ ಸಿಬ್ಬಂದಿ ಹಾಗೂ ಜಾಲಹಳ್ಳಿ ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಇವರುಗಳ ಸಹಯೋಗದೊಂದಿಗೆ ತೆರವು ಕಾರ್ಯವನ್ನು ಪೂರ್ಣಗೊಳಿಸಲಾಯಿತು ಎಂದು ತಿಳಿಸಿದೆ.

ಸಬ್ ಅರ್ಬನ್ ರೈಲು ಯೋಜನೆಯಲ್ಲಿ 4 ಕಾರಿಡಾರ್ ಇದೆ. ಕಾರಿಡಾರ್-2 ‘ಮಲ್ಲಿಗೆ’ ಎಂದು ನಾಮಕರಣ ಮಾಡಿದ್ದು, ಇದು ಬೈಯಪ್ಪನಹಳ್ಳಿ-ಚಿಕ್ಕಬಣಾವರ ನಡುವೆ ಸಂಪರ್ಕವನ್ನು ಕಲ್ಪಿಸುತ್ತಿದೆ. 25 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 12 ನಿಲ್ದಾಣಗಳು ಬರುತ್ತವೆ.

LEAVE A REPLY

Please enter your comment!
Please enter your name here