<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>#BangaloreRain Archives - Samyukta Karnataka</title>
	<atom:link href="https://samyuktakarnataka.in/tag/bangalorerain/feed/" rel="self" type="application/rss+xml" />
	<link>https://samyuktakarnataka.in/tag/bangalorerain/</link>
	<description>News that connects you to Karnataka since 1921</description>
	<lastBuildDate>Wed, 27 May 2026 09:53:42 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>#BangaloreRain Archives - Samyukta Karnataka</title>
	<link>https://samyuktakarnataka.in/tag/bangalorerain/</link>
	<width>32</width>
	<height>32</height>
</image> 
	<item>
		<title>ಬೆಂಗಳೂರು: ಮುಂದುವರೆದ ಸಿಡಿಲು, ಮಿಂಚು ಸಮೇತ ಮಳೆ; ಇನ್ನೂ ಎಷ್ಟು ದಿನ?</title>
		<link>https://samyuktakarnataka.in/districts/bengaluru/bengaluru-thunderstorms-lightning-and-rain-continue-how-many-more-days/</link>
		
		<dc:creator><![CDATA[Samyuktha Karnataka]]></dc:creator>
		<pubDate>Wed, 27 May 2026 09:53:41 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[#BangaloreRain]]></category>
		<category><![CDATA[Bangalore City]]></category>
		<category><![CDATA[Bengaluru]]></category>
		<category><![CDATA[rain]]></category>
		<category><![CDATA[raineydays]]></category>
		<category><![CDATA[Rainincedent]]></category>
		<guid isPermaLink="false">https://samyuktakarnataka.in/?p=99107</guid>

					<description><![CDATA[<p>ಬೆಂಗಳೂರು: ಮಳೆ ಹೆಚ್ಚಾಗುತ್ತಿರುವುದರಿಂದ, ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಅಪಾಯಗಳು ಉಂಟಗುತ್ತಲೇ ಇದೆ. ಹಾಗೇ ಈ ಮಳೆಯ ಆರ್ಭಟ ಎಲ್ಲಿಯವರೆಗೂ ಮುಂದುವರಿಯಲಿದೆ. ಅಲ್ಲದೇ.. ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಭರ್ಜರಿ ಮಳೆಯ ಮುನ್ಸೂಚನೆ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರತ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿಗೆ ‘ಹಳದಿ ಎಚ್ಚರಿಕೆ’ ಘೋಷಿಸಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ನಿನ್ನೆ ಸಂಜೆಯಷ್ಟೇ ರಾಜಧಾನಿ ಬೆಂಗಳೂರು ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ [&#8230;]</p>
<p>The post <a href="https://samyuktakarnataka.in/districts/bengaluru/bengaluru-thunderstorms-lightning-and-rain-continue-how-many-more-days/">ಬೆಂಗಳೂರು: ಮುಂದುವರೆದ ಸಿಡಿಲು, ಮಿಂಚು ಸಮೇತ ಮಳೆ; ಇನ್ನೂ ಎಷ್ಟು ದಿನ?</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಬೆಂಗಳೂರು: ಮಳೆ ಹೆಚ್ಚಾಗುತ್ತಿರುವುದರಿಂದ, ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಅಪಾಯಗಳು ಉಂಟಗುತ್ತಲೇ ಇದೆ. ಹಾಗೇ ಈ ಮಳೆಯ ಆರ್ಭಟ ಎಲ್ಲಿಯವರೆಗೂ ಮುಂದುವರಿಯಲಿದೆ. ಅಲ್ಲದೇ.. ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಭರ್ಜರಿ ಮಳೆಯ ಮುನ್ಸೂಚನೆ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರತ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿಗೆ ‘ಹಳದಿ ಎಚ್ಚರಿಕೆ’ ಘೋಷಿಸಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ</p>



<p class="wp-block-paragraph">ನಿನ್ನೆ ಸಂಜೆಯಷ್ಟೇ ರಾಜಧಾನಿ ಬೆಂಗಳೂರು ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಸುರಿದ ಭಾರೀ ಮಳೆಗೆ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಇದರ ಬೆನ್ನಲ್ಲೇ ಐಎಂಡಿ ಮತ್ತೊಂದು ಎಚ್ಚರಿಕೆ ನೀಡಿದ್ದು, ಇಂದು ಸಹ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.</p>



<p class="wp-block-paragraph">ಕೇವಲ ಬೆಂಗಳೂರು ಅಷ್ಟೇ ಅಲ್ಲ.. ರಾಜ್ಯದ ಒಳನಾಡಿನಲ್ಲೂ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಇಂದು ತುಮಕೂರು, ಚಿಕ್ಕಬಳ್ಳಾಪುರ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ. ಮೇ ಮತ್ತು 24 ರಂದು ಬಾಗಲಕೋಟೆ, ಕೊಪ್ಪಳ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಜಿಟಿಜಿಟಿ ಮಳೆಯಾಗಲಿದೆ.</p>



<p class="wp-block-paragraph">ಇನ್ನೂ ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಕೊಂಚ ಕಡಿಮೆಯಾಗಲಿದ್ದರೂ, ಕರಾವಳಿ ಮತ್ತು ಮಲೆನಾಡಿನ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ.</p>



<p class="wp-block-paragraph">ಬಂಗಾಳಕೊಲ್ಲಿಯಲ್ಲಿ ನೈಋತ್ಯ ಮುಂಗಾರು ಮುನ್ನಡೆಯುತ್ತಿರುವುದರಿಂದ, ಮುಂದಿನ ವಾರ ಇಡೀ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ ಸುರಿದರೂ ಸಹ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ, ಬಿಸಿಲು ಮತ್ತು ಸೆಕೆ ಮುಂದುವರಿಯಲಿದೆ. ಹೀಗಾಗಿ ಸಾರ್ವಜನಿಕರು ಹೊರಗೆ ಹೋಗುವಾಗ ಕೊಡೆ ಹಿಡಿಯುವುದನ್ನು ಮರೆಯಬೇಡಿ ಸುರಕ್ಷಿತವಾಗಿರಿ.</p>
<p>The post <a href="https://samyuktakarnataka.in/districts/bengaluru/bengaluru-thunderstorms-lightning-and-rain-continue-how-many-more-days/">ಬೆಂಗಳೂರು: ಮುಂದುವರೆದ ಸಿಡಿಲು, ಮಿಂಚು ಸಮೇತ ಮಳೆ; ಇನ್ನೂ ಎಷ್ಟು ದಿನ?</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಬೆಂಗಳೂರು ಈಗ &#8216;ಜಲ&#8217;ನಗರ; ಮತ್ತೆ ಅಪ್ಪಳಿಸಲಿದ್ದಾನೆ ವರುಣ! ಇಂದು ಹೇಗಿರಲಿದೆ ಮಳೆ ಆರ್ಭಟ?</title>
		<link>https://samyuktakarnataka.in/districts/bengaluru/bengaluru-rain-deaths-destruction-weather-update-april-2026/</link>
		
		<dc:creator><![CDATA[Samyuktha Karnataka]]></dc:creator>
		<pubDate>Thu, 30 Apr 2026 11:50:04 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[#BangaloreRain]]></category>
		<category><![CDATA[#BengaluruFlood]]></category>
		<category><![CDATA[#NammaBengaluru]]></category>
		<category><![CDATA[#RainHavoc]]></category>
		<category><![CDATA[#WeatherUpdate]]></category>
		<guid isPermaLink="false">https://samyuktakarnataka.in/?p=96977</guid>

					<description><![CDATA[<p>ಕಳೆದ ಕೆಲವು ವಾರಗಳಿಂದ ಸುಡುತ್ತಿದ್ದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ಬುಧವಾರ ಸುರಿದ ಮಳೆ ತಂಪು ನೀಡುವ ಬದಲು ಭೀತಿಯನ್ನು ತಂದೊಡ್ಡಿದೆ. ಏಪ್ರಿಲ್ 29ರಂದು ಅಬ್ಬರಿಸಿದ ವರುಣ ಕೇವಲ ಎರಡು ಗಂಟೆಗಳಲ್ಲಿ ಇಡೀ ನಗರದ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾನೆ. ಬಿಸಿಲಿನಿಂದ ಮುಕ್ತಿ ಸಿಕ್ಕಿದ್ದರೂ, ನಗರಕ್ಕೆ ತಟ್ಟಿದ ಮಳೆಯ ಬಿಸಿ ಅಕ್ಷರಶಃ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ದುರದೃಷ್ಟವಶಾತ್, ಈ ಭೀಕರ ಮಳೆಗೆ ಒಟ್ಟು 9 ಅಮಾಯಕ ಜೀವಗಳು ಬಲಿಯಾಗಿವೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ [&#8230;]</p>
<p>The post <a href="https://samyuktakarnataka.in/districts/bengaluru/bengaluru-rain-deaths-destruction-weather-update-april-2026/">ಬೆಂಗಳೂರು ಈಗ &#8216;ಜಲ&#8217;ನಗರ; ಮತ್ತೆ ಅಪ್ಪಳಿಸಲಿದ್ದಾನೆ ವರುಣ! ಇಂದು ಹೇಗಿರಲಿದೆ ಮಳೆ ಆರ್ಭಟ?</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಕಳೆದ ಕೆಲವು ವಾರಗಳಿಂದ ಸುಡುತ್ತಿದ್ದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ಬುಧವಾರ ಸುರಿದ ಮಳೆ ತಂಪು ನೀಡುವ ಬದಲು ಭೀತಿಯನ್ನು ತಂದೊಡ್ಡಿದೆ. ಏಪ್ರಿಲ್ 29ರಂದು ಅಬ್ಬರಿಸಿದ ವರುಣ ಕೇವಲ ಎರಡು ಗಂಟೆಗಳಲ್ಲಿ ಇಡೀ ನಗರದ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾನೆ. ಬಿಸಿಲಿನಿಂದ ಮುಕ್ತಿ ಸಿಕ್ಕಿದ್ದರೂ, ನಗರಕ್ಕೆ ತಟ್ಟಿದ ಮಳೆಯ ಬಿಸಿ ಅಕ್ಷರಶಃ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ.</p>



<p class="wp-block-paragraph">ದುರದೃಷ್ಟವಶಾತ್, ಈ ಭೀಕರ ಮಳೆಗೆ ಒಟ್ಟು 9 ಅಮಾಯಕ ಜೀವಗಳು ಬಲಿಯಾಗಿವೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿರುವುದು ಅತ್ಯಂತ ಕರುಣಾಜನಕ ಸಂಗತಿ. ನಗರದ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹೆಮ್ಮರಗಳು ಧರೆಗುರುಳಿದ್ದು, ವಿದ್ಯುತ್ ಸ್ಪರ್ಶದಿಂದ ಸಂಭವಿಸಿದ ಅವಘಡಗಳು ನಾಗರಿಕರನ್ನು ಭೀತಿಯಲ್ಲಿರಿಸಿವೆ.</p>



<p class="wp-block-paragraph">ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನ ಸೌಧ ಕೂಡ ಮಳೆ ಅಬ್ಬರಕ್ಕೆ ನಲುಗಿದೆ. ವಿಧಾನ ಸೌಧದ ಕಾರಿಡಾರ್‌ಗಳು ಮತ್ತು ಕಚೇರಿಗಳಿಗೆ ಮಳೆ ನೀರು ನುಗ್ಗಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಚೇರಿಯೂ ಜಲಾವೃತಗೊಂಡಿರುವುದು ನಗರದ ಮೂಲಸೌಕರ್ಯದ ದುಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ರಿಚ್‌ಮಂಡ್ ಟೌನ್ ಮತ್ತು ಶಾಂತಿನಗರದಂತಹ ತಗ್ಗು ಪ್ರದೇಶಗಳು ದ್ವೀಪದಂತಾಗಿದ್ದು, ಸೊಂಟದ ಮಟ್ಟಕ್ಕೆ ನಿಂತಿದ್ದ ನೀರಿನಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಸಿಲುಕಿ ಪರದಾಡಿದ್ದಾರೆ. ಮೆಟ್ರೋ ಸೇವೆಯಲ್ಲೂ ವ್ಯತ್ಯಯ ಕಂಡುಬಂದಿದ್ದು, ಸಂಜೆ ಕಚೇರಿಯಿಂದ ಮನೆಗೆ ಮರಳುವವರು ಹೈರಾಣಾಗಿದ್ದಾರೆ.</p>



<p class="wp-block-paragraph">ಈ ಭೀತಿಯ ನಡುವೆಯೇ ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತಷ್ಟು ಆತಂಕ ಮೂಡಿಸಿದೆ. ಇಂದು ಕೂಡ ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಾಹ್ನದ ನಂತರ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ದಕ್ಷಿಣ ಬೆಂಗಳೂರಿನ ಜೆ.ಪಿ. ನಗರ, ಜಯನಗರ, ಬನ್ನೇರುಘಟ್ಟ ರಸ್ತೆ ಮತ್ತು ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್, ಮಾರತಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.</p>



<p class="wp-block-paragraph">ಸಾರ್ವಜನಿಕರ ಸುರಕ್ಷತೆಗಾಗಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳಿಂದ ದೂರವಿರಲು, ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸದಂತೆ ಮತ್ತು ತಗ್ಗು ಪ್ರದೇಶಗಳಲ್ಲಿರುವ ಜನರು ಜಾಗರೂಕರಾಗಿರಲು ತಿಳಿಸಲಾಗಿದೆ. ಬೆಂಗಳೂರಿನ ಈ ಅನಿರೀಕ್ಷಿತ ಮಳೆ ಕೇವಲ ಹವಾಮಾನದ ಬದಲಾವಣೆಯಲ್ಲ, ಬದಲಾಗಿ ನಗರದ ಹದಗೆಟ್ಟ ಚರಂಡಿ ವ್ಯವಸ್ಥೆ ಮತ್ತು ಅವೈಜ್ಞಾನಿಕ ನಗರೀಕರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸದ್ಯಕ್ಕೆ ನಗರದ ಜನತೆ ವರುಣನ ಮುಂದಿನ ಅಬ್ಬರವನ್ನು ಎದುರಿಸಲು ಆತಂಕದಿಂದಲೇ ಕಾಯುತ್ತಿದ್ದಾರೆ.</p>
<p>The post <a href="https://samyuktakarnataka.in/districts/bengaluru/bengaluru-rain-deaths-destruction-weather-update-april-2026/">ಬೆಂಗಳೂರು ಈಗ &#8216;ಜಲ&#8217;ನಗರ; ಮತ್ತೆ ಅಪ್ಪಳಿಸಲಿದ್ದಾನೆ ವರುಣ! ಇಂದು ಹೇಗಿರಲಿದೆ ಮಳೆ ಆರ್ಭಟ?</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
