ಸಮುದ್ರದಲ್ಲಿ ಮುಳುಗಿದ ಬೋಟ್: 22 ಮೀನುಗಾರರ ರಕ್ಷಣೆ

ಪಣಜಿ: ಕಾರವಾರದ ಮೀನುಗಾರರಿಗೆ ಸೇರಿದ ಪರ್ಷಿಯನ್ ಮಾದರಿಯ ಮೀನುಗಾರಿಕಾ ಬೋಟ್ ಆಳ ಸಮುದ್ರ ಮೀನುಗಾರಿಕೆ ಕಾರ್ಯಾಚರಣೆಯಿಂದ ಹಿಂತಿರುಗುತ್ತಿದ್ದಾಗ ಗೋವಾ ಕರಾವಳಿಯಲ್ಲಿ ಮುಳುಗಿದ್ದು, ಬೋಟ್‌ನಲ್ಲಿದ್ದ 22 ಮೀನುಗಾರರನ್ನು ಪಾರು ಮಾಡಲಾಗಿದೆ. ಬೋಟ್ ಸಂಕಷ್ಟದಲ್ಲಿ ಸಿಲುಕಿರುವುದನ್ನು ಗಮನಿಸಿದ ಹತ್ತಿರದ ಮೀನುಗಾರಿಕಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅದರಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದರು. ಗೋವಾದ ಮಡಗಾಂವ ಬೇತುಲ್ ಕರಾವಳಿ ಪ್ರದೇಶದ ಬಳಿ ಈ ಘಟನೆ ಸಂಭವಿಸಿದೆ. ಮೂಲಗಳ ಪ್ರಕಾರ, ಕಾರವಾರದ ಮುದ್ಗಾದ ದಿನೇಶ್ ಕಾಂಚನ್ ಒಡೆತನದ “ಶ್ರೀ ಅಮ್ಮ” ಎಂಬ … Continue reading ಸಮುದ್ರದಲ್ಲಿ ಮುಳುಗಿದ ಬೋಟ್: 22 ಮೀನುಗಾರರ ರಕ್ಷಣೆ