ಬಂಗಾರ ಸಿಗದ್ದಕ್ಕೆ ಸಿಲಿಂಡರ್ ಹೊತ್ತೊಯ್ದ ಕಳ್ಳರು

ಕಾರವಾರ: ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ಕಳ್ಳರು ಬಂಗಾರ ಸಿಗದ್ದಕ್ಕೆ ಅಡುಗೆ ಅನಿಲದ ತುಂಬಿದ ಸಿಲಿಂಡರ್ ಕದ್ದೊಯ್ದ ಘಟನೆ ತಾಲೂಕಿನ ಅಮುದಳ್ಳಿ ಗ್ರಾಮದಲ್ಲಿ ನಡೆದಿದೆ. ರೇಷ್ಮಾ ನಾಯ್ಕ ಎಂಬುವವರ ಮನೆಯಲ್ಲಿ ಈ ವಿಚಿತ್ರ ಕಳ್ಳತನ ನಡೆದಿದೆ. ಮನೆಯವರು ಎರಡು ದಿನಗಳ ಕಾಲ ಹೊರಗಡೆ ತೆರಳಿದ್ದ ಸಂದರ್ಭವನ್ನು ಗಮನಿಸಿ ಸಂಚು ರೂಪಿಸಿದ್ದ ದುಷ್ಕರ್ಮಿಗಳು, ಮನೆಯ ಸೆಂಟ್ರಲ್ ಲಾಕ್ ಮುರಿದು ಒಳನುಗ್ಗಿದ್ದಾರೆ. ಹಣ ಹಾಗೂ ಬಂಗಾರಕ್ಕಾಗಿ ಇಡೀ ಮನೆಯನ್ನು ಜಾಲಾಡಿದ್ದಾರೆ. ಕಪಾಟು ಮತ್ತು ಲಾಕರ್ ಆಯ್ದು ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. … Continue reading ಬಂಗಾರ ಸಿಗದ್ದಕ್ಕೆ ಸಿಲಿಂಡರ್ ಹೊತ್ತೊಯ್ದ ಕಳ್ಳರು