ಗಣೇಶ ಮೂರ್ತಿ ತರಲು ಹೋದಾಗ ಅವಘಡ: ಯುವಕ ಸಾವು

ರಾಯಚೂರು: ಸಿರವಾರ ಸಮೀಪದ ಅತ್ತನೂರು ಗ್ರಾಮದ ಬಳಿ ಗಣೇಶ ಮೂರ್ತಿಯನ್ನು ತರುವ ವೇಳೆ ಮೂರ್ತಿಗೆ ವಿದ್ಯುತ್ ತಂತಿ ತಗುಲಿ ಮೂರ್ತಿ ಬಿದ್ದ ಪರಿಣಾಮವಾಗಿ ಸಿರವಾರ ಪಟ್ಟಣದ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಜರುಗಿದೆ. ಮೃತ ಯುವಕನನ್ನು ಸಿರವಾರ ಪಟ್ಟಣದ ವಿದ್ಯಾನಗರ ನಿವಾಸಿ ಪ್ರೇಮ ಸುಂದರ ಕೆಂಪು (26) ಎಂದು ಗುರುತಿಸಲಾಗಿದೆ. ಗಣೇಶೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿದ್ದ ಪಟ್ಟಣದ ಯುವಕರ ಬಳಗದಲ್ಲಿ ಈ ಸಾವಿನಿಂದ ಶೋಕದ ವಾತಾವರಣ ಆವರಿಸಿದೆ. ಹೈದರಾಬಾದ್‌ನಿಂದ ಗಣೇಶನ ಮೂರ್ತಿಯನ್ನು ವಾಹನದಲ್ಲಿ ಸಿರವಾರಕ್ಕೆ … Continue reading ಗಣೇಶ ಮೂರ್ತಿ ತರಲು ಹೋದಾಗ ಅವಘಡ: ಯುವಕ ಸಾವು