ನೈಋತ್ಯ ರೈಲ್ವೆ: 18 ವಿಶೇಷ ರೈಲುಗಳು ಖಾಯಂ
ಹುಬ್ಬಳ್ಳಿ: ನೈಋತ್ಯ ರೈಲ್ವೆಯ 18 ವಿಶೇಷ ರೈಲುಗಳನ್ನು ಮೇ 11ರಿಂದ ಖಾಯಂ ರೈಲುಗಳಾಗಿ ಪರಿವರ್ತಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹುಬ್ಬಳ್ಳಿ-ವಿಜಯಪುರ, ಬೆಂಗಳೂರು-ಚನ್ನಪಟ್ಟಣ, ಬೆಂಗಳೂರು-ಅಶೋಕಪುರಂ, ಯಶವಂತಪುರ-ತಾಳಗುಪ್ಪ ಸೇರಿದಂತೆ 18 ರೈಲುಗಳು ಹೊಸ ಸಂಖ್ಯೆಯೊಂದಿಗೆ ದೈನಂದಿನ ಸಂಚಾರ ಆರಂಭಿಸಲಿವೆ. ಸಮಯ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ವೇಳಾಪಟ್ಟಿಗೆ http://www.enquiry.indianrail.gov.in ಅಥವಾ 139ಗೆ ಕರೆ ಮಾಡಿ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
Copy and paste this URL into your WordPress site to embed
Copy and paste this code into your site to embed