ಬೆಳಗಾವಿಯಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸಿದ ಹಣಕಾಸು ವಂಚನೆ ಪ್ರಕರಣ

ಬೆಳಗಾವಿ: ಹೆಚ್ಚಿನ ಹಣದ ಆಸೆಗೆ ಬಲಿಯಾಗಿ ದುಡಿದಿದ್ದೆಲ್ಲವನ್ನೂ ಕಳೆದುಕೊಳ್ಳುತ್ತಿರುವ ಅನೇಕ ಪ್ರಸಂಗಗಳು ಆಗಾಗ ವರದಿಯಾಗುತ್ತಿದ್ದರೂ ಬೆಳಗಾವಿಯಲ್ಲಿ ಇಂತಹದೇ ಭಾರಿ ವಂಚನೆಯ ಪ್ರಕರಣವೀಗ ರಾಜ್ಯಾದ್ಯಂತ ಸುದ್ದಿ ಮಾಡಿದೆ. ಹೆಚ್ಚಿನ ಬಡ್ಡಿ ದರದ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚನೆ ಎಸಗಿದ್ದಾರೆಂಬ ಶಿವಂ ಅಸೋಸಿಯೇಟ್ಸ್ ಪ್ರಕರಣ ಈಗ ಬೆಳಗಾವಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕಾನೂನು ಕ್ರಮದ ಹಂತ ತಲುಪಿದೆ. ಸಂಸ್ಥೆ ನಡೆಸುತ್ತಿದ್ದ ಶಿವಾನಂದ ಎಸ್. ನೀಲಣ್ಣವರನನ್ನು ಮಾಳಮಾರುತಿ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಸಂಸ್ಥೆಗೆ ಅಗತ್ಯ ಲೈಸೆನ್ಸ್, ಆರ್‌ಬಿಐ … Continue reading ಬೆಳಗಾವಿಯಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸಿದ ಹಣಕಾಸು ವಂಚನೆ ಪ್ರಕರಣ