<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಬೆಂಗಳೂರು ಗ್ರಾಮಾಂತರ Archives - Samyukta Karnataka</title>
	<atom:link href="https://samyuktakarnataka.in/category/districts/bengaluru-rural/feed/" rel="self" type="application/rss+xml" />
	<link>https://samyuktakarnataka.in/category/districts/bengaluru-rural/</link>
	<description>News that connects you to Karnataka since 1921</description>
	<lastBuildDate>Mon, 18 May 2026 06:24:00 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.1</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>ಬೆಂಗಳೂರು ಗ್ರಾಮಾಂತರ Archives - Samyukta Karnataka</title>
	<link>https://samyuktakarnataka.in/category/districts/bengaluru-rural/</link>
	<width>32</width>
	<height>32</height>
</image> 
	<item>
		<title>ಕೇವಲ ₹200 ಸಾಲದ ವಿವಾದ: ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಕೋಲಿನಿಂದ ಹೊಡೆದು ವ್ಯಕ್ತಿಯ ಕೊಲೆ!</title>
		<link>https://samyuktakarnataka.in/districts/bengaluru-rural/man-beaten-to-death-with-stick-for-demanding-loan-repayment/</link>
		
		<dc:creator><![CDATA[Samyuktha Karnataka]]></dc:creator>
		<pubDate>Mon, 18 May 2026 06:24:00 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[arrest]]></category>
		<category><![CDATA[Bengalore]]></category>
		<category><![CDATA[brutally murdered]]></category>
		<category><![CDATA[crime]]></category>
		<category><![CDATA[Doddaballapur]]></category>
		<category><![CDATA[dyavasandra]]></category>
		<category><![CDATA[police]]></category>
		<category><![CDATA[shop owner]]></category>
		<category><![CDATA[Sunday]]></category>
		<category><![CDATA[tea shop]]></category>
		<guid isPermaLink="false">https://samyuktakarnataka.in/?p=98379</guid>

					<description><![CDATA[<p>ಬೆಂಗಳೂರು: ಕೇವಲ 200 ರೂಪಾಯಿ ಸಾಲದ ವಿಚಾರವಾಗಿ ಉಂಟಾದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಲದ ಹಣ ವಾಪಸ್ ಕೇಳಿದ ಟೀ ಅಂಗಡಿ ಮಾಲೀಕನನ್ನೇ ವ್ಯಕ್ತಿಯೊಬ್ಬ ಕೋಲಿನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮೃತರನ್ನು ದ್ಯಾವಸಂದ್ರ ನಿವಾಸಿ ಮಂಜುನಾಥ್ (40) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುನಿಯಪ್ಪ ಎಂಬಾತನನ್ನು ದೊಡ್ಡಬಳ್ಳಾಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಘಟನೆಯ ವಿವರ: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಘಟನೆಯು ಮೇ [&#8230;]</p>
<p>The post <a href="https://samyuktakarnataka.in/districts/bengaluru-rural/man-beaten-to-death-with-stick-for-demanding-loan-repayment/">ಕೇವಲ ₹200 ಸಾಲದ ವಿವಾದ: ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಕೋಲಿನಿಂದ ಹೊಡೆದು ವ್ಯಕ್ತಿಯ ಕೊಲೆ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು:</strong> ಕೇವಲ 200 ರೂಪಾಯಿ ಸಾಲದ ವಿಚಾರವಾಗಿ ಉಂಟಾದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಲದ ಹಣ ವಾಪಸ್ ಕೇಳಿದ ಟೀ ಅಂಗಡಿ ಮಾಲೀಕನನ್ನೇ ವ್ಯಕ್ತಿಯೊಬ್ಬ ಕೋಲಿನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮೃತರನ್ನು ದ್ಯಾವಸಂದ್ರ ನಿವಾಸಿ ಮಂಜುನಾಥ್ (40) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುನಿಯಪ್ಪ ಎಂಬಾತನನ್ನು ದೊಡ್ಡಬಳ್ಳಾಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.</p>



<p class="wp-block-paragraph"><strong>ಘಟನೆಯ ವಿವರ: </strong>ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಘಟನೆಯು ಮೇ 12 ರಂದು ನಡೆದಿದೆ. ಆರೋಪಿ ಮುನಿಯಪ್ಪ ದ್ಯಾವಸಂದ್ರದಲ್ಲಿರುವ ಮಂಜುನಾಥ್ ಟೀ ಅಂಗಡಿಗೆ ಭೇಟಿ ನೀಡಿದ್ದನು. ಈ ವೇಳೆ ಮುನಿಯಪ್ಪ ಮಂಜುನಾಥ್ ಬಳಿ ಮತ್ತೆ ಹಣ ನೀಡುವಂತೆ ಕೇಳಿದ್ದಾನೆ. ಆದ್ರೆ ಈಗಾಗಲೇ ಸಾಲ ಉಳಿಸಿಕೊಂಡಿದ್ದ ಮುನಿಯಪ್ಪನಿಗೆ ಮತ್ತಷ್ಟು ಹಣ ನೀಡಲು ಮಂಜುನಾಥ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ಪಡೆದಿದ್ದ 200 ರೂಪಾಯಿ ಬಾಕಿ ಹಣವನ್ನು ಮೊದಲು ಪಾವತಿಸುವಂತೆ ಮುನಿಯಪ್ಪನಿಗೆ ಕೇಳಿದ್ದಾರೆ.</p>



<p class="wp-block-paragraph"><strong>ಜಗಳ ಮತ್ತು ಹಲ್ಲೆ: </strong>ಹಣದ ವಿಚಾರವಾಗಿ ಇಬ್ಬರ ನಡುವೆ ಆರಂಭವಾದ ಮಾತುಕತೆ ಕೆಲವೇ ಕ್ಷಣಗಳಲ್ಲಿ ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ತೀವ್ರ ಜಗಳ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿ ಮುನಿಯಪ್ಪ, ಅಲ್ಲೇ ಇದ್ದ ಕೋಲನ್ನು ತೆಗೆದುಕೊಂಡು ಮಂಜುನಾಥ್ ಮೇಲೆ ಮನಬಂದಂತೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ದಾಳಿಯಿಂದಾಗಿ ಮಂಜುನಾಥ್ ತಲೆ ಹಾಗೂ ದೇಹದ ಭಾಗಗಳಿಗೆ ತೀವ್ರ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾರೆ.</p>



<p class="wp-block-paragraph"><strong>ಆರೋಪಿ ಬಂಧನ ಮತ್ತು ಕಾನೂನು ಕ್ರಮ: </strong>ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮುನಿಯಪ್ಪನನ್ನು ಪತ್ತೆಹಚ್ಚುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇವಲ ಇನ್ನೂರು ರೂಪಾಯಿಗಾಗಿ ನಡೆದ ಈ ಹತ್ಯೆ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದ್ದು, ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.</p>
<p>The post <a href="https://samyuktakarnataka.in/districts/bengaluru-rural/man-beaten-to-death-with-stick-for-demanding-loan-repayment/">ಕೇವಲ ₹200 ಸಾಲದ ವಿವಾದ: ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಕೋಲಿನಿಂದ ಹೊಡೆದು ವ್ಯಕ್ತಿಯ ಕೊಲೆ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಮೇಕ್ ಇನ್ ಕರ್ನಾಟಕ : ರನ್‌ವೇ ಸುರಕ್ಷತಾ ವಾಹನ ಉತ್ಪಾದನೆ ಆರಂಭ</title>
		<link>https://samyuktakarnataka.in/districts/bengaluru-rural/make-in-karnataka-anlon-runway-safety-vehicle-production-launched/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 05 Jan 2026 09:35:01 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<category><![CDATA[#karnataka]]></category>
		<category><![CDATA[Greater-Bengaluru]]></category>
		<guid isPermaLink="false">https://samyuktakarnataka.in/?p=88855</guid>

					<description><![CDATA[<p>ದೊಡ್ಡಬಳ್ಳಾಪುರ: ‘ಮೇಕ್ ಇನ್ ಕರ್ನಾಟಕ’ ಯೋಜನೆಯಡಿಯಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಸಾಧನೆ ಸೇರ್ಪಡೆಯಾಗಿದೆ. ದೊಡ್ಡಬಳ್ಳಾಪುರ ಸಮೀಪದ ಆದಿನಾರಾಯಣ ಹೊಸಹಳ್ಳಿ ಬಳಿಯ ಕೈಗಾರಿಕಾ ವಲಯದಲ್ಲಿ Anlon Technology Solutions ಸಂಸ್ಥೆಯು ಅಭಿವೃದ್ಧಿಪಡಿಸಿರುವ ರನ್‌ವೇ ಕ್ಲೀನಿಂಗ್ ಮತ್ತು ಸುರಕ್ಷತಾ ವಾಹನದ ಉತ್ಪಾದನೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಈ ಅತ್ಯಾಧುನಿಕ ರನ್‌ವೇ ಸುರಕ್ಷತಾ ವಾಹನವನ್ನು ಉದ್ಘಾಟಿಸಿ ಮಾತನಾಡಿದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, “ವಿಮಾನಯಾನ ಹಾಗೂ ನಗರ ಮೂಲಸೌಕರ್ಯ ಕ್ಷೇತ್ರಗಳಿಗೆ ಅತ್ಯಂತ ಅಗತ್ಯವಾದ ಈ [&#8230;]</p>
<p>The post <a href="https://samyuktakarnataka.in/districts/bengaluru-rural/make-in-karnataka-anlon-runway-safety-vehicle-production-launched/">ಮೇಕ್ ಇನ್ ಕರ್ನಾಟಕ : ರನ್‌ವೇ ಸುರಕ್ಷತಾ ವಾಹನ ಉತ್ಪಾದನೆ ಆರಂಭ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದೊಡ್ಡಬಳ್ಳಾಪುರ:</strong> ‘ಮೇಕ್ ಇನ್ ಕರ್ನಾಟಕ’ ಯೋಜನೆಯಡಿಯಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಸಾಧನೆ ಸೇರ್ಪಡೆಯಾಗಿದೆ. ದೊಡ್ಡಬಳ್ಳಾಪುರ ಸಮೀಪದ ಆದಿನಾರಾಯಣ ಹೊಸಹಳ್ಳಿ ಬಳಿಯ ಕೈಗಾರಿಕಾ ವಲಯದಲ್ಲಿ Anlon Technology Solutions ಸಂಸ್ಥೆಯು ಅಭಿವೃದ್ಧಿಪಡಿಸಿರುವ ರನ್‌ವೇ ಕ್ಲೀನಿಂಗ್ ಮತ್ತು ಸುರಕ್ಷತಾ ವಾಹನದ ಉತ್ಪಾದನೆಗೆ ಅಧಿಕೃತ ಚಾಲನೆ ನೀಡಲಾಗಿದೆ.</p>



<p class="wp-block-paragraph">ಈ ಅತ್ಯಾಧುನಿಕ ರನ್‌ವೇ ಸುರಕ್ಷತಾ ವಾಹನವನ್ನು ಉದ್ಘಾಟಿಸಿ ಮಾತನಾಡಿದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, “ವಿಮಾನಯಾನ ಹಾಗೂ ನಗರ ಮೂಲಸೌಕರ್ಯ ಕ್ಷೇತ್ರಗಳಿಗೆ ಅತ್ಯಂತ ಅಗತ್ಯವಾದ ಈ ವಿಶೇಷ ಯಂತ್ರಗಳನ್ನು ದೇಶದಲ್ಲೇ ಮೊದಲ ಬಾರಿಗೆ, ದೇಶೀಯವಾಗಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲೇ ಉತ್ಪಾದಿಸಲಾಗುತ್ತಿದೆ ಎಂಬುದು ಹೆಮ್ಮೆಯ ವಿಷಯ” ಎಂದು ಹೇಳಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:  <a href="https://samyuktakarnataka.in/districts/mysuru/satish-jarkiholi-denies-power-sharing-after-budget-statement/">ಬಜೆಟ್ ನಂತರ ಅಧಿಕಾರ ಹಂಚಿಕೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ</a></strong></p>



<p class="wp-block-paragraph">ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವರು, ಸ್ವಿಟ್ಜರ್‌ಲ್ಯಾಂಡ್‌ನ Bucher Municipal ಸಂಸ್ಥೆಯ ಸಹಯೋಗದಲ್ಲಿ ಜಾಗತಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಿ ತಯಾರಿಸಲಾದ ಈ ಆಧುನಿಕ ರನ್‌ವೇ ಹಾಗೂ ಮ್ಯುನಿಸಿಪಲ್ ಸ್ವೀಪರ್ ವಾಹನಗಳು ವಿಮಾನ ನಿಲ್ದಾಣಗಳ ರನ್‌ವೇಗಳಲ್ಲಿ ಇರುವ ಲೋಹದ ತುಣುಕುಗಳು, ಸಸ್ಯಸಂಬಂಧಿ ಕಸ ಹಾಗೂ ಸ್ಕಿಡ್‌ಗೆ ಕಾರಣವಾಗುವ ಅಂಶಗಳನ್ನು ಪರಿಣಾಮಕಾರಿಯಾಗಿ ತೆರವುಗೊಳಿಸುವ ಮೂಲಕ ವಿಮಾನಗಳ ಸುರಕ್ಷಿತ ಚಲನವಲನಕ್ಕೆ ಮಹತ್ವದ ಕೊಡುಗೆ ನೀಡಲಿವೆ ಎಂದು ತಿಳಿಸಿದ್ದಾರೆ.</p>



<p class="wp-block-paragraph">ಇಂತಹ ದೇಶೀಯ ಉತ್ಪಾದನಾ ಪ್ರಯತ್ನಗಳು ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯವನ್ನು ಉಳಿಸುವ ಜೊತೆಗೆ, ಭಾರತದ ಆಂತರಿಕ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:  <a href="https://samyuktakarnataka.in/news/international/trump-threatens-higher-us-tariffs-on-india-over-russian-oil-imports/">ವೆನೆಜುವೆಲಾ ಆಪರೇಷನ್ ಬಳಿಕ ಭಾರತದ ಮೇಲೆ ಮತ್ತಷ್ಟು ಸುಂಕದ ಸುಳಿವು ನೀಡಿದ ಟ್ರಂಪ್</a></strong></p>



<p class="wp-block-paragraph">ನಿಖರ ಎಂಜಿನಿಯರಿಂಗ್ ಮತ್ತು ಮೊಬೈಲಿಟಿ ಕ್ಷೇತ್ರದಲ್ಲಿ ಕರ್ನಾಟಕ ನಿರ್ಮಿಸಿಕೊಂಡಿರುವ ಬಲಿಷ್ಠ ಕೈಗಾರಿಕಾ ಪರಿಸರ ವ್ಯವಸ್ಥೆಯೇ ಇಂತಹ ಉನ್ನತ ಮಟ್ಟದ ತಯಾರಿಕಾ ಯಶಸ್ಸುಗಳಿಗೆ ಆಧಾರವಾಗಿದೆ ಎಂದು ಅವರು ಹೇಳಿದರು.</p>



<p class="wp-block-paragraph">ಇನ್ನೂ ಕೈಗಾರಿಕಾ ನೀತಿ 2025–30ರ ಅಡಿಯಲ್ಲಿ, ವಿಮಾನಯಾನ ಮತ್ತು ಸಾರ್ವಜನಿಕ ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಆಮದು ಪರ್ಯಾಯ ಉತ್ಪಾದನೆಗೆ ಮುಂದಾಗುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಮುಂದುವರಿಯಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದ್ದಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="UMGgplqew44"><iframe title="Venezuela Crisis: Latest Updates | Major Global News | Samyukta Karnataka Daily Report | Samyukta" width="696" height="392" src="https://www.youtube.com/embed/UMGgplqew44?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>
<p>The post <a href="https://samyuktakarnataka.in/districts/bengaluru-rural/make-in-karnataka-anlon-runway-safety-vehicle-production-launched/">ಮೇಕ್ ಇನ್ ಕರ್ನಾಟಕ : ರನ್‌ವೇ ಸುರಕ್ಷತಾ ವಾಹನ ಉತ್ಪಾದನೆ ಆರಂಭ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಭರ್ಜರಿ ಜಯ</title>
		<link>https://samyuktakarnataka.in/districts/bengaluru-rural/bashettihalli-town-panchayat-election-results-bjp-wins-after-11-years/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 24 Dec 2025 10:33:36 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<guid isPermaLink="false">https://samyuktakarnataka.in/?p=88037</guid>

					<description><![CDATA[<p>ದೊಡ್ಡಬಳ್ಳಾಪುರ / ಬೆಂಗಳೂರು ಗ್ರಾಮಾಂತರ: 11 ವರ್ಷಗಳ ದೀರ್ಘ ವಿರಾಮದ ಬಳಿಕ ನಡೆದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಭಾರೀ ಸಿಹಿ ಸುದ್ದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಒಟ್ಟು 19 ವಾರ್ಡ್‌ಗಳ ಪೈಕಿ ಬಿಜೆಪಿ 14 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧನೆ ಮಾಡಿದೆ. ಈ ಚುನಾವಣೆ ಹಲವು ಕಾರಣಗಳಿಂದ ವಿಶೇಷವಾಗಿತ್ತು. ಬಾಶೆಟ್ಟಿಹಳ್ಳಿ ಗ್ರಾಮ [&#8230;]</p>
<p>The post <a href="https://samyuktakarnataka.in/districts/bengaluru-rural/bashettihalli-town-panchayat-election-results-bjp-wins-after-11-years/">ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಭರ್ಜರಿ ಜಯ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದೊಡ್ಡಬಳ್ಳಾಪುರ / ಬೆಂಗಳೂರು ಗ್ರಾಮಾಂತರ: </strong>11 ವರ್ಷಗಳ ದೀರ್ಘ ವಿರಾಮದ ಬಳಿಕ ನಡೆದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಭಾರೀ ಸಿಹಿ ಸುದ್ದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಒಟ್ಟು 19 ವಾರ್ಡ್‌ಗಳ ಪೈಕಿ ಬಿಜೆಪಿ 14 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧನೆ ಮಾಡಿದೆ.</p>



<p class="wp-block-paragraph">ಈ ಚುನಾವಣೆ ಹಲವು ಕಾರಣಗಳಿಂದ ವಿಶೇಷವಾಗಿತ್ತು. ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, 11 ವರ್ಷಗಳ ಬಳಿಕ ಮತದಾನ ನಡೆದಿರುವುದು ಸ್ಥಳೀಯರಲ್ಲಿ ಅಪಾರ ಕುತೂಹಲ ಮೂಡಿಸಿತ್ತು. ಭಾನುವಾರ ನಡೆದ ಮತದಾನದಲ್ಲಿ ಒಟ್ಟು 64 ಅಭ್ಯರ್ಥಿಗಳು ಕಣದಲ್ಲಿದ್ದರು. ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳೂ ಸ್ಪರ್ಧಿಸಿದ್ದರು.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/districts/uttara-kannada/monki-town-panchayat-election-bjp-victory-honnavar/">ಮಂಕಿ ಪಟ್ಟಣ ಪಂಚಾಯತ್ ಬಿಜೆಪಿ ಪಾಲು</a></strong></p>



<p class="wp-block-paragraph">ಮತ ಎಣಿಕೆ ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ನಡೆಯಿತು. ಬೆಳಗ್ಗೆಯಿಂದಲೇ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ಎಣಿಕೆ ಕೇಂದ್ರದ ಬಳಿ ಸೇರಿ ಫಲಿತಾಂಶಕ್ಕಾಗಿ ಕಾದು ನಿಂತಿದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಘೋಷಣೆ ಕೂಗಿ ಸಂಭ್ರಮಿಸಿದರು.</p>



<p class="wp-block-paragraph">ಚುನಾವಣಾ ಫಲಿತಾಂಶದ ಪ್ರಕಾರ, ಬಿಜೆಪಿ 14 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಗಳಿಸಿದೆ. ಕಾಂಗ್ರೆಸ್ ಕೇವಲ 3 ಸ್ಥಾನಗಳಿಗೆ ಸೀಮಿತವಾಗಿದ್ದು, ಜೆಡಿಎಸ್ ಒಂದು ಸ್ಥಾನ ಮತ್ತು ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶದೊಂದಿಗೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಆಡಳಿತ ನಡೆಸಲಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="9fi7krLwy2"><a href="https://samyuktakarnataka.in/districts/davanagere/new-zealand-groom-challakere-bride-rare-hindu-wedding-davanagere/">ನ್ಯೂಜಿಲೆಂಡ್ ವರ, ಚಳ್ಳಕೆರೆ ವಧು: ದಾವಣಗೆರೆಯಲ್ಲಿ ಅಪರೂಪದ ಹಿಂದೂ ಸಂಪ್ರದಾಯದ ಮದುವೆ</a></blockquote><iframe class="wp-embedded-content" sandbox="allow-scripts" security="restricted"  title="&#8220;ನ್ಯೂಜಿಲೆಂಡ್ ವರ, ಚಳ್ಳಕೆರೆ ವಧು: ದಾವಣಗೆರೆಯಲ್ಲಿ ಅಪರೂಪದ ಹಿಂದೂ ಸಂಪ್ರದಾಯದ ಮದುವೆ&#8221; &#8212; Samyukta Karnataka" src="https://samyuktakarnataka.in/districts/davanagere/new-zealand-groom-challakere-bride-rare-hindu-wedding-davanagere/embed/#?secret=g5eubgLq6b#?secret=9fi7krLwy2" data-secret="9fi7krLwy2" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/bengaluru-rural/bashettihalli-town-panchayat-election-results-bjp-wins-after-11-years/">ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಭರ್ಜರಿ ಜಯ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ರಾಜಘಟ್ಟದಲ್ಲಿ ಗುಮ್ಮಟಾಕಾರದ ಆಕರ್ಷಕ ಅಂಗನವಾಡಿ – ಸೃಜನಶೀಲ ಗ್ರಾಮ ಪಂಚಾಯಿತಿಯ ನೂತನ ಪ್ರಯತ್ನ</title>
		<link>https://samyuktakarnataka.in/districts/bengaluru-rural/dome-shaped-anganwadi-rajaghatta-gram-panchayat-innovative-project/</link>
					<comments>https://samyuktakarnataka.in/districts/bengaluru-rural/dome-shaped-anganwadi-rajaghatta-gram-panchayat-innovative-project/#respond</comments>
		
		<dc:creator><![CDATA[Samyukta Karnataka]]></dc:creator>
		<pubDate>Thu, 13 Nov 2025 05:31:28 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<category><![CDATA[#education]]></category>
		<guid isPermaLink="false">https://samyuktakarnataka.in/?p=84805</guid>

					<description><![CDATA[<p>ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮ ಪಂಚಾಯಿತಿ ತನ್ನದೇ ಆದ ವಿಶಿಷ್ಟ ಪ್ರಯತ್ನದ ಮೂಲಕ ಮಕ್ಕಳಿಗೆ ಮನರಂಜನೆಯ ಜೊತೆಗೆ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗುಮ್ಮಟಾಕಾರದ ವಿನ್ಯಾಸದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿದೆ. ಈ ಕಟ್ಟಡವು ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲಗಳ ಜೊತೆಗೆ ಸಿಎಸ್ಆರ್ (Corporate Social Responsibility) ಅನುದಾನದಿಂದ ನಿರ್ಮಾಣಗೊಂಡಿದ್ದು, ಸಣ್ಣ ಮಕ್ಕಳಿಗೆ ಕಲಿಕೆಯ ಜೊತೆ ಆನಂದದ ವಾತಾವರಣವನ್ನು ಒದಗಿಸಲು ಉದ್ದೇಶಿಸಲಾಗಿದೆ. ಗುಮ್ಮಟಾಕಾರದ ವಿನ್ಯಾಸದಿಂದಾಗಿ ಈ ಅಂಗನವಾಡಿ ಈಗ ಗ್ರಾಮದಲ್ಲಿನ ಹೊಸ ಆಕರ್ಷಣೆಯ [&#8230;]</p>
<p>The post <a href="https://samyuktakarnataka.in/districts/bengaluru-rural/dome-shaped-anganwadi-rajaghatta-gram-panchayat-innovative-project/">ರಾಜಘಟ್ಟದಲ್ಲಿ ಗುಮ್ಮಟಾಕಾರದ ಆಕರ್ಷಕ ಅಂಗನವಾಡಿ – ಸೃಜನಶೀಲ ಗ್ರಾಮ ಪಂಚಾಯಿತಿಯ ನೂತನ ಪ್ರಯತ್ನ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು:</strong> ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮ ಪಂಚಾಯಿತಿ ತನ್ನದೇ ಆದ ವಿಶಿಷ್ಟ ಪ್ರಯತ್ನದ ಮೂಲಕ ಮಕ್ಕಳಿಗೆ ಮನರಂಜನೆಯ ಜೊತೆಗೆ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗುಮ್ಮಟಾಕಾರದ ವಿನ್ಯಾಸದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿದೆ.</p>



<p class="wp-block-paragraph">ಈ ಕಟ್ಟಡವು ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲಗಳ ಜೊತೆಗೆ ಸಿಎಸ್ಆರ್ (Corporate Social Responsibility) ಅನುದಾನದಿಂದ ನಿರ್ಮಾಣಗೊಂಡಿದ್ದು, ಸಣ್ಣ ಮಕ್ಕಳಿಗೆ ಕಲಿಕೆಯ ಜೊತೆ ಆನಂದದ ವಾತಾವರಣವನ್ನು ಒದಗಿಸಲು ಉದ್ದೇಶಿಸಲಾಗಿದೆ.</p>



<p class="wp-block-paragraph">ಗುಮ್ಮಟಾಕಾರದ ವಿನ್ಯಾಸದಿಂದಾಗಿ ಈ ಅಂಗನವಾಡಿ ಈಗ ಗ್ರಾಮದಲ್ಲಿನ ಹೊಸ ಆಕರ್ಷಣೆಯ ಕೇಂದ್ರವಾಗಿದೆ. ಒಳಾಂಗಣದ ಬಣ್ಣದ ಚಿತ್ರಗಳು, ಪ್ರಕಾಶಮಾನವಾದ ಬಾಗಿಲು-ಕಿಟಕಿಗಳು ಮತ್ತು ವೃತ್ತಾಕಾರದ ಸ್ಥಳ ವಿನ್ಯಾಸದಿಂದ ಮಕ್ಕಳ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ರೀತಿಯಾಗಿದೆ.</p>



<p class="wp-block-paragraph">ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದು, “ಗ್ರಾಮ ಪಂಚಾಯಿತಿಗಳು ಕ್ರೀಯಾಶೀಲತೆ ಮತ್ತು ಸೃಜನಶೀಲತೆಯನ್ನು ಅಳವಡಿಸಿಕೊಂಡಾಗ, ತಮ್ಮ ಊರಿನ ಅಗತ್ಯತೆಗಳನ್ನು ಅರಿತುಕೊಂಡಾಗ ಇಂತಹ ವಿಶಿಷ್ಟ ಕಾರ್ಯಗಳು ಸಾಧ್ಯವಾಗುತ್ತವೆ” ಎಂದಿದ್ದಾರೆ.</p>



<p class="wp-block-paragraph">ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯರ ಸಹಕಾರದಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಅಂಗನವಾಡಿ ಗ್ರಾಮೀಣ ಪ್ರದೇಶಗಳಲ್ಲೂ ನವೀನ ವಿನ್ಯಾಸ ಮತ್ತು ಸ್ಮಾರ್ಟ್ ಯೋಜನೆಗಳು ಹೇಗೆ ಸಾಧ್ಯ ಎನ್ನುವುದಕ್ಕೆ ಮಾದರಿಯಾಗಿದೆ.</p>



<p class="wp-block-paragraph">ಈ ನಿರ್ಮಾಣವು ಕೇವಲ ಮಕ್ಕಳಿಗೆ ಕಲಿಕಾ ವಾತಾವರಣವನ್ನು ನೀಡುವುದಲ್ಲದೆ, ಗ್ರಾಮ ಪಂಚಾಯಿತಿಗಳ ಪ್ರಗತಿಪರ ಚಿಂತನೆಗೆ ಒಂದು ಚಿಹ್ನೆಯಂತಾಗಿದೆ.</p>


<div class="wp-block-image">
<figure class="aligncenter size-full"><img fetchpriority="high" decoding="async" width="800" height="500" src="https://samyuktakarnataka.in/wp-content/uploads/2025/11/dome-shaped-anganwadi-rajaghatta-gram-panchayat-innovative-project-2.jpg" alt="" class="wp-image-84809" srcset="https://samyuktakarnataka.in/wp-content/uploads/2025/11/dome-shaped-anganwadi-rajaghatta-gram-panchayat-innovative-project-2.jpg 800w, https://samyuktakarnataka.in/wp-content/uploads/2025/11/dome-shaped-anganwadi-rajaghatta-gram-panchayat-innovative-project-2-300x188.jpg 300w, https://samyuktakarnataka.in/wp-content/uploads/2025/11/dome-shaped-anganwadi-rajaghatta-gram-panchayat-innovative-project-2-768x480.jpg 768w, https://samyuktakarnataka.in/wp-content/uploads/2025/11/dome-shaped-anganwadi-rajaghatta-gram-panchayat-innovative-project-2-672x420.jpg 672w, https://samyuktakarnataka.in/wp-content/uploads/2025/11/dome-shaped-anganwadi-rajaghatta-gram-panchayat-innovative-project-2-150x94.jpg 150w, https://samyuktakarnataka.in/wp-content/uploads/2025/11/dome-shaped-anganwadi-rajaghatta-gram-panchayat-innovative-project-2-696x435.jpg 696w" sizes="(max-width: 800px) 100vw, 800px" /></figure>
</div><p>The post <a href="https://samyuktakarnataka.in/districts/bengaluru-rural/dome-shaped-anganwadi-rajaghatta-gram-panchayat-innovative-project/">ರಾಜಘಟ್ಟದಲ್ಲಿ ಗುಮ್ಮಟಾಕಾರದ ಆಕರ್ಷಕ ಅಂಗನವಾಡಿ – ಸೃಜನಶೀಲ ಗ್ರಾಮ ಪಂಚಾಯಿತಿಯ ನೂತನ ಪ್ರಯತ್ನ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
					<wfw:commentRss>https://samyuktakarnataka.in/districts/bengaluru-rural/dome-shaped-anganwadi-rajaghatta-gram-panchayat-innovative-project/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಗ್ರಾಮ ಪಂಚಾಯಿತಿ: ಮಹಿಳಾ ಸದಸ್ಯರ ಗಂಡನದ್ದೇ ಅಧಿಕಾರ!</title>
		<link>https://samyuktakarnataka.in/districts/bengaluru-rural/gram-panchayat-corruption-upa-lokayukta-statement/</link>
					<comments>https://samyuktakarnataka.in/districts/bengaluru-rural/gram-panchayat-corruption-upa-lokayukta-statement/#respond</comments>
		
		<dc:creator><![CDATA[Samyuktha Karnataka]]></dc:creator>
		<pubDate>Sat, 11 Oct 2025 07:02:48 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<category><![CDATA[lokayukta]]></category>
		<guid isPermaLink="false">https://samyuktakarnataka.in/?p=82373</guid>

					<description><![CDATA[<p>&#8220;ನಾನು ಒಳ್ಳೆಯವರಿಗೆ, ಒಳ್ಳೆಯ ಕೆಲಸಕ್ಕೆ ತಲೆಬಾಗುತ್ತೇನೆ ಭ್ರಷ್ಟಾಚಾರಿಗಳಿಗೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ&#8221; ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದರು. ಹೊಸಕೋಟೆ ಟೌನ್ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಹೊಸಕೋಟೆ ತಾಲ್ಲೂಕಿನ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು. &#8220;ನಮ್ಮ ದೇಶದ ಜನತೆಗೆ ಮೊದಲಿದ್ದ ದೇಶ ಭಕ್ತಿ ಈಗ ಇಲ್ಲದಂತಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಶೇ 15 ಅಕ್ಷರಸ್ಥರಿದ್ದಾಗ ಇದ್ದ ದೇಶಭಕ್ತಿ, ಪ್ರಸ್ತುತ ಶೇ 95 ಅಕ್ಷರಸ್ಥರಿದ್ದು [&#8230;]</p>
<p>The post <a href="https://samyuktakarnataka.in/districts/bengaluru-rural/gram-panchayat-corruption-upa-lokayukta-statement/">ಗ್ರಾಮ ಪಂಚಾಯಿತಿ: ಮಹಿಳಾ ಸದಸ್ಯರ ಗಂಡನದ್ದೇ ಅಧಿಕಾರ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">&#8220;ನಾನು ಒಳ್ಳೆಯವರಿಗೆ, ಒಳ್ಳೆಯ ಕೆಲಸಕ್ಕೆ ತಲೆಬಾಗುತ್ತೇನೆ ಭ್ರಷ್ಟಾಚಾರಿಗಳಿಗೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ&#8221; ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದರು. ಹೊಸಕೋಟೆ ಟೌನ್ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಹೊಸಕೋಟೆ ತಾಲ್ಲೂಕಿನ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು.</p>



<p class="wp-block-paragraph">&#8220;ನಮ್ಮ ದೇಶದ ಜನತೆಗೆ ಮೊದಲಿದ್ದ ದೇಶ ಭಕ್ತಿ ಈಗ ಇಲ್ಲದಂತಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಶೇ 15 ಅಕ್ಷರಸ್ಥರಿದ್ದಾಗ ಇದ್ದ ದೇಶಭಕ್ತಿ, ಪ್ರಸ್ತುತ ಶೇ 95 ಅಕ್ಷರಸ್ಥರಿದ್ದು ಕಡಿಮೆಯಾಗಿದೆ. ಕುವೆಂಪು ಅವರು ತಿಳಿಸಿರುವ ಹಾಗೇ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಅದ್ಭುತ ವಾಕ್ಯವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು&#8221; ಎಂದರು.</p>



<p class="wp-block-paragraph">&#8220;ಸಂವಿಧಾನದ ನಾಲ್ಕು ಅಂಗಗಳು ದುರ್ಬಲವಾಗಿವೆ. ಕೇಂದ್ರದಲ್ಲಿ ಲೋಕಪಾಲ್ ಇದೆ, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಭವ್ಯ ಇತಿಹಾಸವಿದೆ. ಅಧಿಕಾರದಲ್ಲಿದ್ದ ಸಚಿವರನ್ನು ಮತ್ತು ಮುಖ್ಯಮಂತ್ರಿಯನ್ನು ಸಹ ಜೈಲಿಗೆ ಕಳುಹಿಸಿರುವ ಉದಾಹರಣೆ ಇದೆ. ಸರ್ಕಾರಿ ಅಧಿಕಾರಿಗಳು ನಿಷ್ಠೆಯಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು&#8221; ಎಂದು ಕರೆ ನೀಡಿದರು.</p>



<p class="wp-block-paragraph">&#8220;ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 25 ಸಾವಿರ ಪ್ರಕರಣಗಳು ಬಾಕಿಯಿದ್ದು, ಅದನ್ನು ವಿಲೇವಾರಿ ಮಾಡಲು ನಾವು ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡುತ್ತಿದ್ದೇವೆ. ನನ್ನ ದೇಹಕ್ಕೆ ವಯಸ್ಸಾಗಿದೆ, ಆದರೆ ನನ್ನ ದೃಢ ಸಂಕಲ್ಪಕ್ಕೆ ವಯಸ್ಸಾಗಿಲ್ಲ. ನಾವು ಲೋಕಾಯುಕ್ತ ಸಂಸ್ಥೆಯ ತಾಯಿ ಸ್ಥಾನದಲ್ಲಿದ್ದು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ನೀಡಲು ಸದಾ ಸಿದ್ಧರಿದ್ದೇವೆ&#8221; ಎಂದು ಹೇಳಿದರು.</p>



<p class="wp-block-paragraph">&#8220;ಭವಿಷ್ಯದ ಜನಾಂಗಕ್ಕೆ ದಾರಿ ದೀಪದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯುವಕರು ಮೊಬೈಲ್ ಗೀಳು ಕಡಿಮೆಮಾಡಿ, ದೇಶ ಪ್ರೇಮ ಅಳವಡಿಸಿಕೊಂಡು, ದೇಶದ ಅಭಿವೃದ್ಧಿಗೆ ಎಚ್ಚೆತ್ತು ಕೊಳ್ಳಬೇಕು. ಒಂದು ದೇಶ ಸಮೃದ್ಧಿಯಾಗಿ ಬೆಳೆಯಲು ಉತ್ತಮ ಸಮಾಜದ ತಳಪಾಯ ಸರಿಯಾಗಿಯಿದ್ದರೆ ಮಾತ್ರ ದೇಶ ಸುಗಮವಾಗುತ್ತದೆ. ನಾವು ಅಡ್ಡದಾರಿಯಲ್ಲಿ ಹಣ ಮಾಡುವುದರಿಂದ ಸರಿಯಾದ ನೆಮ್ಮದಿ ಮತ್ತು ನಿದ್ದೆಯಿರುವುದಿಲ್ಲ. ಹಾಗಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದರಿಂದ ನಾವು ಎಲ್ಲೇಯಿದ್ದರು ನೆಮ್ಮದಿಯ ಜೀವನ ನಡೆಸಬಹುದು&#8221; ಎಂದು ತಿಳಿಸಿದರು.</p>



<p class="wp-block-paragraph">&#8220;ಇಂದಿನ ದಿನಗಳಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗದೆ ಹಲವಾರು ಜನರು ವೃದ್ಧಾಶ್ರಮಗಳಲ್ಲಿ ಬಿಡುತ್ತಿದ್ದಾರೆ. ಇದು ನಿಮಗೂ ವಯಸ್ಸಾದ ಕಾಲದಲ್ಲಿ ನಿಮ್ಮ ಮಕ್ಕಳು ಸಹ ನಿಮ್ಮನ್ನು ವೃದ್ಧಾಶ್ರಮಗಳಗೆ ಬಿಡುವುದು ಖಚಿತ. ಆದ್ದರಿಂದ ಎಲ್ಲರೂ ಬದುಕಿನ ನೀತಿ ಪಾಠವನ್ನು ಕಲಿಯಬೇಕು. ಪಂಚಾಯತ್ ರಾಜ್ ನ ಮುಖ್ಯ ಉದ್ದೇಶ ಗ್ರಾಮ ಸ್ವರಾಜ್ ಅನ್ನು ನಿರ್ಮಿಸುವುದು. ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ವಾರ್ಷಿಕ 1 ರಿಂದ 1.15 ಕೋಟಿ ಸರ್ಕಾರದಿಂದ ಸಿಗುತ್ತದೆ. ಅಲ್ಲಿನ ಗ್ರಾಮ ಪಂಚಾಯತಿಯ ಮಹಿಳಾ ಅಧ್ಯಕ್ಷರು, ಸದಸ್ಯರು ಬದಲು ಗಂಡ ಅಧಿಕಾರ ಮಾಡುತ್ತಾರೆ&#8221; ಎಂದರು.</p>



<p class="wp-block-paragraph">&#8220;ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮಹಿಳೆಯಾಗಿದ್ದು, ಪತ್ನಿಯ ಬದಲು ಗಂಡ ಅಧಿಕಾರ ಮಾಡುತ್ತಿದ್ದಾನೆ. ಇಂತಹವರ ಜೊತೆಗೆ ಪಿಡಿಒಗಳು ಸೇರಿಕೊಂಡು ಬೋರವೆಲ್ ರಿಪೇರಿ, ನರೇಗಾ ಯೋಜನೆ, ರಸ್ತೆ ದುರಸ್ತಿ, ಬೀದಿ ದೀಪ ಹೀಗೆ ಇತ್ಯಾದಿ ಯೋಜನೆ ಮತ್ತು ಕಾಮಗಾರಿ ಎಂದು ಅಕ್ರಮ ಬಿಲ್ಲುಗಳನ್ನು ಮಾಡಿಕೊಂಡು ಲಕ್ಷಾಂತರ ಹಣವನ್ನು ದೋಚುತ್ತಿದ್ದಾರೆ. ಜಿಲ್ಲೆಯ ಪಂಚಾಯಿತಿಗಳಲ್ಲಿ ಗಂಡ ಅಧಿಕಾರ ಚಲಾಯಿಸುತ್ತಿರುವುದು ಕಂಡಲ್ಲಿ ಕಠಿಣ ಕ್ರಮ ಕೈಗೊಳ್ಳಿ&#8221; ಎಂದು ಸಿಇಒಗಳಿಗೆ ಸೂಚಿಸಿದರು.</p>



<p class="wp-block-paragraph">&#8220;ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಕೆಲಸಕ್ಕೆ ಕೊಟೇಶನ್ ಕರೆದರೆ ಮೂರು ಕೊಟೇಶನ್ ನಲ್ಲಿ ಯಾವುದಕ್ಕೆ ಗ್ರಾಂಟ್ ಆಗಬೇಕು ಅದಕ್ಕೆ ಸಹಿ ಸಮೇತ ಇರುತ್ತದೆ, ಬೇರೆದಕ್ಕೆ ಸಹಿ ಇರುವುದಿಲ್ಲ . ಸೆಕ್ಷನ್ 13 ರಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ನಾವೇ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಬಹುದು. ಇದರಿಂದ ಕನಿಷ್ಠ 3 ವರ್ಷ ಶಿಕ್ಷೆ ಮತ್ತು 5 ಸಾವಿರ ದಂಡವನ್ನು ವಿಧಿಸಲಾಗುವುದು. ಸುಳ್ಳು ಪ್ರಕರಣ ದಾಖಲು ಮಾಡುವುದು ಮತ್ತು ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎಂದು ಕೇಸ್ ದಾಖಲಿಸಬಹುದು. ಆದ್ದರಿಂದ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ಮತ್ತು ನಿಮಗೆ ಒಳ್ಳೆದು&#8221; ಎಂದರು.</p>
<p>The post <a href="https://samyuktakarnataka.in/districts/bengaluru-rural/gram-panchayat-corruption-upa-lokayukta-statement/">ಗ್ರಾಮ ಪಂಚಾಯಿತಿ: ಮಹಿಳಾ ಸದಸ್ಯರ ಗಂಡನದ್ದೇ ಅಧಿಕಾರ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
					<wfw:commentRss>https://samyuktakarnataka.in/districts/bengaluru-rural/gram-panchayat-corruption-upa-lokayukta-statement/feed/</wfw:commentRss>
			<slash:comments>0</slash:comments>
		
		
			</item>
		<item>
		<title>ದೇವನಹಳ್ಳಿ: ಇದು ರಸ್ತೆಯೋ, ಕೆರೆಯೋ?</title>
		<link>https://samyuktakarnataka.in/districts/bengaluru-rural/pothole-in-hosakote-road-trouble-for-motorists/</link>
					<comments>https://samyuktakarnataka.in/districts/bengaluru-rural/pothole-in-hosakote-road-trouble-for-motorists/#respond</comments>
		
		<dc:creator><![CDATA[Samyuktha Karnataka]]></dc:creator>
		<pubDate>Sat, 11 Oct 2025 06:36:22 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<category><![CDATA[#road]]></category>
		<guid isPermaLink="false">https://samyuktakarnataka.in/?p=82370</guid>

					<description><![CDATA[<p>ದೇವನಹಳ್ಳಿ: ಪಟ್ಟಣದ ಹೊಸಕೋಟೆ ರಸ್ತೆಯಲ್ಲಿರುವ ಸತ್ವ ಅಪಾರ್ಟ್‌ಮೆಂಟ್‌ ಬಳಿ ಕೆರೆಯಂತಾಗಿದೆ. ರಸ್ತೆ ಹೀಗಿದ್ದರೂ ಕಣ್ಣಿದ್ದರೂ ಕಾಣದಂತೆ ವರ್ತಿಸುತ್ತಿರುವ ಪುರಸಭಾ ಅಧಿಕಾರಿಗಳ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಬಂತೆಂದರೆ ಇಂತಹ ಸ್ಥಳಗಳಲ್ಲಿ ರಸ್ತೆ ಯಾವುದು? ಎಂದು ಹುಡಕಾಡಿಕೊಂಡು ಹೋಗಬೇಕಾದ ಪರಿಸ್ಥತಿ ಎದುರಾಗುತ್ತದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ಇದು ರಸ್ತೆಯೋ?, ಕೆರೆಯೋ? ಎಂಬ ಪ್ರಶ್ನೆ ಮೂಡುತ್ತದೆ. ಪ್ರತಿ ಬಾರಿಯೂ ಮಳೆ ಸುರಿದಾಗ ಈ ರಸ್ತೆಯಲ್ಲಿ ವಾಹನ ಸವಾರರ ಸಂಚಾರ ಸರ್ಕಸ್ ಮಾಡಿದಂತೆ. [&#8230;]</p>
<p>The post <a href="https://samyuktakarnataka.in/districts/bengaluru-rural/pothole-in-hosakote-road-trouble-for-motorists/">ದೇವನಹಳ್ಳಿ: ಇದು ರಸ್ತೆಯೋ, ಕೆರೆಯೋ?</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ದೇವನಹಳ್ಳಿ: ಪಟ್ಟಣದ ಹೊಸಕೋಟೆ ರಸ್ತೆಯಲ್ಲಿರುವ ಸತ್ವ ಅಪಾರ್ಟ್‌ಮೆಂಟ್‌ ಬಳಿ ಕೆರೆಯಂತಾಗಿದೆ. ರಸ್ತೆ ಹೀಗಿದ್ದರೂ ಕಣ್ಣಿದ್ದರೂ ಕಾಣದಂತೆ ವರ್ತಿಸುತ್ತಿರುವ ಪುರಸಭಾ ಅಧಿಕಾರಿಗಳ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph">ಮಳೆ ಬಂತೆಂದರೆ ಇಂತಹ ಸ್ಥಳಗಳಲ್ಲಿ ರಸ್ತೆ ಯಾವುದು? ಎಂದು ಹುಡಕಾಡಿಕೊಂಡು ಹೋಗಬೇಕಾದ ಪರಿಸ್ಥತಿ ಎದುರಾಗುತ್ತದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ಇದು ರಸ್ತೆಯೋ?, ಕೆರೆಯೋ? ಎಂಬ ಪ್ರಶ್ನೆ ಮೂಡುತ್ತದೆ.</p>



<p class="wp-block-paragraph">ಪ್ರತಿ ಬಾರಿಯೂ ಮಳೆ ಸುರಿದಾಗ ಈ ರಸ್ತೆಯಲ್ಲಿ ವಾಹನ ಸವಾರರ ಸಂಚಾರ ಸರ್ಕಸ್ ಮಾಡಿದಂತೆ. ನೀರಿನಿಂದ ತುಂಬಿದ ರಸ್ತೆಯಲ್ಲಿ ಗುಂಡಿ ಎಲ್ಲಿದೆ? ಎಂದು ನೋಡಿಕೊಂಡು ವಾಹನ ಚಲಾಯಿಸುವುದೇ ದೊಡ್ಡ ಸವಾಲು.</p>



<p class="wp-block-paragraph">ಇನ್ನೂ ಬೈಕ್ ಸವಾರರ ಸಂಕಷ್ಟ ಹೇಳತೀರದು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಪಾದಚಾರಿಗಳು ಈ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಮಳೆ ಸುರಿದ ಕೂಡಲೇ ರಸ್ತೆ ಕೆರೆಯಂತಾಗಲಿದ್ದು, ಜನರು ಹಿಡಿಶಾಪ ಹಾಕಿದ್ದಾರೆ.</p>
<p>The post <a href="https://samyuktakarnataka.in/districts/bengaluru-rural/pothole-in-hosakote-road-trouble-for-motorists/">ದೇವನಹಳ್ಳಿ: ಇದು ರಸ್ತೆಯೋ, ಕೆರೆಯೋ?</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
					<wfw:commentRss>https://samyuktakarnataka.in/districts/bengaluru-rural/pothole-in-hosakote-road-trouble-for-motorists/feed/</wfw:commentRss>
			<slash:comments>0</slash:comments>
		
		
			</item>
		<item>
		<title>ರಾಜ್ಯದಲ್ಲೇ ಮೊದಲು: ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ</title>
		<link>https://samyuktakarnataka.in/districts/bengaluru-rural/gram-panchayat-model-anganwadi-know-project/</link>
					<comments>https://samyuktakarnataka.in/districts/bengaluru-rural/gram-panchayat-model-anganwadi-know-project/#respond</comments>
		
		<dc:creator><![CDATA[Samyuktha Karnataka]]></dc:creator>
		<pubDate>Tue, 23 Sep 2025 05:34:58 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<guid isPermaLink="false">https://samyuktakarnataka.in/?p=80358</guid>

					<description><![CDATA[<p>ಹರ್ಷ.ಪಿ.,ದೇವನಹಳ್ಳಿ ರಾಜ್ಯದಲ್ಲಿಯೇ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 101 ಗ್ರಾಮ ಪಂಚಾಯತಿಗಳಲ್ಲಿಗಳಲ್ಲಿ ತಲಾ ಒಂದೊಂದು ಅಂಗನವಾಡಿಗಳನ್ನು ಮಾದರಿ ಅಂಗನವಾಡಿಗಳಾಗಿ ಉನ್ನತೀಕರಿಸಲು ಕ್ರಮವಹಿಸಲಾಗಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ನಿರ್ಮಾಣ ಮಾಡಲು ಸರಕಾರ ಈಗಾಗಲೇ ಮುಂದಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಜಿಲ್ಲಾ ಪಂಚಾಯಿತಿ ಒತ್ತು ಕೊಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಈಗಾಗಲೇ ಪ್ರತಿ ಗ್ರಾಮ [&#8230;]</p>
<p>The post <a href="https://samyuktakarnataka.in/districts/bengaluru-rural/gram-panchayat-model-anganwadi-know-project/">ರಾಜ್ಯದಲ್ಲೇ ಮೊದಲು: ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಹರ್ಷ.ಪಿ.,ದೇವನಹಳ್ಳಿ</p>



<p class="wp-block-paragraph">ರಾಜ್ಯದಲ್ಲಿಯೇ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 101 ಗ್ರಾಮ ಪಂಚಾಯತಿಗಳಲ್ಲಿಗಳಲ್ಲಿ ತಲಾ ಒಂದೊಂದು ಅಂಗನವಾಡಿಗಳನ್ನು ಮಾದರಿ ಅಂಗನವಾಡಿಗಳಾಗಿ ಉನ್ನತೀಕರಿಸಲು ಕ್ರಮವಹಿಸಲಾಗಿದೆ.</p>



<p class="wp-block-paragraph">ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ನಿರ್ಮಾಣ ಮಾಡಲು ಸರಕಾರ ಈಗಾಗಲೇ ಮುಂದಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಜಿಲ್ಲಾ ಪಂಚಾಯಿತಿ ಒತ್ತು ಕೊಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದೊಂದು ಅಂಗನವಾಡಿಗಳನ್ನು ಆಯ್ಕೆ ಮಾಡಿಕೊಳ್ಳ ಲಾಗಿದೆ.</p>



<p class="wp-block-paragraph">ಈ ಅಂಗನವಾಡಿಗಳಿಗೆ ಗ್ರಾಮ ಪಂಚಾಯಿತಿ ಅನುದಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸಿಎಸ್‌ಆರ್ ಅನುದಾನ ಹಾಗೂ ದಾನಿಗಳ ಮೂಲಕ ಮಕ್ಕಳಿಗೆ ಸಮವಸ್ತ್ರ ಮಳೆ ಕೊಯ್ದು ಅಳವಡಿಕೆ, ಆಟಿಕೆ, ಕೌಶಲ್ಯಗಳ ಕಲಿಕೆಗೆ ಟಿಪಿ ವ್ಯವಸ್ಥೆ ಸೇರಿದಂತೆ ವಿವಿಧ ರೀತಿಯ ಸೌಲಭ್ಯ ನೀಡುವ ಮೂಲಕ ಶಾಲಾ ಪೂರ್ವ ಶಿಕ್ಷಣ ಉತ್ತಮಪಡಿಸಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.</p>



<p class="wp-block-paragraph"><strong>ಏನೇನು ಸೌಲಭ್ಯ ?</strong>: ಈ ಮಾದರಿ ಅಂಗನವಾಡಿಗಳಲ್ಲಿ ಗುಣಮಟ್ಟದ ಶಿಕ್ಷಣ, ಶೌಚಾಲಯ, ನೀರಿನ ಸೋಂಪು ಸೇರಿದಂತೆ ಆಯಾ ಅಂಗನವಾಡಿಗಳ ಅಗತ್ಯತೆಯ ಅನುಸಾರ ವಿವಿಧ ರೀತಿಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ. ವ್ಯವಸ್ಥೆ ಬೋಧನಾ ಹಾಗೂ ಆಟಿಕೆ ಸಾಮಾಗ್ರಿ, ಮಕ್ಕಳ ಸ್ನೇಹಿ ಚೇರ್, ರೌಂಡ್ ಚೀರ್ಸ್, ಭಿತ್ತಿ ಚಿತ್ರಗಳು, ಮಕ್ಕಳಿಗೆ ಸಮವಸ್ತ್ರ ಅಡುಗೆ ಕೋಣೆ, ಮಳೆನೀರು ಕೊಯ್ದು ಪದ್ಧತಿ ಅಳವಡಿಕೆ, ಹೊರಾಂಗಣ ಆಟದ ಸಾಮಾಗ್ರಿ, ಟಿವಿ ಸ್ಟ್ರೀನ್‌ಗಳು, ಕೈತೋಟ, ಮಕ್ಕಳ ಸ್ನೇಹಿ ಹ್ಯಾಂಡ್ ವಾನ್, ಜಮಕಾನ, ಮಕ್ಕಳ ಜಾರುಬಂಡಿ, ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ.</p>



<p class="wp-block-paragraph">ಈ ಕುರಿತು ಡಾ.ಕೆ.ಎನ್ ಅನುರಾಧ ಸಿಇಒ, ಜಿನು, ಬೆಂಗಳೂರು ಗ್ರಾಮಾಂತರ ಮಾತನಾಡಿ, &#8220;ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಅಂಗನವಾಡಿಯನ್ನು ಮಾದರಿ ಅಂಗನವಾಡಿಯಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಗುರುತಿಸಲಾದ ಅಂಗನವಾಡಿಗಳಲ್ಲಿ ಕಟ್ಟಡದ ದುರಸ್ತಿ, ಉನ್ನತೀಕರಣ ಸಂಬಂಧ ಕಾಮಗಾರಿ ಕೈಗೊಳ್ಳಲು ನಿಯಮಾನುಸಾರ ಕ್ರಮವಹಿಸಲು ಸೂಚಿಸಲಾಗಿದೆ&#8221; ಎಂದು ಹೇಳಿದ್ದಾರೆ.</p>



<p class="wp-block-paragraph">ಮುದ್ದಣ್ಣ ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತನಾಡಿ, &#8220;ಜಿಲ್ಲೆಯಲ್ಲಿ ಆಯ್ಕೆ ಮಾಡಲಾದ ಅಂಗನವಾಡಿಗಳನ್ನು ಮಾದರಿ ಅಂಗನವಾಡಿಗಳಾಗಿ ಉನ್ನತೀಕರಿಸಲು ಕ್ರಮವಹಿಸಲಾಗಿದೆ. ಈಗಾಗಲೇ ವಿವಿಧ ಅನುದಾನಗಳ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಬಗ್ಗೆ ಸಭೆಗಳನ್ನು ನಡೆಸಲಾಗಿದೆ&#8221; ಎಂದು ತಿಳಿಸಿದ್ದಾರೆ.</p>
<p>The post <a href="https://samyuktakarnataka.in/districts/bengaluru-rural/gram-panchayat-model-anganwadi-know-project/">ರಾಜ್ಯದಲ್ಲೇ ಮೊದಲು: ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
					<wfw:commentRss>https://samyuktakarnataka.in/districts/bengaluru-rural/gram-panchayat-model-anganwadi-know-project/feed/</wfw:commentRss>
			<slash:comments>0</slash:comments>
		
		
			</item>
		<item>
		<title>ದೇವನಹಳ್ಳಿ: ಕುಸಿದ ತರಕಾರಿ ಬೆಲೆ, ಸಂಕಷ್ಟದಲ್ಲಿ ರೈತರು</title>
		<link>https://samyuktakarnataka.in/districts/bengaluru-rural/prices-of-vegetables-dip-farmers-in-trouble/</link>
					<comments>https://samyuktakarnataka.in/districts/bengaluru-rural/prices-of-vegetables-dip-farmers-in-trouble/#respond</comments>
		
		<dc:creator><![CDATA[Samyuktha Karnataka]]></dc:creator>
		<pubDate>Wed, 17 Sep 2025 06:39:06 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<category><![CDATA[#farmer]]></category>
		<guid isPermaLink="false">https://samyuktakarnataka.in/?p=79687</guid>

					<description><![CDATA[<p>ದೇವನಹಳ್ಳಿಯಲ್ಲಿ ಮಳೆ ಮತ್ತು ವಾತಾವರಣದಲ್ಲಿ ವೈಪರೀತ್ಯದಿಂದಾಗಿ ಹಾಗೂ ಗುಣಮಟ್ಟದ ಕೊರತೆ, ಬೇಡಿಕೆ ಕಾರಣಗಳಿಂದ ತರಕಾರಿ ದರ ಕುಸಿತವಾಗಿದೆ. ಆದ್ದರಿಂದ ರೈತರು ಚಿಂತೆ ಗೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರು ಅಲ್ಪಸ್ವಲ್ಪದ ನೀರಿನಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರ ಇರುವುದರಿಂದ ರೈತರ ತಾವು ಬೆಳೆದ ತರಕಾರಿ, ಹಣ್ಣು ಮತ್ತು ಹೂಗಳನ್ನು ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ರೈತರು ಕೃಷಿ ಅವಲಂಬಿಸಿದ್ದಾರೆ. 69 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆ ಇದ್ದರೆ, 30,000ಕ್ಕೂ ಹೆಚ್ಚು [&#8230;]</p>
<p>The post <a href="https://samyuktakarnataka.in/districts/bengaluru-rural/prices-of-vegetables-dip-farmers-in-trouble/">ದೇವನಹಳ್ಳಿ: ಕುಸಿದ ತರಕಾರಿ ಬೆಲೆ, ಸಂಕಷ್ಟದಲ್ಲಿ ರೈತರು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ದೇವನಹಳ್ಳಿಯಲ್ಲಿ ಮಳೆ ಮತ್ತು ವಾತಾವರಣದಲ್ಲಿ ವೈಪರೀತ್ಯದಿಂದಾಗಿ ಹಾಗೂ ಗುಣಮಟ್ಟದ ಕೊರತೆ, ಬೇಡಿಕೆ ಕಾರಣಗಳಿಂದ ತರಕಾರಿ ದರ ಕುಸಿತವಾಗಿದೆ. ಆದ್ದರಿಂದ ರೈತರು ಚಿಂತೆ ಗೀಡಾಗಿದ್ದಾರೆ.</p>



<p class="wp-block-paragraph">ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರು ಅಲ್ಪಸ್ವಲ್ಪದ ನೀರಿನಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರ ಇರುವುದರಿಂದ ರೈತರ ತಾವು ಬೆಳೆದ ತರಕಾರಿ, ಹಣ್ಣು ಮತ್ತು ಹೂಗಳನ್ನು ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಿದ್ದಾರೆ.</p>



<p class="wp-block-paragraph">ಜಿಲ್ಲೆಯಲ್ಲಿ ಸಾವಿರಾರು ರೈತರು ಕೃಷಿ ಅವಲಂಬಿಸಿದ್ದಾರೆ. 69 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆ ಇದ್ದರೆ, 30,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆ ಬೆಳೆಯಲಾಗುತ್ತಿದೆ. ಇದರ ಜೊತೆಗೆ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಪ್ರದೇಶದಲ್ಲಿ ಹೂ ಬೆಳೆ ಹೆಚ್ಚಾಗಿದೆ.</p>



<p class="wp-block-paragraph">ವಾತಾವರಣ ವೈಪರೀತ್ಯದಿಂದ ಎಲ್ಲಾ ರೀತಿಯ ಬೆಳೆಗಳ ಮೇಲು ಪರಿಣಾಮ ಬೀರಿದೆ. ಬಿತ್ತನೆ ಮಾಡಲಾದ ಬೆಳೆಗಳು ಕೂಡ ಉತ್ತಮ ಇಳುವರಿ ತರುವ ಸಾಧ್ಯತೆ ಕಡಿಮೆ. ಹೂಗಳ ದರವು ಸಹ ಕಡಿಮೆಯಾಗಿದೆ. ದಾಳಿಂಬೆ ಬೆಳೆಯ ಮೇಲೆ ಮಳೆ ಪರಿಣಾಮ ಬೀರಿದೆ. ಪ್ರತಿ ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.</p>



<p class="wp-block-paragraph">30,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆಯುವ ತರಕಾರಿಯನ್ನು ಬೆಂಗಳೂರಿನ ನಗರ, ಚಿಕ್ಕಬಳ್ಳಾಪುರ ಮಾರುಕಟ್ಟೆ, ವಿವಿಧ ಜಿಲ್ಲೆ, ವಿವಿಧ ರಾಜ್ಯ, ಸ್ಥಳೀಯ ಎಪಿಎಂಸಿ, ವಿವಿಧ ಕಂಪನಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.</p>



<p class="wp-block-paragraph">ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆಗಿಂತ 4 ತಾಲೂಕುಗಳಲ್ಲಿ ಶೇಕಡ 100ಕ್ಕಿಂತ ಹೆಚ್ಚು ಮಳೆಯದ ಪರಿಣಾಮದಿಂದ ತರಕಾರಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶ್ರಾವಣ ಮಾಸ ಮುಗಿದ ನಂತರ ತರಕಾರಿಗಳ ಬೇಡಿಕೆ ಕುಸಿದಿದೆ. ಮಾರುಕಟ್ಟೆಗೆ ಬರುವ ತರಕಾರಿಗಳ ಗುಣಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಬಹುತೇಕ ಎಲ್ಲಾ ತರಕಾರಿ 15-20 ರೂಪಾಯಿಗೆ ಮಾರಾಟವಾಗುತ್ತಿದ್ದು. ರೈತರಿಗೆ ಆತಂಕ ಮನೆ ಮಾಡಿದೆ.</p>



<p class="wp-block-paragraph"><strong>ಪಾತಳಕ್ಕೆ ಟೋಮೋಟೋ ದರ</strong>: ಕೆಂಪು ಸುಂದರಿ ಟೋಮೋಟೋ ಬೆಲೆ ಸಹ ಪಾತಾಳಕ್ಕೆ ಇಳಿದಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 18 ರಿಂದ 20 ಎರಡು ಕೆಜಿ ತೂಗುವ ಟೋಮೇಟೊವನ್ನು ಚೀಲಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಟೋಮೇಟೋ ಚೀಲಗಳಿಗೆ ಸಾಮಾನ್ಯವಾಗಿ 250 ರಿಂದ 400 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ 500 ರೂಪಾಯಿಗೂ ಸಿಗುವುದಿಲ್ಲ.</p>



<p class="wp-block-paragraph">ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಬೆಳೆಗೆ ಹಾನಿಯಾಗಿಲ್ಲ. ಉಳಿದಂತೆ ಅನೇಕ ಟೊಮ್ಯಾಟೋ ಮೇಲೆ ಮಚ್ಚೆ ಕಂಡುಬರುತ್ತಿದೆ. ಇದರಿಂದ ಪ್ರತಿ ಚೀಲ ಟೋಮೇಟೋ ಕೇವಲ ನೂರರಿಂದ 120ಗೆ ಮಾರಾಟವಾಗುತ್ತಿದೆ. ಪ್ರತಿ ಕೆಜಿ ಹೇಗೆ 5 ರೂ. ಗಿಂತ ಕಡಿಮೆ ದರ ಸಿಗುತ್ತಿದೆ.</p>



<p class="wp-block-paragraph"><strong>ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ</strong></p>



<ul class="wp-block-list">
<li>ಆಲೂಗಡ್ಡೆ 30</li>



<li>ಈರುಳ್ಳಿ 25 ರಿಂದ 30</li>



<li>ಟೋಮೋಟೋ 15</li>



<li>ಬೀನ್ಸ್ 40</li>



<li>ಎಲೆಕೋಸು 20</li>



<li>ಮೂಲಂಗಿ 20</li>



<li>ಹೀರೆಕಾಯಿ 40</li>



<li>ಕ್ಯಾಪ್ಸಿಕಂ 60</li>



<li>ಕ್ಯಾರೆಟ್ 60 ರೂ ಗಳಿಗೆ ಮಾರಾಟವಾಗುತ್ತಿದೆ.</li>
</ul>



<p class="wp-block-paragraph">ತರಕಾರಿ ವ್ಯಾಪಾರಿ ಆನಂದ್ ಮಾತನಾಡಿ,&#8221;ಮಾರುಕಟ್ಟೆಗಳಿಂದ ತರಕಾರಿ ಸಮರ್ಪಕವಾಗಿ ಬರುತ್ತಿಲ್ಲ. ತರಕಾರಿಗಳು ಬೆಲೆ ಇಳಿಕೆ ಕಂಡಿದೆ. ವಿವಿಧ ಮಾರುಕಟ್ಟೆಗಳಿಂದ ತರಕಾರಿಯನ್ನು ತೆಗೆದುಕೊಂಡು ಬರುತ್ತಿದ್ದೇವೆ&#8221; ಎಂದು ಹೇಳದ್ದಾರೆ.</p>



<p class="wp-block-paragraph">&#8220;ಮಳೆ ಮತ್ತು ಇತರೆ ಸಮಸ್ಯೆಗಳಿಂದ ತರಕಾರಿ ಬೆಳೆಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ತರಕಾರಿ ಬೆಳೆಗೆ ತಾವು ಹಾಕಿದ ಬಂಡವಾಳವು ಸಹ ಬಾರದ ರೀತಿ ಆಗಿದೆ. ಸಾಲ ಹೊಲ ಮಾಡಿ ತರಕಾರಿ ಬೆಳೆದರೂ ಸಹ ಬೆಲೆ ಇಲ್ಲದಿರುವುದು ನಮ್ಮ ನಿದ್ದೆ ಕೆಡಿಸಿದೆ&#8221; ಎಂದು ರೈತ ಮಂಜುನಾಥ್ ಹೇಳಿದ್ದಾರೆ.</p>
<p>The post <a href="https://samyuktakarnataka.in/districts/bengaluru-rural/prices-of-vegetables-dip-farmers-in-trouble/">ದೇವನಹಳ್ಳಿ: ಕುಸಿದ ತರಕಾರಿ ಬೆಲೆ, ಸಂಕಷ್ಟದಲ್ಲಿ ರೈತರು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
					<wfw:commentRss>https://samyuktakarnataka.in/districts/bengaluru-rural/prices-of-vegetables-dip-farmers-in-trouble/feed/</wfw:commentRss>
			<slash:comments>0</slash:comments>
		
		
			</item>
		<item>
		<title>ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ವಿವರ</title>
		<link>https://samyuktakarnataka.in/districts/bengaluru-rural/indias-first-ever-survey-of-sexual-minorities-devadasis-logo-release/</link>
					<comments>https://samyuktakarnataka.in/districts/bengaluru-rural/indias-first-ever-survey-of-sexual-minorities-devadasis-logo-release/#respond</comments>
		
		<dc:creator><![CDATA[Samyuktha Karnataka]]></dc:creator>
		<pubDate>Wed, 10 Sep 2025 03:45:00 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<category><![CDATA[#karnataka]]></category>
		<guid isPermaLink="false">https://samyuktakarnataka.in/?p=78787</guid>

					<description><![CDATA[<p>ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ಸೆಪ್ಟೆಂಬರ್ 15ರಿಂದ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ ಸಮೀಕ್ಷೆ ಪೋಸ್ಟರ್ ಬಿಡುಗಡೆಗೊಳಿಸಿದರು. ಲಿಂಗತ್ವ ಅಲ್ಪಸಂಖ್ಯಾತರಿಂದಲೇ ಸಮೀಕ್ಷೆಗಾಗಿ &#8216;ಕರ್ಮಣಿ&#8217; ಹೆಸರಿನ ವೆಬ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದೆ. ಜಿಲ್ಲೆಯ ಎಲ್ಲಾ 4 ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 09 ರಿಂದ ಸಂಜೆ 06 ವರೆಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು [&#8230;]</p>
<p>The post <a href="https://samyuktakarnataka.in/districts/bengaluru-rural/indias-first-ever-survey-of-sexual-minorities-devadasis-logo-release/">ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ವಿವರ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ಸೆಪ್ಟೆಂಬರ್ 15ರಿಂದ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ ಸಮೀಕ್ಷೆ ಪೋಸ್ಟರ್ ಬಿಡುಗಡೆಗೊಳಿಸಿದರು.</p>



<p class="wp-block-paragraph">ಲಿಂಗತ್ವ ಅಲ್ಪಸಂಖ್ಯಾತರಿಂದಲೇ ಸಮೀಕ್ಷೆಗಾಗಿ &#8216;ಕರ್ಮಣಿ&#8217; ಹೆಸರಿನ ವೆಬ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದೆ. ಜಿಲ್ಲೆಯ ಎಲ್ಲಾ 4 ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 09 ರಿಂದ ಸಂಜೆ 06 ವರೆಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಬಹುದಾಗಿದೆ.</p>



<p class="wp-block-paragraph"><strong>ಸಮೀಕ್ಷೆಗೆ ಚಾಲನೆ</strong>: ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ವಿಧಾನಸೌಧದಲ್ಲಿ ದೇಶದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗಳ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಸಮೀಕ್ಷೆಗೆ ಚಾಲನೆ ನೀಡಿದ್ದರು.</p>



<p class="wp-block-paragraph">ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸಮೀಕ್ಷೆ ನಡೆಯುತ್ತಿದ್ದು, ಮೊದಲ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ.</p>



<p class="wp-block-paragraph">ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿ ಮಹಿಳೆಯರ ಅಹಾಯಕತೆಯನ್ನು ಹೋಗಲಾಡಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಒದಗಿಸಲು ಅವರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಾಜಿ ದೇವದಾಸಿ ಪುನರ್ವಸತಿ ಯೋಜನೆಗಳಿದ್ದು, ಅದನ್ನು ಅರ್ಹರಿಗೆ ತಲುಪಿಸಲು ಇದು ಸಹಾಯಕವಾಗಲಿದೆ.</p>



<p class="wp-block-paragraph">ದಮನಿತ ಮಹಿಳೆಯರ ಅಸಹಾಯಕತೆಯನ್ನು ಹೋಗಲಾಡಿಸುವುದು ಹಾಗೂ ಅವರ ಜೀವನದ ಮಟ್ಟ ಸುಧಾರಣೆ ತರುವ ತೃತೀಯ ಲಿಂಗಿಗಳನ್ನು ಗುರುತಿಸಿ, ಗುರುತಿನ ಚೀಟಿ ನೀಡುವುದು, ಸರ್ಕಾದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದು ಪ್ರಮುಖ ಗುರಿಯಾಗಿದೆ.</p>



<p class="wp-block-paragraph">ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿ ಮಹಿಳೆಯರ ಜೀವನಮಟ್ಟ ಸುಧಾರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಗೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರು ಶೋಷಣೆಯಿಂದ ಒಳಗಾದಲ್ಲಿ ಮತ್ತು ಯಾವುದೇ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲ ಇಲಾಖೆಗಳ ಕರ್ತವ್ಯವಾಗಿರುತ್ತದೆ.</p>
<p>The post <a href="https://samyuktakarnataka.in/districts/bengaluru-rural/indias-first-ever-survey-of-sexual-minorities-devadasis-logo-release/">ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ವಿವರ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
					<wfw:commentRss>https://samyuktakarnataka.in/districts/bengaluru-rural/indias-first-ever-survey-of-sexual-minorities-devadasis-logo-release/feed/</wfw:commentRss>
			<slash:comments>0</slash:comments>
		
		
			</item>
		<item>
		<title>ದೇವನಹಳ್ಳಿ: ಟೊಮ್ಯಾಟೋ ಬೆಲೆ ಕುಸಿತ, ರೈತರು ಕಂಗಾಲು</title>
		<link>https://samyuktakarnataka.in/districts/bengaluru-rural/farmers-leave-tomatoes-in-fields-as-price-drops-at-devanahalli/</link>
					<comments>https://samyuktakarnataka.in/districts/bengaluru-rural/farmers-leave-tomatoes-in-fields-as-price-drops-at-devanahalli/#respond</comments>
		
		<dc:creator><![CDATA[Samyuktha Karnataka]]></dc:creator>
		<pubDate>Mon, 08 Sep 2025 05:08:02 +0000</pubDate>
				<category><![CDATA[ಬೆಂಗಳೂರು ಗ್ರಾಮಾಂತರ]]></category>
		<category><![CDATA[#Bengaluru]]></category>
		<category><![CDATA[#farmer]]></category>
		<category><![CDATA[agriculture]]></category>
		<guid isPermaLink="false">https://samyuktakarnataka.in/?p=78430</guid>

					<description><![CDATA[<p>ದೇವನಹಳ್ಳಿ ರೈತರು ಟೊಮ್ಯಾಟೋ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಲಾಟರಿ ಬೆಳೆ ಎಂದೇ ಖ್ಯಾತಿ ಪಡೆದಿರುವ ಟೊಮ್ಯಾಟೋ ಬೆಲೆ ಇಲ್ಲದೆ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. 15 ದಿನಗಳಿಂದ ಚೇತರಿಸಿಕೊಂಡಿದ್ದ ಟೊಮ್ಯಾಟೋ ದರ ದಿಢೀರನೆ ಕುಸಿದಿದ್ದು, ಬೆಳೆಗಾರರಿಗೆ ಸಂಕಷ್ಟ ತಂದಿದೆ. ಮಳೆ, ಮೋಡ ಕವಿದ ವಾತಾವರಣ, ರೋಗಬಾಧೆಯಿಂದ ಟೊಮ್ಯಾಟೋ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಕಳೆದ 15 ದಿನಗಳಿಂದ ನಿಧಾನಗತಿಯಲ್ಲಿ ಏರುತ್ತಿದ್ದ ಟೊಮ್ಯಾಟೋ ಬೆಲೆ ಈಗ ದಿಢೀರನೆ ಕುಸಿದಿದೆ.ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಒಂದು ಬಾಕ್ಸ್ [&#8230;]</p>
<p>The post <a href="https://samyuktakarnataka.in/districts/bengaluru-rural/farmers-leave-tomatoes-in-fields-as-price-drops-at-devanahalli/">ದೇವನಹಳ್ಳಿ: ಟೊಮ್ಯಾಟೋ ಬೆಲೆ ಕುಸಿತ, ರೈತರು ಕಂಗಾಲು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ದೇವನಹಳ್ಳಿ ರೈತರು ಟೊಮ್ಯಾಟೋ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಲಾಟರಿ ಬೆಳೆ ಎಂದೇ ಖ್ಯಾತಿ ಪಡೆದಿರುವ ಟೊಮ್ಯಾಟೋ ಬೆಲೆ ಇಲ್ಲದೆ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.</p>



<p class="wp-block-paragraph">15 ದಿನಗಳಿಂದ ಚೇತರಿಸಿಕೊಂಡಿದ್ದ ಟೊಮ್ಯಾಟೋ ದರ ದಿಢೀರನೆ ಕುಸಿದಿದ್ದು, ಬೆಳೆಗಾರರಿಗೆ ಸಂಕಷ್ಟ ತಂದಿದೆ. ಮಳೆ, ಮೋಡ ಕವಿದ ವಾತಾವರಣ, ರೋಗಬಾಧೆಯಿಂದ ಟೊಮ್ಯಾಟೋ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.</p>



<p class="wp-block-paragraph">ಕಳೆದ 15 ದಿನಗಳಿಂದ ನಿಧಾನಗತಿಯಲ್ಲಿ ಏರುತ್ತಿದ್ದ ಟೊಮ್ಯಾಟೋ ಬೆಲೆ ಈಗ ದಿಢೀರನೆ ಕುಸಿದಿದೆ.<br>ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 750ರೂ.ಗೆ ಮಾರಾಟವಾಗುತ್ತಿತ್ತು. ಈಗ 250 ರಿಂದ 300ರೂ.ಗೆ ಇಳಿದಿದೆ. ಇದರಿಂದ ಟೊಮ್ಯಾಟೋ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>



<p class="wp-block-paragraph">ಕಳೆದ ವಾರ ಚಿಲ್ಲರೆಯಾಗಿ ಒಂದು ಕೆಜಿ ಟೊಮ್ಯಾಟೋ 40 ರಿಂದ 50ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಈಗ 15 ರಿಂದ 20ರೂ.ಗೆ ಕುಸಿದಿದೆ. ಮಳೆ ಹಾಗೂ ಸಾಲುಸಾಲು ಹಬ್ಬ, ಶುಭಸಮಾರಂಭಗಳ ಹಿನ್ನೆಲೆಯಲ್ಲಿ ಲಾಭದ ಖುಷಿಯಲ್ಲಿದ್ದ ಬೆಳೆಗಾರರಿಗೆ ಬೆಲೆ ಕುಸಿತ ಬರ ಸಿಡಿಲಿನಂತೆ ಬಡಿದಿದೆ.</p>



<p class="wp-block-paragraph">ಟೊಮ್ಯಾಟೋ ಖರೀದಿಸಿ ಸರಬರಾಜು ಮಾಡಿದರೆ ಗುಣಮಟ್ಟವಿಲ್ಲದೆ ಹಣ್ಣು ಬೇಗ ಹಾಳಾಗುತ್ತಿದ್ದು, ನಷ್ಟವಾಗುತ್ತಿದೆ. ಇದರಿಂದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಯೊಬ್ಬರೂ ಹೇಳುತ್ತಾರೆ.</p>



<p class="wp-block-paragraph">ಹವಾಮಾನ ವೈಪರೀತ್ಯ, ರೋಗಬಾಧೆ ಹಾಗೂ ಮಳೆಯಿಂದ ಬೆಳೆ ನಾಶವಾಗಿದ್ದು, ಟೊಮ್ಯಾಟೋ ಬೆಲೆ ಹೆಚ್ಚಳವಾಗಬೇಕಾಗಿತ್ತು. ಆದರೆ, ಬೆಲೆ ಕುಸಿತವಾಗಿದೆ. ಇದಕ್ಕೆ ಟೊಮ್ಯಾಟೋ ಒಂದು ರೀತಿಯ ಲಾಟರಿ ಬೆಳೆಯಾಗಿದ್ದು, ಯಾವಾಗ ಬೆಲೆ ಬರುತ್ತೋ, ಕುಸಿಯುತ್ತೋ ಎಂಬುದನ್ನು ಯಾರೂ ಕೂಡ ಅಂದಾಜು ಮಾಡಲಾಗುವುದಿಲ್ಲ. ಏರಿದರೆ ಒಮ್ಮೆಲೇ ಶತಕ ಬಾರಿಸುತ್ತದೆ, ಮತ್ತೊಮ್ಮೆ ಪಾತಾಳ ತಲುಪಿ ಕೆಜಿಗೆ 10ರೂ., 5ರೂ.ಗೆ ಮಾರಾಟವಾಗುತ್ತದೆ. ಏನೇ ಆದರೂ ನಷ್ಟ ಅನುಭವಿಸುವುದು ಮಾತ್ರ ರೈತರು.</p>



<p class="wp-block-paragraph">&#8220;ಉತ್ತಮ ಇಳುವರಿ ಬಂದರೂ ಸಹ ಟೊಮ್ಯಾಟೋ ಬೆಲೆ ಕುಸಿತ ಕಂಡಿದೆ. ಸಾಲ ಹೊಲ ಮಾಡಿ ಟೊಮ್ಯಾಟೋ ಬೆಳೆದಿದ್ದೇವೆ. ಮಾರುಕಟ್ಟೆಯಲ್ಲಿ ಕೇಳುವರೇ ಇಲ್ಲದಂತಾಗಿದೆ. ಟೊಮ್ಯಾಟೋ ರೋಗ ಬಾದೆ ಕಾಡುತ್ತಿದೆ&#8221; ಎಂದು ರೈತ ರಾಮಾಂಜಿನಪ್ ಹೇಳದ್ದಾರೆ.</p>



<p class="wp-block-paragraph">&#8220;ಟೊಮ್ಯಾಟೋ ಬೆಲೆ ಕುಸಿತ ಕಂಡಿದೆ. ವಿವಿಧ ಮಾರುಕಟ್ಟೆಗಳಿಂದ ಟೊಮ್ಯಾಟೋ ಯಥೇಚ್ಛವಾಗಿ ಬರುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದೆ&#8221; ಎಂದು ವ್ಯಾಪಾರಿ ಆನಂದ್ ತಿಳಿಸಿದ್ದಾರೆ.</p>
<p>The post <a href="https://samyuktakarnataka.in/districts/bengaluru-rural/farmers-leave-tomatoes-in-fields-as-price-drops-at-devanahalli/">ದೇವನಹಳ್ಳಿ: ಟೊಮ್ಯಾಟೋ ಬೆಲೆ ಕುಸಿತ, ರೈತರು ಕಂಗಾಲು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
					<wfw:commentRss>https://samyuktakarnataka.in/districts/bengaluru-rural/farmers-leave-tomatoes-in-fields-as-price-drops-at-devanahalli/feed/</wfw:commentRss>
			<slash:comments>0</slash:comments>
		
		
			</item>
	</channel>
</rss>
