<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>health Archives - Samyukta Karnataka</title>
	<atom:link href="https://samyuktakarnataka.in/tag/health/feed/" rel="self" type="application/rss+xml" />
	<link>https://samyuktakarnataka.in/tag/health/</link>
	<description>News that connects you to Karnataka since 1921</description>
	<lastBuildDate>Sat, 06 Jun 2026 14:08:47 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>health Archives - Samyukta Karnataka</title>
	<link>https://samyuktakarnataka.in/tag/health/</link>
	<width>32</width>
	<height>32</height>
</image> 
	<item>
		<title>ವಯಸ್ಸಿನ ಹಂಗಿಲ್ಲದೆ ಕಾಡುವ ಕೀಲು ನೋವು: ನಿರ್ಲಕ್ಷ್ಯ ಬೇಡ, ಈ ಕ್ರಮಗಳನ್ನು ಪಾಲಿಸಿ</title>
		<link>https://samyuktakarnataka.in/health/joint-pain-that-bothers-you-regardless-of-age-dont-ignore-it/</link>
		
		<dc:creator><![CDATA[Samyuktha Karnataka]]></dc:creator>
		<pubDate>Sat, 06 Jun 2026 14:08:46 +0000</pubDate>
				<category><![CDATA[ಆರೋಗ್ಯ]]></category>
		<category><![CDATA[Don't ignore]]></category>
		<category><![CDATA[good health]]></category>
		<category><![CDATA[health]]></category>
		<category><![CDATA[Health benefits]]></category>
		<category><![CDATA[Health Tips]]></category>
		<category><![CDATA[Joint pain]]></category>
		<category><![CDATA[regardless]]></category>
		<guid isPermaLink="false">https://samyuktakarnataka.in/?p=100031</guid>

					<description><![CDATA[<p>ವಯಸ್ಸಾಗುತ್ತಿದ್ದಂತೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲೂ ಕೀಲು ನೋವಿನ (Joint Pain) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬದಲಾದ ಜೀವನಶೈಲಿ, ತಪ್ಪು ಆಹಾರ ಪದ್ಧತಿ ಮತ್ತು ದೈಹಿಕ ಶ್ರಮದ ಕೊರತೆಯಿಂದಾಗಿ ಈ ಸಮಸ್ಯೆ ಸಮಾಜದಲ್ಲಿ ಸಾಮಾನ್ಯವಾಗುತ್ತಿದೆ. ಕೀಲು ನೋವಿಗೆ ಪ್ರಮುಖ ಕಾರಣಗಳು, ಅದಕ್ಕಿರುವ ಪರಿಹಾರ ಹಾಗೂ ವಹಿಸಬೇಕಾದ ಮುನ್ನೇಚ್ಚರಿಕೆ ಕ್ರಮಗಳು ಯಾವವು? ಇಲ್ಲಿದೆ ಮಾಹಿತಿ. ಕೀಲು ನೋವಿಗೆ ಮುಖ್ಯ ಕಾರಣಗಳು: ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುವುದು, ಕೀಲುಗಳ ನಡುವಿನ ಕಾರ್ಟಿಲೇಜ್ ಸವೆಯುವುದು ಮತ್ತು ಕ್ಯಾಲ್ಸಿಯಂ ಅಥವಾ [&#8230;]</p>
<p>The post <a href="https://samyuktakarnataka.in/health/joint-pain-that-bothers-you-regardless-of-age-dont-ignore-it/">ವಯಸ್ಸಿನ ಹಂಗಿಲ್ಲದೆ ಕಾಡುವ ಕೀಲು ನೋವು: ನಿರ್ಲಕ್ಷ್ಯ ಬೇಡ, ಈ ಕ್ರಮಗಳನ್ನು ಪಾಲಿಸಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ವಯಸ್ಸಾಗುತ್ತಿದ್ದಂತೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲೂ ಕೀಲು ನೋವಿನ (Joint Pain) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬದಲಾದ ಜೀವನಶೈಲಿ, ತಪ್ಪು ಆಹಾರ ಪದ್ಧತಿ ಮತ್ತು ದೈಹಿಕ ಶ್ರಮದ ಕೊರತೆಯಿಂದಾಗಿ ಈ ಸಮಸ್ಯೆ ಸಮಾಜದಲ್ಲಿ ಸಾಮಾನ್ಯವಾಗುತ್ತಿದೆ. ಕೀಲು ನೋವಿಗೆ ಪ್ರಮುಖ ಕಾರಣಗಳು, ಅದಕ್ಕಿರುವ ಪರಿಹಾರ ಹಾಗೂ ವಹಿಸಬೇಕಾದ ಮುನ್ನೇಚ್ಚರಿಕೆ ಕ್ರಮಗಳು ಯಾವವು? ಇಲ್ಲಿದೆ ಮಾಹಿತಿ.</p>



<p class="wp-block-paragraph"><strong>ಕೀಲು ನೋವಿಗೆ ಮುಖ್ಯ ಕಾರಣಗಳು: </strong>ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುವುದು, ಕೀಲುಗಳ ನಡುವಿನ ಕಾರ್ಟಿಲೇಜ್ ಸವೆಯುವುದು ಮತ್ತು ಕ್ಯಾಲ್ಸಿಯಂ ಅಥವಾ ವಿಟಮಿನ್ ʻಡಿʼ ಕೊರತೆಯಿಂದಾಗಿ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಆರ್ಥರೈಟಿಸ್ (ಸಂಧಿವಾತ), ಬೊಜ್ಜು ಅಥವಾ ದೇಹದ ಅತಿಯಾದ ತೂಕ ಕೀಲುಗಳ ಮೇಲೆ ಒತ್ತಡ ಹೇರುವುದರಿಂದ ನೋವು ಉಲ್ಬಣಗೊಳ್ಳುತ್ತದೆ. ದೈಹಿಕ ಚಟುವಟಿಕೆ ಇಲ್ಲದೆ ಒಂದೇ ಕಡೆ ದೀರ್ಘಕಾಲ ಕುಳಿತು ಕೆಲಸ ಮಾಡುವುದು ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ.</p>



<p class="wp-block-paragraph"><strong>ಪರಿಹಾರ ಮತ್ತು ಚಿಕಿತ್ಸೆ:</strong> ಆರಂಭಿಕ ಹಂತದ ಕೀಲು ನೋವಿಗೆ ನಿಯಮಿತ ವ್ಯಾಯಾಮ, ಯೋಗ ಮತ್ತು ಫಿಸಿಯೋಥೆರಪಿ ಉತ್ತಮ ಪರಿಹಾರ ನೀಡುತ್ತವೆ. ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲ ಸಮೃದ್ಧವಾಗಿರುವ ಹಾಲು, ಮೊಸರು, ಸೊಪ್ಪು ಹಾಗೂ ಒಣ ಹಣ್ಣುಗಳನ್ನು ಬಳಸಬೇಕು. ನೋವು ಹೆಚ್ಚಿದ್ದಾಗ ವೈದ್ಯರ ಸಲಹೆಯ ಮೇರೆಗೆ ಸೂಕ್ತ ಔಷಧಿ ಅಥವಾ ತೈಲ ಮರ್ದನ ಮಾಡಿಕೊಳ್ಳಬಹುದು. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕೀಲುಗಳ ಆರೋಗ್ಯಕ್ಕೆ ಅತ್ಯಂತ ಅಗತ್ಯ.</p>



<p class="wp-block-paragraph"><strong>ತೆಗೆದುಕೊಳ್ಳಬೇಕಾದ ಮುನ್ನೇಚ್ಚರಿಕೆ: </strong>ಕೀಲು ನೋವು ಇರುವವರು ಅತಿಯಾಗಿ ಭಾರ ಎತ್ತುವುದನ್ನು ಮತ್ತು ಕಠಿಣವಾದ ಮೆಟ್ಟಿಲು ಹತ್ತುವುದನ್ನು ನಿಲ್ಲಿಸಬೇಕು. ದೀರ್ಘಕಾಲ ಒಂದೇ ಸಮನೆ ಕುಳಿತುಕೊಳ್ಳದೆ, ಮಧ್ಯೆ ಮಧ್ಯೆ ಸಣ್ಣದಾಗಿ ನಡೆದಾಡಬೇಕು. ಧೂಮಪಾನ ಹಾಗೂ ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು.</p>



<p class="wp-block-paragraph"><strong>ಓದುಗರ ಗಮನಕ್ಕೆ:</strong> ನೋವು ನಿವಾರಕ ಮಾತ್ರೆಗಳನ್ನು ಸ್ವಯಂ ವೈದ್ಯ ಪದ್ಧತಿಯಂತೆ ಅತಿಯಾಗಿ ಬಳಸಬಾರದು, ಇದು ಕಿಡ್ನಿಗಳ ಮೇಲೆ ಪರಿಣಾಮ ಬೀರಬಹುದು. ನೋವು ತೀವ್ರವಾಗಿದ್ದರೆ ತಕ್ಷಣವೇ ಮೂಳೆ ರೋಗ ತಜ್ಞರನ್ನು (Orthopedic) ಭೇಟಿಯಾಗಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.</p>
<p>The post <a href="https://samyuktakarnataka.in/health/joint-pain-that-bothers-you-regardless-of-age-dont-ignore-it/">ವಯಸ್ಸಿನ ಹಂಗಿಲ್ಲದೆ ಕಾಡುವ ಕೀಲು ನೋವು: ನಿರ್ಲಕ್ಷ್ಯ ಬೇಡ, ಈ ಕ್ರಮಗಳನ್ನು ಪಾಲಿಸಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಆರೋಗ್ಯ ಕ್ಷೇತ್ರದಲ್ಲಿ ಭಾರತೀಯ ಟೆಲಿಸರ್ಜರಿಗೆ ಜಾಗತಿಕ ಮನ್ನಣೆ</title>
		<link>https://samyuktakarnataka.in/news/india/india-sets-world-record-longest-robotic-heart-telesurgery-guyana-indore/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 05 Jun 2026 11:31:35 +0000</pubDate>
				<category><![CDATA[ದೇಶ]]></category>
		<category><![CDATA[health]]></category>
		<category><![CDATA[Health care]]></category>
		<category><![CDATA[india]]></category>
		<guid isPermaLink="false">https://samyuktakarnataka.in/?p=99899</guid>

					<description><![CDATA[<p>ಗಡಿಗಳಾಚೆ ವೈದ್ಯಕೀಯ ಕ್ರಾಂತಿ: ಭಾರತ-ಗಯಾನಾ ನಡುವೆ 20 ಸಾವಿರ ಕಿ.ಮೀ ದೂರದಿಂದ ಬೈಪಾಸ್ ಶಸ್ತ್ರಚಿಕಿತ್ಸೆ ನವದೆಹಲಿ: ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಗಯಾನಾ ಮತ್ತು ಭಾರತದ ನಡುವೆ ಸುಮಾರು 20,000 ಕಿಲೋಮೀಟರ್ ದೂರದಲ್ಲಿ ವಿಶ್ವದ ಅತಿ (ದೂರದ) ಉದ್ದದ ರೋಬೋಟ್ ನೆರವಿನ ಹೃದಯ ಟೆಲಿಸರ್ಜರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಭಾರತೀಯ ಮೂಲದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಸುಧೀರ್ ಶ್ರೀವಾಸ್ತವ ಅವರು ಗಯಾನಾದಿಂದ ಭಾರತದ ಇಂದೋರ್‌ನಲ್ಲಿದ್ದ [&#8230;]</p>
<p>The post <a href="https://samyuktakarnataka.in/news/india/india-sets-world-record-longest-robotic-heart-telesurgery-guyana-indore/">ಆರೋಗ್ಯ ಕ್ಷೇತ್ರದಲ್ಲಿ ಭಾರತೀಯ ಟೆಲಿಸರ್ಜರಿಗೆ ಜಾಗತಿಕ ಮನ್ನಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಗಡಿಗಳಾಚೆ ವೈದ್ಯಕೀಯ ಕ್ರಾಂತಿ: ಭಾರತ-ಗಯಾನಾ ನಡುವೆ 20 ಸಾವಿರ ಕಿ.ಮೀ ದೂರದಿಂದ ಬೈಪಾಸ್ ಶಸ್ತ್ರಚಿಕಿತ್ಸೆ</strong></p>



<p class="wp-block-paragraph"><strong>ನವದೆಹಲಿ: </strong>ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಗಯಾನಾ ಮತ್ತು ಭಾರತದ ನಡುವೆ ಸುಮಾರು 20,000 ಕಿಲೋಮೀಟರ್ ದೂರದಲ್ಲಿ ವಿಶ್ವದ ಅತಿ (ದೂರದ) ಉದ್ದದ ರೋಬೋಟ್ ನೆರವಿನ ಹೃದಯ ಟೆಲಿಸರ್ಜರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.</p>



<p class="wp-block-paragraph">ಭಾರತೀಯ ಮೂಲದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಸುಧೀರ್ ಶ್ರೀವಾಸ್ತವ ಅವರು ಗಯಾನಾದಿಂದ ಭಾರತದ ಇಂದೋರ್‌ನಲ್ಲಿದ್ದ ರೋಗಿಯ ಮೇಲೆ ರೋಬೋಟ್ ನೆರವಿನ ಪರಿಧಮನಿ ಬೈಪಾಸ್ (Coronary Artery Bypass) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. ಸುಮಾರು ನಾಲ್ಕು ಗಂಟೆ 50 ನಿಮಿಷಗಳ ಕಾಲ ನಡೆದ ಈ ಕಾರ್ಯಾಚರಣೆ ವೈದ್ಯಕೀಯ ಕ್ಷೇತ್ರದಲ್ಲಿ ದೂರಶಸ್ತ್ರಚಿಕಿತ್ಸೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><a href="https://samyuktakarnataka.in/news/india/annamalai-resigns-from-bjp-post-after-tamil-nadu-election-setback/">BJP ನಾಯಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ</a></strong></p>



<p class="wp-block-paragraph">ಈ ಶಸ್ತ್ರಚಿಕಿತ್ಸೆಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾದ SSI Mantra Robotic Surgical System ಬಳಸಿ ನಡೆಸಲಾಗಿದ್ದು, ಗಯಾನಾದ Georgetown Public Hospital Corporation ಮತ್ತು IRCAD India ನಡುವೆ ತಂತ್ರಜ್ಞಾನ ಸಂಪರ್ಕ ಕಲ್ಪಿಸಲಾಗಿತ್ತು.</p>



<p class="wp-block-paragraph"><strong>ಗಯಾನಾ ವಜ್ರ ಮಹೋತ್ಸವದ ದಿನವೇ ಐತಿಹಾಸಿಕ ಸಾಧನೆ:</strong> ಗಯಾನಾದ ವಜ್ರ ಮಹೋತ್ಸವ ಆಚರಣೆಯ ಅಂಗವಾಗಿ ಮೇ 26ರಂದು ಈ ಮಹತ್ವದ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಸುಮಾರು 20,000 ಕಿಲೋಮೀಟರ್ ದೂರವನ್ನು ಮೀರಿ ನಡೆಸಲಾದ ಈ ಕಾರ್ಯಾಚರಣೆಯು ವಿಶ್ವದಲ್ಲೇ ಅತಿ (ದೂರದ) ಉದ್ದದ ಟೆಲಿಸರ್ಜರಿ ಎಂಬ ದಾಖಲೆಗೆ ಪಾತ್ರವಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><a href="https://samyuktakarnataka.in/news/india/annamalai-new-political-party-bjp-no-loss-says-nainar-nagendran/" type="link" id="https://samyuktakarnataka.in/news/india/annamalai-new-political-party-bjp-no-loss-says-nainar-nagendran/">ರಾಜೀನಾಮೆಯಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ</a></strong></p>



<p class="wp-block-paragraph">ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಈ ಕುರಿತು ಮಾತನಾಡಿ, &#8220;ನಮ್ಮ ವಜ್ರ ಮಹೋತ್ಸವದ ದಿನವೇ ಮಹತ್ವದ ಹೃದಯ ಟೆಲಿಸರ್ಜರಿ ಯಶಸ್ವಿಯಾಗಿ ನೆರವೇರಿದೆ. ಡಾ. ಸುಧೀರ್ ಶ್ರೀವಾಸ್ತವ ಅವರು ಗಯಾನಾದಿಂದ ಭಾರತದಲ್ಲಿರುವ ರೋಗಿಗೆ SSI ರೊಬೊಟಿಕ್ ವ್ಯವಸ್ಥೆಯ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದರು. ಇದು ವೈದ್ಯಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದೆ&#8221; ಎಂದು ಹೇಳಿದ್ದಾರೆ.</p>



<figure class="wp-block-embed alignleft is-type-rich is-provider-x wp-block-embed-x"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಭಾರತ ಮತ್ತು ಗಯಾನಾ ನಡುವೆ ಸುಮಾರು 20,000 ಕಿ.ಮೀ ದೂರದಲ್ಲಿ ವಿಶ್ವದ ಅತಿ ಉದ್ದದ (ದೂರದ) ರೊಬೋಟ್ ನೆರವಿನ ಹೃದಯ ಟೆಲಿಸರ್ಜರಿ ಯಶಸ್ವಿಯಾಗಿದೆ. ಭಾರತೀಯ ತಂತ್ರಜ್ಞಾನ SSI ಮಂತ್ರ ಬಳಸಿ ಡಾ. ಸುಧೀರ್ ಶ್ರೀವಾಸ್ತವ ವಿಶ್ವ ದಾಖಲೆಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.<a href="https://t.co/HmYVmbNRPK">https://t.co/HmYVmbNRPK</a> <a href="https://t.co/y079fCP2VP">pic.twitter.com/y079fCP2VP</a></p>&mdash; Samyukta Karnataka (@SamyuktaKarnatk) <a href="https://x.com/SamyuktaKarnatk/status/2062859949588582680?ref_src=twsrc%5Etfw">June 5, 2026</a></blockquote><script async src="https://platform.x.com/widgets.js" charset="utf-8"></script>
</div></figure>



<p class="wp-block-paragraph"><strong>ಭಾರತೀಯ ತಂತ್ರಜ್ಞಾನದ ಜಾಗತಿಕ ಪ್ರದರ್ಶನ :</strong> ಈ ಕಾರ್ಯಾಚರಣೆಯಲ್ಲಿ ಬಳಸಲಾದ SSI ಮಂತ್ರ ಮತ್ತು SSI ಮಂತ್ರಾಸನ ರೊಬೊಟಿಕ್ ವ್ಯವಸ್ಥೆಗಳು ಸಂಪೂರ್ಣವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳಾಗಿವೆ. ವೈದ್ಯಕೀಯ ರೊಬೊಟಿಕ್ಸ್ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ಮಹತ್ವದ ಉದಾಹರಣೆಯಾಗಿ ಈ ಸಾಧನೆ ಪರಿಗಣಿಸಲಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><a href="https://samyuktakarnataka.in/districts/bengaluru/ramalinga-reddy-resigns-as-minister-over-bengaluru-development-portfolio-row/">ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ರಾಮಲಿಂಗಾ ರೆಡ್ಡಿ</a></strong></p>



<p class="wp-block-paragraph">ತಜ್ಞರ ಪ್ರಕಾರ, ಈ ತಂತ್ರಜ್ಞಾನವು ಭವಿಷ್ಯದಲ್ಲಿ ವಿಶ್ವದ ಯಾವುದೇ ಭಾಗದಲ್ಲಿರುವ ರೋಗಿಗಳಿಗೆ ಪರಿಣಿತ ವೈದ್ಯರ ಸೇವೆಯನ್ನು ದೂರದಿಂದಲೇ ಒದಗಿಸುವ ಅವಕಾಶವನ್ನು ಹೆಚ್ಚಿಸಲಿದೆ. ವಿಶೇಷವಾಗಿ ಗ್ರಾಮೀಣ, ದೂರದ ಹಾಗೂ ಆರೋಗ್ಯ ಸೌಲಭ್ಯಗಳ ಕೊರತೆ ಇರುವ ಪ್ರದೇಶಗಳಿಗೆ ಇದು ವರದಾನವಾಗಬಹುದು.</p>



<p class="wp-block-paragraph"><strong>ಭಾರತ-ಗಯಾನಾ ಆರೋಗ್ಯ ಸಹಕಾರಕ್ಕೆ ಹೊಸ ಬಲ: </strong>ಭಾರತಕ್ಕೆ ಗಯಾನಾದ ಹೈಕಮಿಷನರ್ ಧರ್ಮಕುಮಾರ್ ಸೀರಾಜ್ ಮಾತನಾಡಿ, ಭಾರತ ಮತ್ತು ಗಯಾನಾ ನಡುವಿನ ದೀರ್ಘಕಾಲದ ರಾಜತಾಂತ್ರಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿಗೆ ಈ ಸಾಧನೆ ಹೊಸ ಆಯಾಮ ನೀಡಿದೆ ಎಂದು ಹೇಳಿದ್ದಾರೆ.</p>



<p class="wp-block-paragraph">&#8220;ಗಯಾನಾವನ್ನು ಕೆರಿಬಿಯನ್ ಮತ್ತು ಲ್ಯಾಟಿನ್ ಅಮೆರಿಕಾದ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಭಾರತದೊಂದಿಗೆ ಇರುವ ಸಹಕಾರವು ಆರೋಗ್ಯ ಕ್ಷೇತ್ರದಲ್ಲಿ ವಿಶ್ವಮಟ್ಟದ ಸೇವೆಗಳನ್ನು ಒದಗಿಸಲು ನೆರವಾಗುತ್ತಿದೆ&#8221; ಎಂದು ಅವರು ತಿಳಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><a href="https://samyuktakarnataka.in/news/karnataka/kh-muniyappa-expresses-dissatisfaction-over-portfolio-allocation-in-dk-shivakumar-cabinet/">ರಾಮಲಿಂಗಾ ರೆಡ್ಡಿ ಬಳಿಕ ಮುನಿಯಪ್ಪ ಅಸಮಾಧಾನ: ಡಿಕೆಶಿ ಸಂಪುಟದಲ್ಲಿ ಭಿನ್ನಮತ ತೀವ್ರ?</a></strong></p>



<p class="wp-block-paragraph"><strong>ಆರೋಗ್ಯ ಸೇವೆಯ ಭವಿಷ್ಯಕ್ಕೆ ಹೊಸ ದಿಕ್ಕು : </strong>ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ, ಈ ಸಾಧನೆಯು ಕೇವಲ ವಿಶ್ವ ದಾಖಲೆ ಮಾತ್ರವಲ್ಲ, ಆರೋಗ್ಯ ಸೇವೆಯ ಭವಿಷ್ಯ ಹೇಗಿರಬಹುದು ಎಂಬುದಕ್ಕೂ ಸ್ಪಷ್ಟ ಚಿತ್ರಣ ನೀಡಿದೆ. ದೂರದ ಪ್ರದೇಶಗಳಲ್ಲಿರುವ ರೋಗಿಗಳಿಗೆ ಉನ್ನತ ಮಟ್ಟದ ಚಿಕಿತ್ಸೆಯನ್ನು ತಲುಪಿಸುವಲ್ಲಿ ಟೆಲಿಸರ್ಜರಿ ಪ್ರಮುಖ ಪಾತ್ರ ವಹಿಸಲಿದೆ.</p>



<p class="wp-block-paragraph">ಭಾರತವು ವೈದ್ಯಕೀಯ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಈ ಸಾಧನೆ ಜಾಗತಿಕ ಆರೋಗ್ಯ ವ್ಯವಸ್ಥೆಯಲ್ಲಿ ಭಾರತದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="lhQGuueBjz"><a href="https://samyuktakarnataka.in/news/india/iit-roorkee-denies-jee-advanced-data-breach-claims/">JEE Advanced ಡೇಟಾ ಸೋರಿಕೆ ಆರೋಪ ತಳ್ಳಿಹಾಕಿದ IIT Roorkee</a></blockquote><iframe class="wp-embedded-content" sandbox="allow-scripts" security="restricted"  title="“JEE Advanced ಡೇಟಾ ಸೋರಿಕೆ ಆರೋಪ ತಳ್ಳಿಹಾಕಿದ IIT Roorkee” — Samyukta Karnataka" src="https://samyuktakarnataka.in/news/india/iit-roorkee-denies-jee-advanced-data-breach-claims/embed/#?secret=lleKClyiI6#?secret=lhQGuueBjz" data-secret="lhQGuueBjz" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/india-sets-world-record-longest-robotic-heart-telesurgery-guyana-indore/">ಆರೋಗ್ಯ ಕ್ಷೇತ್ರದಲ್ಲಿ ಭಾರತೀಯ ಟೆಲಿಸರ್ಜರಿಗೆ ಜಾಗತಿಕ ಮನ್ನಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಬೇಸಿಗೆಯಲ್ಲಿ ಮಾವಿನ ಹಣ್ಣು, ಜ್ಯೂಸ್ ಸೇವನೆ: ಆರೋಗ್ಯಕ್ಕೆ ಲಾಭವೋ? ನಷ್ಟವೋ?</title>
		<link>https://samyuktakarnataka.in/%e0%b2%86%e0%b2%b9%e0%b2%be%e0%b2%b0/consuming-mango-fruit-and-juice-in-summer-is-it-beneficial-for-harmful/</link>
		
		<dc:creator><![CDATA[Samyuktha Karnataka]]></dc:creator>
		<pubDate>Fri, 05 Jun 2026 10:33:55 +0000</pubDate>
				<category><![CDATA[ಆಹಾರ]]></category>
		<category><![CDATA[#Summer]]></category>
		<category><![CDATA[Harmful]]></category>
		<category><![CDATA[health]]></category>
		<category><![CDATA[juice]]></category>
		<category><![CDATA[mango fruit]]></category>
		<category><![CDATA[summerseason]]></category>
		<guid isPermaLink="false">https://samyuktakarnataka.in/?p=99891</guid>

					<description><![CDATA[<p>ಬೆಂಗಳೂರು: ತೀವ್ರವಾದ ಬೇಸಿಗೆಯ ಬಿಸಿಲಿನಿಂದ ನಿಮಗೆ ಹಣ್ಣುಗಳ ರಾಜ ಮಾವು ಒಂದು ವರದಾನ. ಹಾಗೇ ಇದು ಮಾವು ಸೀಸನ್‌ ಆಗಿರುವದರಿಂದ ನಿಮ್ಮ ಹೆಚ್ಚು ಆಕರ್ಷೀಸುವ ಹಣ್ಣು ಇದಾಗಿದ್ದು, ಇದು ಬಿಸಿಲಿನ ಬೇಗೆಯನ್ನು ತಣಿಸಲು ಮತ್ತು ದೇಹಕ್ಕೆ ತತ್‌ಕ್ಷಣದ ಶಕ್ತಿ ನೀಡಲು ಮಾವಿನ ಹಣ್ಣು ಹಾಗೂ ಅದರ ರಸ (ಜ್ಯೂಸ್) ಅತ್ಯುತ್ತಮ ಆಯ್ಕೆಯಾಗಿದೆ. ಆದ್ರೆ ತಜ್ಞರ ಪ್ರಕಾರ ಇದನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕ್ಕೆ ಲಾಭದಾಯಕ, ಇಲ್ಲದಿದ್ದರೆ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು. ಮಾವಿನ ಹಣ್ಣಿನ ಪ್ರಯೋಜನ: ಬೇಸಿಗೆಯಲ್ಲಿ ಮಾವಿನ [&#8230;]</p>
<p>The post <a href="https://samyuktakarnataka.in/%e0%b2%86%e0%b2%b9%e0%b2%be%e0%b2%b0/consuming-mango-fruit-and-juice-in-summer-is-it-beneficial-for-harmful/">ಬೇಸಿಗೆಯಲ್ಲಿ ಮಾವಿನ ಹಣ್ಣು, ಜ್ಯೂಸ್ ಸೇವನೆ: ಆರೋಗ್ಯಕ್ಕೆ ಲಾಭವೋ? ನಷ್ಟವೋ?</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು: </strong>ತೀವ್ರವಾದ ಬೇಸಿಗೆಯ ಬಿಸಿಲಿನಿಂದ ನಿಮಗೆ ಹಣ್ಣುಗಳ ರಾಜ ಮಾವು ಒಂದು ವರದಾನ. ಹಾಗೇ ಇದು ಮಾವು ಸೀಸನ್‌ ಆಗಿರುವದರಿಂದ ನಿಮ್ಮ ಹೆಚ್ಚು ಆಕರ್ಷೀಸುವ ಹಣ್ಣು ಇದಾಗಿದ್ದು, ಇದು ಬಿಸಿಲಿನ ಬೇಗೆಯನ್ನು ತಣಿಸಲು ಮತ್ತು ದೇಹಕ್ಕೆ ತತ್‌ಕ್ಷಣದ ಶಕ್ತಿ ನೀಡಲು ಮಾವಿನ ಹಣ್ಣು ಹಾಗೂ ಅದರ ರಸ (ಜ್ಯೂಸ್) ಅತ್ಯುತ್ತಮ ಆಯ್ಕೆಯಾಗಿದೆ. ಆದ್ರೆ ತಜ್ಞರ ಪ್ರಕಾರ ಇದನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕ್ಕೆ ಲಾಭದಾಯಕ, ಇಲ್ಲದಿದ್ದರೆ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು.</p>



<p class="wp-block-paragraph"><strong>ಮಾವಿನ ಹಣ್ಣಿನ ಪ್ರಯೋಜನ:</strong> ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೇವನೆಯಿಂದ ದೇಹಕ್ಕೆ ಅಗಾಧವಾದ ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್ ‘ಎ’ ಮತ್ತು ‘ಸಿ’ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ಉಂಟಾಗುವ ನಿರ್ಜಲೀಕರಣ (Dehydration) ಸಮಸ್ಯೆಯನ್ನು ಮಾವಿನ ಜ್ಯೂಸ್ ತಡೆಯುತ್ತದೆ. ಮಾವಿನಲ್ಲಿರುವ ಹೆಚ್ಚಿನ ನಾರಿನಂಶ (Fiber) ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ… ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ತ್ವಚೆಯ ಆರೋಗ್ಯವನ್ನು ಕಾಪಾಡಿ, ಬಿಸಿಲಿನಿಂದ ಚರ್ಮ ಕಪ್ಪಾಗುವುದನ್ನು ತಪ್ಪಿಸುತ್ತವೆ. ಪ್ರಮುಖವಾಗಿ, ಸುಡುವ ಬಿಸಿಲಿನಲ್ಲಿ ಸುಸ್ತಾದಾಗ ಒಂದು ಲೋಟ ಮಾವಿನ ಜ್ಯೂಸ್ ಕುಡಿದರೆ ದೇಹಕ್ಕೆ ತಕ್ಷಣದ ಗ್ಲೂಕೋಸ್ ಮತ್ತು ಎನರ್ಜಿ ಸಿಗುತ್ತದೆ.</p>



<p class="wp-block-paragraph"><strong>ಅತಿಯಾದ ಸೇವನೆಯಿಂದಾಗುವ ಪರಿಣಾಮಗಳು:</strong> ಯಾವುದೇ ವಸ್ತುವಾದರೂ ಅತಿಯಾದರೆ ತೊಂದರೆ ತಪ್ಪಿದ್ದಲ್ಲ. ಮಾವಿನ ಹಣ್ಣು ಸ್ವಭಾವತಃ ಉಷ್ಣ ಗುಣವನ್ನು ಹೊಂದಿದೆ. ಹಾಗಾಗಿ, ಬಿಸಿಲಿನಲ್ಲಿ ಅತಿಯಾಗಿ ಮಾವಿನ ಹಣ್ಣು ತಿಂದರೆ ದೇಹದ ಉಷ್ಣತೆ ಮತ್ತಷ್ಟು ಹೆಚ್ಚಿ, ಮುಖದ ಮೇಲೆ ಮೊಡವೆಗಳು ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್‌ಗಳಲ್ಲಿ ಹೆಚ್ಚಿನ ಸಕ್ಕರೆ ಬಳಸುವುದರಿಂದ ತೂಕ ಹೆಚ್ಚಾಗುವ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ (Diabetes) ಏರಿಕೆಯಾಗುವ ಅಪಾಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ ಅತಿಯಾದ ಸೇವನೆ ಭೇದಿ (Loose motion) ಮತ್ತು ಹೊಟ್ಟೆ ನೋವಿಗೂ ಕಾರಣವಾಗಬಹುದು.</p>



<p class="wp-block-paragraph"><strong>ಓದುಗರ ಗಮನಕ್ಕೆ: </strong>ಬೇಸಿಗೆಯಲ್ಲಿ ಮಾವಿನ ಹಣ್ಣಿನ ಪೂರ್ಣ ಲಾಭ ಪಡೆಯಲು, ಹಣ್ಣನ್ನು ತಿನ್ನುವ ಮುನ್ನ ಕನಿಷ್ಠ ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಅದರ ಉಷ್ಣಾಂಶ ಕಡಿಮೆಯಾಗುತ್ತದೆ. ಮಾವಿನ ಜ್ಯೂಸ್ ಮಾಡುವಾಗ ಪ್ರತ್ಯೇಕವಾಗಿ ಸಕ್ಕರೆ ಸೇರಿಸುವುದನ್ನು ನಿಲ್ಲಿಸಿ, ನೈಸರ್ಗಿಕ ರೂಪದಲ್ಲಿ ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಹಿತಕರ.</p>
<p>The post <a href="https://samyuktakarnataka.in/%e0%b2%86%e0%b2%b9%e0%b2%be%e0%b2%b0/consuming-mango-fruit-and-juice-in-summer-is-it-beneficial-for-harmful/">ಬೇಸಿಗೆಯಲ್ಲಿ ಮಾವಿನ ಹಣ್ಣು, ಜ್ಯೂಸ್ ಸೇವನೆ: ಆರೋಗ್ಯಕ್ಕೆ ಲಾಭವೋ? ನಷ್ಟವೋ?</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು: 3,900 ಕಿ.ಮೀ ದೂರದಿಂದ ಯಶಸ್ವಿ ಟೆಲಿ-ಸರ್ಜರಿ</title>
		<link>https://samyuktakarnataka.in/news/india/hyderabad-doctor-performs-robotic-tele-surgery-from-wuhan-on-patient-in-india/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 30 May 2026 07:24:37 +0000</pubDate>
				<category><![CDATA[ದೇಶ]]></category>
		<category><![CDATA[health]]></category>
		<category><![CDATA[india]]></category>
		<guid isPermaLink="false">https://samyuktakarnataka.in/?p=99369</guid>

					<description><![CDATA[<p>57 ವರ್ಷದ ಮಹಿಳೆಗೆ ಜೀವದಾನ: ವುಹಾನ್‌ನಿಂದ ಹೈದರಾಬಾದ್ ಮಹಿಳೆಗೆ 3,900 ಕಿ.ಮೀ ದೂರದಿಂದ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯ ಹೈದರಾಬಾದ್: ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಾಗಿದೆ. ಚೀನಾದ ವುಹಾನ್ ನಗರದಲ್ಲಿ ಇದ್ದ ಭಾರತೀಯ ಹಿರಿಯ ಮೂತ್ರಶಾಸ್ತ್ರಜ್ಞ ಡಾ. ಸೈಯದ್ ಮೊಹಮ್ಮದ್ ಘೌಸ್ ಅವರು ಹೈದರಾಬಾದ್‌ನ 57 ವರ್ಷದ ಮಹಿಳೆಗೆ ಸುಮಾರು 3,900 ಕಿಲೋಮೀಟರ್ ದೂರದಿಂದಲೇ ರೊಬೊಟಿಕ್ಸ್ ನೆರವಿನ ಟೆಲಿ-ಸರ್ಜರಿ ನಡೆಸಿ ಯಶಸ್ವಿಯಾಗಿದ್ದಾರೆ. ಈ ಶಸ್ತ್ರಚಿಕಿತ್ಸೆ ವೈದ್ಯಕೀಯ ಲೋಕದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದ್ದು, ಭವಿಷ್ಯದಲ್ಲಿ [&#8230;]</p>
<p>The post <a href="https://samyuktakarnataka.in/news/india/hyderabad-doctor-performs-robotic-tele-surgery-from-wuhan-on-patient-in-india/">ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು: 3,900 ಕಿ.ಮೀ ದೂರದಿಂದ ಯಶಸ್ವಿ ಟೆಲಿ-ಸರ್ಜರಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>57 ವರ್ಷದ ಮಹಿಳೆಗೆ ಜೀವದಾನ:  ವುಹಾನ್‌ನಿಂದ ಹೈದರಾಬಾದ್ ಮಹಿಳೆಗೆ 3,900 ಕಿ.ಮೀ ದೂರದಿಂದ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯ</strong></p>



<p class="wp-block-paragraph"><strong>ಹೈದರಾಬಾದ್:</strong> ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಾಗಿದೆ. ಚೀನಾದ ವುಹಾನ್ ನಗರದಲ್ಲಿ ಇದ್ದ ಭಾರತೀಯ ಹಿರಿಯ ಮೂತ್ರಶಾಸ್ತ್ರಜ್ಞ ಡಾ. ಸೈಯದ್ ಮೊಹಮ್ಮದ್ ಘೌಸ್ ಅವರು ಹೈದರಾಬಾದ್‌ನ 57 ವರ್ಷದ ಮಹಿಳೆಗೆ ಸುಮಾರು 3,900 ಕಿಲೋಮೀಟರ್ ದೂರದಿಂದಲೇ ರೊಬೊಟಿಕ್ಸ್ ನೆರವಿನ ಟೆಲಿ-ಸರ್ಜರಿ ನಡೆಸಿ ಯಶಸ್ವಿಯಾಗಿದ್ದಾರೆ.</p>



<p class="wp-block-paragraph">ಈ ಶಸ್ತ್ರಚಿಕಿತ್ಸೆ ವೈದ್ಯಕೀಯ ಲೋಕದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದ್ದು, ಭವಿಷ್ಯದಲ್ಲಿ ದೂರದ ಪ್ರದೇಶಗಳ ರೋಗಿಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ತಲುಪಿಸುವ ಸಾಧ್ಯತೆಗಳನ್ನು ಮತ್ತಷ್ಟು ವಿಸ್ತರಿಸಿದೆ.</p>



<p class="wp-block-paragraph">ಡಾ. ಘೌಸ್ ಅವರು ಆ ಸಂದರ್ಭದಲ್ಲಿ ಚೀನಾದ ವುಹಾನ್ ನಗರದಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರು. ಇದೇ ವೇಳೆ ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಅಂಡ್ ಯುರಾಲಜಿ (AINU) ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಅತ್ಯಾಧುನಿಕ ರೊಬೊಟಿಕ್ ವ್ಯವಸ್ಥೆಯ ನೆರವಿನಿಂದ ವುಹಾನ್‌ನಿಂದಲೇ ಶಸ್ತ್ರಚಿಕಿತ್ಸೆ ನಡೆಸಲಾಯಿತು.</p>



<p class="wp-block-paragraph"><strong>ಯಾವ ಶಸ್ತ್ರಚಿಕಿತ್ಸೆ ನಡೆಸಲಾಯಿತು? :</strong> ರೋಗಿಯು ಮೂತ್ರನಾಳದ ಅಡಚಣೆ (Ureteric Obstruction) ಸಮಸ್ಯೆಯಿಂದ ಬಳಲುತ್ತಿದ್ದರು. ಮೂತ್ರಪಿಂಡದಿಂದ ಮೂತ್ರಕೋಶಕ್ಕೆ ಮೂತ್ರವನ್ನು ಸಾಗಿಸುವ ಮೂತ್ರನಾಳ (Ureter) ಭಾಗದಲ್ಲಿ ತಡೆ ಉಂಟಾಗಿತ್ತು. ಈ ಸಮಸ್ಯೆಯಿಂದ ಮೂತ್ರದ ಹರಿವು ಅಡಚಣೆಯಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು.</p>



<p class="wp-block-paragraph">ಈ ಹಿನ್ನೆಲೆಯಲ್ಲಿ ವೈದ್ಯರು ಯುರೆಟರಿಕ್ ರೀಇಂಪ್ಲಾಂಟೇಶನ್ (Ureteric Reimplantation) ಎಂಬ ಶಸ್ತ್ರಚಿಕಿತ್ಸೆ ನಡೆಸಿದರು. ಅಂದರೆ, ಅಡಚಣೆಯಾದ ಮೂತ್ರನಾಳವನ್ನು ಮರುಸಂರಚಿಸಿ ಮೂತ್ರಕೋಶಕ್ಕೆ ಹೊಸದಾಗಿ ಜೋಡಿಸುವ ಪ್ರಕ್ರಿಯೆ ಇದಾಗಿದೆ.</p>



<p class="wp-block-paragraph"><strong>90 ನಿಮಿಷಗಳಲ್ಲಿ ಯಶಸ್ವಿ ಚಿಕಿತ್ಸೆ : </strong>ಸುಮಾರು 90 ನಿಮಿಷಗಳ ಕಾಲ ನಡೆದ ಈ ಟೆಲಿ-ಸರ್ಜರಿ ಯಾವುದೇ ಅಡಚಣೆ ಇಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡಿತು. ಶಸ್ತ್ರಚಿಕಿತ್ಸೆ ವೇಳೆ ಹೈದರಾಬಾದ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡ ಹಾಗೂ ಸಹಾಯಕ ವೈದ್ಯರು ಸಿದ್ಧರಾಗಿದ್ದರು. ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಕ್ರಮ ಕೈಗೊಳ್ಳಲು ಮಾನವ ಸಹಾಯಕರನ್ನು ನಿಯೋಜಿಸಲಾಗಿತ್ತು.</p>



<p class="wp-block-paragraph">ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಚಿಕಿತ್ಸೆ ಪೂರ್ಣಗೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.</p>



<p class="wp-block-paragraph"><strong>ತಂತ್ರಜ್ಞಾನದಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೊಸ ದಿಕ್ಕು : </strong>ಈ ಸಾಧನೆ ಕೇವಲ ಒಂದು ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲ; ವೈದ್ಯಕೀಯ ಕ್ಷೇತ್ರದಲ್ಲಿ ದೂರಸಂಪರ್ಕ ತಂತ್ರಜ್ಞಾನದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಭವಿಷ್ಯದಲ್ಲಿ ತಜ್ಞ ವೈದ್ಯರು ವಿಶ್ವದ ಯಾವುದೇ ಭಾಗದಲ್ಲಿದ್ದರೂ, ಅತ್ಯಾಧುನಿಕ ರೊಬೊಟಿಕ್ ವ್ಯವಸ್ಥೆಗಳ ಮೂಲಕ ದೂರದ ಪ್ರದೇಶಗಳ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಧ್ಯತೆಗಳು ಹೆಚ್ಚಾಗಲಿವೆ.</p>



<p class="wp-block-paragraph">ವೈದ್ಯಕೀಯ ವಲಯದ ತಜ್ಞರ ಪ್ರಕಾರ, ಈ ರೀತಿಯ ಟೆಲಿ-ಸರ್ಜರಿ ತಂತ್ರಜ್ಞಾನ ಗ್ರಾಮೀಣ ಹಾಗೂ ತಜ್ಞ ವೈದ್ಯರ ಕೊರತೆ ಇರುವ ಪ್ರದೇಶಗಳಿಗೆ ವರದಾನವಾಗಬಹುದು. ತುರ್ತು ಪರಿಸ್ಥಿತಿಗಳಲ್ಲಿ ಜಾಗತಿಕ ಮಟ್ಟದ ತಜ್ಞರ ಸೇವೆಯನ್ನು ರೋಗಿಗಳಿಗೆ ತಲುಪಿಸುವ ಹೊಸ ದಾರಿಯನ್ನು ಈ ಯಶಸ್ಸು ತೆರೆದಿದೆ.</p>



<p class="wp-block-paragraph"><strong>ವೈದ್ಯರ ಪ್ರತಿಕ್ರಿಯೆ : </strong>ಈ ಕುರಿತು ಮಾತನಾಡಿದ ಡಾ. ಸೈಯದ್ ಮೊಹಮ್ಮದ್ ಘೌಸ್, &#8220;ನಾವು ಸಾಮಾನ್ಯವಾಗಿ ಇದೇ ರೀತಿಯ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯಲ್ಲೇ ರೊಬೊಟಿಕ್ ವ್ಯವಸ್ಥೆಯ ಮೂಲಕ ನಡೆಸುತ್ತೇವೆ. ಆದರೆ ಈ ಬಾರಿ ವುಹಾನ್‌ನಲ್ಲಿದ್ದಾಗಲೇ ಅದೇ ತಂತ್ರಜ್ಞಾನವನ್ನು ಬಳಸಿಕೊಂಡು ಹೈದರಾಬಾದ್‌ನ ರೋಗಿಗೆ ಚಿಕಿತ್ಸೆ ನೀಡಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ರೋಗಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ&#8221; ಎಂದು ತಿಳಿಸಿದ್ದಾರೆ</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="XZ9mWZ01TY"><a href="https://samyuktakarnataka.in/districts/bengaluru/bengaluru-chitrakoota-school-fire-accident-short-circuit-suspected/">ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್ ಶಂಕೆ</a></blockquote><iframe class="wp-embedded-content" sandbox="allow-scripts" security="restricted"  title="“ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್ ಶಂಕೆ” — Samyukta Karnataka" src="https://samyuktakarnataka.in/districts/bengaluru/bengaluru-chitrakoota-school-fire-accident-short-circuit-suspected/embed/#?secret=X9llXXmIXv#?secret=XZ9mWZ01TY" data-secret="XZ9mWZ01TY" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/hyderabad-doctor-performs-robotic-tele-surgery-from-wuhan-on-patient-in-india/">ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು: 3,900 ಕಿ.ಮೀ ದೂರದಿಂದ ಯಶಸ್ವಿ ಟೆಲಿ-ಸರ್ಜರಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಗರ್ಭಿಣಿಯರೇ ಎಚ್ಚರ: ಗರ್ಭಾವಸ್ಥೆಯಲ್ಲಿ ಮರೆತೂ ತಿನ್ನಬೇಡಿ ಈ ಪದಾರ್ಥಗಳನ್ನು! ಇಲ್ಲಿದೆ ಸಂಪೂರ್ಣ ಮಾಹಿತಿ…</title>
		<link>https://samyuktakarnataka.in/health/dont-forget-to-eat-these-foods-during-pregnancy/</link>
		
		<dc:creator><![CDATA[Samyuktha Karnataka]]></dc:creator>
		<pubDate>Thu, 28 May 2026 13:31:55 +0000</pubDate>
				<category><![CDATA[ಆರೋಗ್ಯ]]></category>
		<category><![CDATA[babyhealth]]></category>
		<category><![CDATA[goodbaby]]></category>
		<category><![CDATA[goodbody]]></category>
		<category><![CDATA[health]]></category>
		<category><![CDATA[Health care]]></category>
		<category><![CDATA[Health Tips]]></category>
		<category><![CDATA[Pregnancy]]></category>
		<category><![CDATA[pregnant women]]></category>
		<guid isPermaLink="false">https://samyuktakarnataka.in/?p=99235</guid>

					<description><![CDATA[<p>ಗರ್ಭಾವಸ್ಥೆಯು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಅತ್ಯಂತ ಸೂಕ್ಷ್ಮ ಮತ್ತು ಕಾಳಜಿಯ ದಿನಗಳಾಗಿವೆ. ಈ ಸಮಯದಲ್ಲಿ ಗರ್ಭಿಣಿಯರು ತಮ್ಮ ಆಹಾರ ಕ್ರಮದ ಬಗ್ಗೆ ವಿಶೇಷ ನಿಗಾ ವಹಿಸುವುದು ಅತ್ಯಗತ್ಯ. ಏಕೆಂದರೆ ನಾವು ಸೇವಿಸುವ ಕೆಲವು ಸಾಮಾನ್ಯ ಆಹಾರ ಪದಾರ್ಥಗಳು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಹಾನಿ ಉಂಟುಮಾಡಿ, ಗರ್ಭಪಾತಕ್ಕೆ (Miscarriage) ಕಾರಣವಾಗುವ ಸಾಧ್ಯತೆ ಇರುತ್ತದೆ. ಆ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ… ಹಸಿ ಅಥವಾ ಅರೆಬೆಂದ ಆಹಾರಗಳು: ಗರ್ಭಾವಸ್ಥೆಯಲ್ಲಿ ಹಸಿ ಮೊಟ್ಟೆ, ಅರೆಬೆಂದ ಮಾಂಸ ಮತ್ತು ಸಮುದ್ರದ ಆಹಾರಗಳನ್ನು (Seafood) [&#8230;]</p>
<p>The post <a href="https://samyuktakarnataka.in/health/dont-forget-to-eat-these-foods-during-pregnancy/">ಗರ್ಭಿಣಿಯರೇ ಎಚ್ಚರ: ಗರ್ಭಾವಸ್ಥೆಯಲ್ಲಿ ಮರೆತೂ ತಿನ್ನಬೇಡಿ ಈ ಪದಾರ್ಥಗಳನ್ನು! ಇಲ್ಲಿದೆ ಸಂಪೂರ್ಣ ಮಾಹಿತಿ…</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಗರ್ಭಾವಸ್ಥೆಯು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಅತ್ಯಂತ ಸೂಕ್ಷ್ಮ ಮತ್ತು ಕಾಳಜಿಯ ದಿನಗಳಾಗಿವೆ. ಈ ಸಮಯದಲ್ಲಿ ಗರ್ಭಿಣಿಯರು ತಮ್ಮ ಆಹಾರ ಕ್ರಮದ ಬಗ್ಗೆ ವಿಶೇಷ ನಿಗಾ ವಹಿಸುವುದು ಅತ್ಯಗತ್ಯ. ಏಕೆಂದರೆ ನಾವು ಸೇವಿಸುವ ಕೆಲವು ಸಾಮಾನ್ಯ ಆಹಾರ ಪದಾರ್ಥಗಳು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಹಾನಿ ಉಂಟುಮಾಡಿ, ಗರ್ಭಪಾತಕ್ಕೆ (Miscarriage) ಕಾರಣವಾಗುವ ಸಾಧ್ಯತೆ ಇರುತ್ತದೆ. ಆ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ…</p>



<p class="wp-block-paragraph">ಹಸಿ ಅಥವಾ ಅರೆಬೆಂದ ಆಹಾರಗಳು: ಗರ್ಭಾವಸ್ಥೆಯಲ್ಲಿ ಹಸಿ ಮೊಟ್ಟೆ, ಅರೆಬೆಂದ ಮಾಂಸ ಮತ್ತು ಸಮುದ್ರದ ಆಹಾರಗಳನ್ನು (Seafood) ಕಡ್ಡಾಯವಾಗಿ ದೂರವಿಡಬೇಕು. ಇವುಗಳಲ್ಲಿ &#8216;ಲಿಸ್ಟೇರಿಯಾ&#8217; ಮತ್ತು &#8216;ಸಾಲ್ಮೊನೆಲ್ಲಾ&#8217; ಎಂಬ ಅಪಾಯಕಾರಿ ಬ್ಯಾಕ್ಟೀರಿಯಾಗಳಿದ್ದು, ಇವು ಗರ್ಭಾಶಯದ ಸೋಂಕಿಗೆ ಕಾರಣವಾಗಿ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ.</p>



<p class="wp-block-paragraph"><strong>ಕೆಲವು ಹಣ್ಣುಗಳ ಬಳಕೆ:</strong> ಅನಾನಸ್ ಮತ್ತು ಪಪ್ಪಾಯಿ ಹಣ್ಣುಗಳನ್ನು ಆರಂಭಿಕ ತಿಂಗಳುಗಳಲ್ಲಿ ತಿನ್ನಬಾರದು. ಅನಾನಸ್‌ನಲ್ಲಿರುವ &#8216;ಬ್ರೋಮೆಲೈನ್&#8217; ಎಂಬ ಎಂಜೈಮ್ ಗರ್ಭಾಶಯದ ಗೋಡೆಯನ್ನು ಮೃದುಗೊಳಿಸಿ ಸಂಕೋಚನವನ್ನು ಉಂಟುಮಾಡಬಹುದು. ಹಾಗೆಯೇ, ಹಸಿ ಅಥವಾ ಅರೆಬೆಂದ ಪಪ್ಪಾಯಿಯಲ್ಲಿರುವ &#8216;ಲ್ಯಾಟೆಕ್ಸ್&#8217; ಅಂಶವು ಗರ್ಭಾಶಯದ ಸಂಕೋಚನವನ್ನು ಪ್ರೇರೇಪಿಸಿ ಗರ್ಭಪಾತಕ್ಕೆ ದಾರಿ ಮಾಡಿಕೊಡಬಹುದು.</p>



<p class="wp-block-paragraph"><strong>ಕೆಫೀನ್ ಮತ್ತು ಕಚ್ಚಾ ಹಾಲು:</strong> ಕಾಫಿ, ಟೀ ಮತ್ತು ಎನರ್ಜಿ ಡ್ರಿಂಕ್ಸ್‌ಗಳಲ್ಲಿರುವ ಅತಿಯಾದ ಕೆಫೀನ್ ಅಂಶವು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಮಾರಕ. ದಿನಕ್ಕೆ 200 ಮಿಲಿಗ್ರಾಂ ಗಿಂತ ಹೆಚ್ಚು ಕೆಫೀನ್ ಸೇವನೆಯು ಗರ್ಭಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಪಾಶ್ಚೀಕರಿಸದ ಹಸಿ ಹಾಲು ಮತ್ತು ಅದರಿಂದ ಮಾಡಿದ ಚೀಸ್ ಬಳಕೆಯನ್ನು ತಪ್ಪಿಸಬೇಕು.</p>



<p class="wp-block-paragraph"><strong>ತಿನ್ನಬಾರದ ಇತರೆ ಪದಾರ್ಥಗಳು:</strong> ಅತಿಯಾದ ಮಸಾಲೆ ಪದಾರ್ಥಗಳು, ಸಂಸ್ಕರಿಸಿದ ಜಂಕ್ ಫುಡ್ಸ್, ಎಳ್ಳು ಮತ್ತು ಮೊಳಕೆ ಬರಿಸಿದ ಧಾನ್ಯಗಳನ್ನು ಹಸಿಯಾಗಿ ತಿನ್ನುವುದರಿಂದ ಗರ್ಭಿಣಿಯರಲ್ಲಿ ಆರೋಗ್ಯ ಏರುಪೇರಾಗಬಹುದು. ಮುಖ್ಯವಾಗಿ ಆಲ್ಕೋಹಾಲ್ (ಮದ್ಯಪಾನ) ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು.</p>



<p class="wp-block-paragraph">ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಯಾವುದೇ ಹೊಸ ಆಹಾರವನ್ನು ರೂಢಿಸಿಕೊಳ್ಳುವ ಮುನ್ನ ಅಥವಾ ಗೊಂದಲಗಳಿದ್ದಾಗ ತಜ್ಞ ವೈದ್ಯರ (Gynecologist) ಸಲಹೆ ಪಡೆಯುವುದು ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸುರಕ್ಷಿತ.</p>
<p>The post <a href="https://samyuktakarnataka.in/health/dont-forget-to-eat-these-foods-during-pregnancy/">ಗರ್ಭಿಣಿಯರೇ ಎಚ್ಚರ: ಗರ್ಭಾವಸ್ಥೆಯಲ್ಲಿ ಮರೆತೂ ತಿನ್ನಬೇಡಿ ಈ ಪದಾರ್ಥಗಳನ್ನು! ಇಲ್ಲಿದೆ ಸಂಪೂರ್ಣ ಮಾಹಿತಿ…</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಶಂಕಿತ ಎಬೋಲಾ ಪ್ರಕರಣ ‘ನೆಗೆಟಿವ್’: ಸಚಿವ ಗುಂಡೂರಾವ್ ಸ್ಪಷ್ಟನೆ</title>
		<link>https://samyuktakarnataka.in/news/karnataka/suspected-ebola-case-in-karnataka-tests-negative-dinesh-gundu-rao/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 27 May 2026 09:12:38 +0000</pubDate>
				<category><![CDATA[ರಾಜ್ಯ]]></category>
		<category><![CDATA[#karnataka]]></category>
		<category><![CDATA[health]]></category>
		<category><![CDATA[Health care]]></category>
		<guid isPermaLink="false">https://samyuktakarnataka.in/?p=99101</guid>

					<description><![CDATA[<p>ವದಂತಿಗಳಿಗೆ ಕಿವಿಗೊಡಬೇಡಿ: ಎಬೋಲಾ ಕುರಿತು ಆರೋಗ್ಯ ಇಲಾಖೆಯ ಸ್ಪಷ್ಟ ಸಂದೇಶ ಬೆಂಗಳೂರು: ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಶಂಕಿತ ಎಬೋಲಾ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಮಹತ್ವದ ಸ್ಪಷ್ಟನೆ ನೀಡಿದೆ. ವರದಿಯಾಗಿದ್ದ ಶಂಕಿತ ಪ್ರಕರಣದ ಎಲ್ಲಾ ಪ್ರಯೋಗಾಲಯ ಪರೀಕ್ಷಾ ವರದಿಗಳು ‘ನೆಗೆಟಿವ್’ ಬಂದಿದ್ದು, ಸಂಬಂಧಿತ ವ್ಯಕ್ತಿಗೆ ಯಾವುದೇ ರೀತಿಯ ಎಬೋಲಾ (Ebola) ಸೋಂಕು ತಗುಲಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಈ ಕುರಿತು ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು [&#8230;]</p>
<p>The post <a href="https://samyuktakarnataka.in/news/karnataka/suspected-ebola-case-in-karnataka-tests-negative-dinesh-gundu-rao/">ಶಂಕಿತ ಎಬೋಲಾ ಪ್ರಕರಣ ‘ನೆಗೆಟಿವ್’: ಸಚಿವ ಗುಂಡೂರಾವ್ ಸ್ಪಷ್ಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ವದಂತಿಗಳಿಗೆ ಕಿವಿಗೊಡಬೇಡಿ: ಎಬೋಲಾ ಕುರಿತು ಆರೋಗ್ಯ ಇಲಾಖೆಯ ಸ್ಪಷ್ಟ ಸಂದೇಶ</strong></p>



<p class="wp-block-paragraph">ಬೆಂಗಳೂರು: ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಶಂಕಿತ ಎಬೋಲಾ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಮಹತ್ವದ ಸ್ಪಷ್ಟನೆ ನೀಡಿದೆ. ವರದಿಯಾಗಿದ್ದ ಶಂಕಿತ ಪ್ರಕರಣದ ಎಲ್ಲಾ ಪ್ರಯೋಗಾಲಯ ಪರೀಕ್ಷಾ ವರದಿಗಳು ‘ನೆಗೆಟಿವ್’ ಬಂದಿದ್ದು, ಸಂಬಂಧಿತ ವ್ಯಕ್ತಿಗೆ ಯಾವುದೇ ರೀತಿಯ ಎಬೋಲಾ (Ebola) ಸೋಂಕು ತಗುಲಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.</p>



<p class="wp-block-paragraph">ಈ ಕುರಿತು ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/news/india/pm-modi-heatwave-warning-hydration-public-advisory/">ಹೀಟ್‌ವೇವ್ ಸಂಕಷ್ಟ: ಜನರಿಗೆ ಪ್ರಧಾನಿ ಮೋದಿ ಮಹತ್ವದ ಸಲಹೆ</a></strong></p>



<p class="wp-block-paragraph"><strong>ತಕ್ಷಣವೇ ಮುನ್ನೆಚ್ಚರಿಕೆ ಕ್ರಮ :</strong> ಸಚಿವರ ಪ್ರಕಾರ, ಶಂಕಿತ ಪ್ರಕರಣದ ಮಾಹಿತಿ ದೊರಕುತ್ತಿದ್ದಂತೆಯೇ ಆರೋಗ್ಯ ಇಲಾಖೆ ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳ ಅನ್ವಯ ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. “ಶಂಕೆ ವ್ಯಕ್ತವಾದ ತಕ್ಷಣವೇ ಇಲಾಖೆ ವೈದ್ಯಕೀಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಪಾಲಿಸಿದೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಬಂದಿರುವ ವರದಿಗಳು ಸಂಪೂರ್ಣ ನೆಗೆಟಿವ್ ಆಗಿವೆ” ಎಂದು ತಿಳಿಸಿದ್ದಾರೆ.</p>



<p class="wp-block-paragraph"><strong>“ಸಾರ್ವಜನಿಕರ ಆರೋಗ್ಯವೇ ಮೊದಲ ಆದ್ಯತೆ” :</strong> ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. “ಆರೋಗ್ಯ ಇಲಾಖೆ ಪ್ರತಿಯೊಂದು ಪರಿಸ್ಥಿತಿಯನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಸವಾಲನ್ನು ಎದುರಿಸಲು ಇಲಾಖೆ ಸಂಪೂರ್ಣ ಸಜ್ಜಾಗಿದೆ” ಎಂದು ಅವರು ಭರವಸೆ ನೀಡಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/districts/bellari/nara-bharath-reddy-supports-b-nagendra-for-cabinet-berth/" type="link" id="https://samyuktakarnataka.in/districts/bellari/nara-bharath-reddy-supports-b-nagendra-for-cabinet-berth/">ಸಚಿವ ಸಂಪುಟ ಬದಲಾವಣೆ ಚರ್ಚೆ ನಡುವೆ ನಾಗೇಂದ್ರ ಪರ ಬ್ಯಾಟಿಂಗ್</a></strong></p>



<p class="wp-block-paragraph"><strong>ವದಂತಿಗಳಿಗೆ ಕಿವಿಗೊಡಬೇಡಿ :</strong> ಎಬೋಲಾ ಶಂಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಜನರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ. “ವದಂತಿಗಳಿಗೆ ಕಿವಿಗೊಡದೆ, ಸರ್ಕಾರ ಮತ್ತು ಆರೋಗ್ಯ ಇಲಾಖೆ ಅಧಿಕೃತವಾಗಿ ನೀಡುವ ಮಾಹಿತಿ ಮತ್ತು ಪ್ರಕಟಣೆಗಳನ್ನೇ ನಂಬಿ” ಎಂದು ಅವರು ಹೇಳಿದ್ದಾರೆ.</p>



<p class="wp-block-paragraph"><strong>ಆರೋಗ್ಯ ಮಾರ್ಗಸೂಚಿ ಪಾಲನೆಗೆ ಕರೆ :</strong> ಜನರು ಸಾಮಾನ್ಯ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಸೋಂಕು ಸಂಬಂಧಿತ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/news/india/ed-raids-pinarayi-vijayan-family-cmrl-exalogic-case/">ಮಾಜಿ CM ಪಿಣರಾಯಿ ವಿಜಯನ್ ನಿವಾಸ ಸೇರಿ 10 ಕಡೆ ED ದಾಳಿ</a></strong></p>



<p class="wp-block-paragraph"><strong>ಎಬೋಲಾ ಎಂದರೇನು? :</strong> ಎಬೋಲಾ ಒಂದು ಗಂಭೀರ ವೈರಲ್ ಸೋಂಕು ರೋಗವಾಗಿದ್ದು, ಸೋಂಕಿತ ವ್ಯಕ್ತಿಯ ದೇಹದ ದ್ರವಗಳ ಸಂಪರ್ಕದಿಂದ ಹರಡುವ ಸಾಧ್ಯತೆ ಇದೆ. ಹೆಚ್ಚಿನ ಜ್ವರ, ದೌರ್ಬಲ್ಯ, ವಾಂತಿ, ರಕ್ತಸ್ರಾವ ಮೊದಲಾದ ಲಕ್ಷಣಗಳು ಕಾಣಿಸಬಹುದು.</p>



<p class="wp-block-paragraph">ಆದರೆ ರಾಜ್ಯದಲ್ಲಿ ವರದಿಯಾಗಿದ್ದ ಪ್ರಕರಣದಲ್ಲಿ ಸೋಂಕು ದೃಢಪಟ್ಟಿಲ್ಲ ಎಂಬುದು ಸಾರ್ವಜನಿಕರಿಗೆ ನೆಮ್ಮದಿ ತಂದಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="zmLxQLonDe"><a href="https://samyuktakarnataka.in/news/karnataka/mb-patil-denies-siddaramaiah-resignation-rumours/">ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ಪಾಟೀಲ್ ಖಡಕ್ ಪ್ರತಿಕ್ರಿಯೆ</a></blockquote><iframe class="wp-embedded-content" sandbox="allow-scripts" security="restricted"  title="“ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ಪಾಟೀಲ್ ಖಡಕ್ ಪ್ರತಿಕ್ರಿಯೆ” — Samyukta Karnataka" src="https://samyuktakarnataka.in/news/karnataka/mb-patil-denies-siddaramaiah-resignation-rumours/embed/#?secret=TkGpoN6scM#?secret=zmLxQLonDe" data-secret="zmLxQLonDe" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/karnataka/suspected-ebola-case-in-karnataka-tests-negative-dinesh-gundu-rao/">ಶಂಕಿತ ಎಬೋಲಾ ಪ್ರಕರಣ ‘ನೆಗೆಟಿವ್’: ಸಚಿವ ಗುಂಡೂರಾವ್ ಸ್ಪಷ್ಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಸೌಂದರ್ಯ ಕ್ಲಿನಿಕ್‌ಗಳಿಗೆ ಕೇಂದ್ರದ ಎಚ್ಚರಿಕೆ: ಇಂಜೆಕ್ಷನ್ ಕಾಸ್ಮೆಟಿಕ್ ಬಳಕೆ ನಿಷೇಧ</title>
		<link>https://samyuktakarnataka.in/news/india/cdsco-bans-injectable-cosmetic-products-india/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 21 May 2026 09:48:02 +0000</pubDate>
				<category><![CDATA[ದೇಶ]]></category>
		<category><![CDATA[health]]></category>
		<category><![CDATA[Health Tips]]></category>
		<category><![CDATA[india]]></category>
		<guid isPermaLink="false">https://samyuktakarnataka.in/?p=98657</guid>

					<description><![CDATA[<p>ಇಂಜೆಕ್ಷನ್ ಮೂಲಕ ಸೌಂದರ್ಯ ಉತ್ಪನ್ನ ಬಳಕೆ ಕಾನೂನುಬಾಹಿರ: CDSCO ಕಟ್ಟುನಿಟ್ಟಿನ ಎಚ್ಚರಿಕೆ ನವದೆಹಲಿ: ಇಂಜೆಕ್ಷನ್ ಮೂಲಕ ಯಾವುದೇ ಸೌಂದರ್ಯವರ್ಧಕ ಉತ್ಪನ್ನವನ್ನು ಬಳಸುವುದು ಕಾನೂನುಬಾಹಿರ ಎಂದು ಭಾರತದ ಕೇಂದ್ರ ಔಷಧ ನಿಯಂತ್ರಕ ಸಂಸ್ಥೆ Central Drugs Standard Control Organisation (CDSCO) ಸ್ಪಷ್ಟಪಡಿಸಿದೆ. ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನ ಹೊರಡಿಸಿರುವ ಸಂಸ್ಥೆ, ಗ್ರಾಹಕರು, ವೃತ್ತಿಪರರು ಹಾಗೂ ಸೌಂದರ್ಯ ಚಿಕಿತ್ಸಾಲಯಗಳು ಯಾವುದೇ ಕಾಸ್ಮೆಟಿಕ್ ಉತ್ಪನ್ನವನ್ನು ಇಂಜೆಕ್ಷನ್ ರೂಪದಲ್ಲಿ ಬಳಸಲು ಅನುಮತಿ ಇಲ್ಲ ಎಂದು ತಿಳಿಸಿದೆ. CDSCO ಪ್ರಕಾರ, ಕಾನೂನಿನಡಿ “ಸೌಂದರ್ಯವರ್ಧಕ” [&#8230;]</p>
<p>The post <a href="https://samyuktakarnataka.in/news/india/cdsco-bans-injectable-cosmetic-products-india/">ಸೌಂದರ್ಯ ಕ್ಲಿನಿಕ್‌ಗಳಿಗೆ ಕೇಂದ್ರದ ಎಚ್ಚರಿಕೆ: ಇಂಜೆಕ್ಷನ್ ಕಾಸ್ಮೆಟಿಕ್ ಬಳಕೆ ನಿಷೇಧ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಇಂಜೆಕ್ಷನ್ ಮೂಲಕ ಸೌಂದರ್ಯ ಉತ್ಪನ್ನ ಬಳಕೆ ಕಾನೂನುಬಾಹಿರ: CDSCO ಕಟ್ಟುನಿಟ್ಟಿನ ಎಚ್ಚರಿಕೆ</strong></p>



<p class="wp-block-paragraph">ನವದೆಹಲಿ: ಇಂಜೆಕ್ಷನ್ ಮೂಲಕ ಯಾವುದೇ ಸೌಂದರ್ಯವರ್ಧಕ ಉತ್ಪನ್ನವನ್ನು ಬಳಸುವುದು ಕಾನೂನುಬಾಹಿರ ಎಂದು ಭಾರತದ ಕೇಂದ್ರ ಔಷಧ ನಿಯಂತ್ರಕ ಸಂಸ್ಥೆ Central Drugs Standard Control Organisation (CDSCO) ಸ್ಪಷ್ಟಪಡಿಸಿದೆ. ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನ ಹೊರಡಿಸಿರುವ ಸಂಸ್ಥೆ, ಗ್ರಾಹಕರು, ವೃತ್ತಿಪರರು ಹಾಗೂ ಸೌಂದರ್ಯ ಚಿಕಿತ್ಸಾಲಯಗಳು ಯಾವುದೇ ಕಾಸ್ಮೆಟಿಕ್ ಉತ್ಪನ್ನವನ್ನು ಇಂಜೆಕ್ಷನ್ ರೂಪದಲ್ಲಿ ಬಳಸಲು ಅನುಮತಿ ಇಲ್ಲ ಎಂದು ತಿಳಿಸಿದೆ.</p>



<p class="wp-block-paragraph">CDSCO ಪ್ರಕಾರ, ಕಾನೂನಿನಡಿ “ಸೌಂದರ್ಯವರ್ಧಕ” (Cosmetic) ಎಂದರೆ ದೇಹದ ಮೇಲೆ ಉಜ್ಜಲು, ಸುರಿಯಲು, ಚಿಮುಕಿಸಲು ಅಥವಾ ಸಿಂಪಡಿಸಲು ಬಳಸುವ ಉತ್ಪನ್ನಗಳನ್ನು ಮಾತ್ರ ಒಳಗೊಂಡಿದೆ. ಆದ್ದರಿಂದ ಇಂಜೆಕ್ಷನ್ ಮೂಲಕ ನೀಡಲಾಗುವ ಉತ್ಪನ್ನಗಳು ಕಾಸ್ಮೆಟಿಕ್‌ಗಳ ಕಾನೂನು ವ್ಯಾಖ್ಯಾನದೊಳಗೆ ಬರುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.</p>



<p class="wp-block-paragraph">ಇತ್ತೀಚಿನ ದಿನಗಳಲ್ಲಿ ಸ್ಕಿನ್ ವೈಟ್ನಿಂಗ್ ಇಂಜೆಕ್ಷನ್‌ಗಳು, ಆಂಟಿ ಏಜಿಂಗ್ ಚಿಕಿತ್ಸೆಗಳು ಹಾಗೂ ಸೌಂದರ್ಯ ವರ್ಧನೆಗಾಗಿ ನೀಡಲಾಗುವ ವಿವಿಧ ಚುಚ್ಚುಮದ್ದು ವಿಧಾನಗಳು ವೆಲ್‌ನೆಸ್ ಮತ್ತು ಬ್ಯೂಟಿ ಕ್ಲಿನಿಕ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.</p>



<p class="wp-block-paragraph">ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಸಮರ್ಪಕ ವೈದ್ಯಕೀಯ ಮೇಲ್ವಿಚಾರಣೆ ಇಲ್ಲದೇ ಇಂತಹ ವಿಧಾನಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೆಲವು ಚಿಕಿತ್ಸೆಗಳು ವೈಜ್ಞಾನಿಕ ಪುರಾವೆಗಳಿಲ್ಲದೇ ಜನರಿಗೆ ನೀಡಲಾಗುತ್ತಿರುವ ಬಗ್ಗೆ ಕೂಡ ಕಳವಳ ವ್ಯಕ್ತವಾಗಿದೆ.</p>



<p class="wp-block-paragraph">ಈ ಸಲಹೆಯ ಮೂಲಕ ಸೌಂದರ್ಯ ಉತ್ಪನ್ನಗಳು ಮತ್ತು ವೈದ್ಯಕೀಯ ಇಂಜೆಕ್ಷನ್ ವಿಧಾನಗಳ ನಡುವೆ ಸ್ಪಷ್ಟ ವ್ಯತ್ಯಾಸ ನಿರ್ಮಿಸಲು CDSCO ಮುಂದಾಗಿದೆ. ಕಾನೂನುಬದ್ಧವಾಗಿ ಅನುಮೋದಿಸಲಾದ ಇಂಜೆಕ್ಷನ್ ಚಿಕಿತ್ಸೆಗಳು ಕೇವಲ ಅರ್ಹ ವೈದ್ಯಕೀಯ ಮೇಲ್ವಿಚಾರಣೆಯಲ್ಲೇ ನಡೆಯಬೇಕು ಎಂದು ಸಂಸ್ಥೆ ಒತ್ತಿ ಹೇಳಿದೆ.</p>



<p class="wp-block-paragraph">ಆರೋಗ್ಯ ತಜ್ಞರ ಪ್ರಕಾರ, ಅನಿಯಂತ್ರಿತ ಸೌಂದರ್ಯ ಇಂಜೆಕ್ಷನ್ ವಿಧಾನಗಳು ಅಲರ್ಜಿಗಳು, ಚರ್ಮ ಹಾನಿ, ಅಂಗ ವೈಫಲ್ಯ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಜನರು ಯಾವುದೇ ಬ್ಯೂಟಿ ಇಂಜೆಕ್ಷನ್ ಚಿಕಿತ್ಸೆ ಪಡೆಯುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ ಎಂದು ತಜ್ಞರು ಹೇಳಿದ್ದಾರೆ.</p>



<p class="wp-block-paragraph">ಗ್ರಾಹಕರ ಸುರಕ್ಷತೆ ಮತ್ತು ಕಾನೂನುಬದ್ಧ ವೈದ್ಯಕೀಯ ಕ್ರಮಗಳ ಪಾಲನೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="IySi5Oe4nI"><a href="https://samyuktakarnataka.in/news/india/cockroach-janata-party-x-account-blocked-india/">ಸಂಚಲನ ಸೃಷ್ಟಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ X ಖಾತೆ ಬ್ಲಾಕ್</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ಸಂಚಲನ ಸೃಷ್ಟಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ X ಖಾತೆ ಬ್ಲಾಕ್&#8221; &#8212; Samyukta Karnataka" src="https://samyuktakarnataka.in/news/india/cockroach-janata-party-x-account-blocked-india/embed/#?secret=43KWixiDwr#?secret=IySi5Oe4nI" data-secret="IySi5Oe4nI" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/cdsco-bans-injectable-cosmetic-products-india/">ಸೌಂದರ್ಯ ಕ್ಲಿನಿಕ್‌ಗಳಿಗೆ ಕೇಂದ್ರದ ಎಚ್ಚರಿಕೆ: ಇಂಜೆಕ್ಷನ್ ಕಾಸ್ಮೆಟಿಕ್ ಬಳಕೆ ನಿಷೇಧ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕೋವಿಡ್ ಬಳಿಕ ಮತ್ತೊಂದು ಆತಂಕ: ಎಬೋಲಾ ವೈರಸ್ ಅಬ್ಬರ</title>
		<link>https://samyuktakarnataka.in/news/international/ebola-virus-outbreak-global-health-emergency-india-alert/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 21 May 2026 06:49:50 +0000</pubDate>
				<category><![CDATA[ವಿದೇಶ]]></category>
		<category><![CDATA[#international]]></category>
		<category><![CDATA[health]]></category>
		<category><![CDATA[Health-boosting]]></category>
		<guid isPermaLink="false">https://samyuktakarnataka.in/?p=98641</guid>

					<description><![CDATA[<p>ನವ ದೆಹಲಿ: ಜಗತ್ತು ಕೋವಿಡ್-19 ಮಹಾಮಾರಿಯ ಭೀಕರ ಅನುಭವದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಾರಕ ವೈರಸ್ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದ ಹಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್ (Ebola Virus) ಸೋಂಕು ಇದೀಗ ವಿಶ್ವದ ಆರೋಗ್ಯ ವಲಯದ ಗಮನ ಸೆಳೆದಿದ್ದು, (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಘೋಷಿಸಿದೆ. ಪ್ರಸ್ತುತ ಹರಡುತ್ತಿರುವ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿಗೆ (Bundibugyo Strain) ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ [&#8230;]</p>
<p>The post <a href="https://samyuktakarnataka.in/news/international/ebola-virus-outbreak-global-health-emergency-india-alert/">ಕೋವಿಡ್ ಬಳಿಕ ಮತ್ತೊಂದು ಆತಂಕ: ಎಬೋಲಾ ವೈರಸ್ ಅಬ್ಬರ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ನವ ದೆಹಲಿ: ಜಗತ್ತು ಕೋವಿಡ್-19 ಮಹಾಮಾರಿಯ ಭೀಕರ ಅನುಭವದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಾರಕ ವೈರಸ್ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. </p>



<p class="wp-block-paragraph">ಆಫ್ರಿಕಾ ಖಂಡದ ಹಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್ (Ebola Virus) ಸೋಂಕು ಇದೀಗ ವಿಶ್ವದ ಆರೋಗ್ಯ ವಲಯದ ಗಮನ ಸೆಳೆದಿದ್ದು, (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಘೋಷಿಸಿದೆ.</p>



<p class="wp-block-paragraph">ಪ್ರಸ್ತುತ ಹರಡುತ್ತಿರುವ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿಗೆ (Bundibugyo Strain) ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಸೋಂಕಿನ ತೀವ್ರತೆ ಹೆಚ್ಚಿದರೆ ಸಾವಿನ ಪ್ರಮಾಣವೂ ಅತ್ಯಂತ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ.</p>



<p class="wp-block-paragraph">ಆರೋಗ್ಯ ತಜ್ಞರ ಪ್ರಕಾರ, ಈ ವೈರಸ್ ಕೋವಿಡ್‌ನಂತೆ ಗಾಳಿಯಲ್ಲಿ ವೇಗವಾಗಿ ಹರಡುವುದಿಲ್ಲ. ಎಬೋಲಾ ಮುಖ್ಯವಾಗಿ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ನೇರ ಸಂಪರ್ಕದಿಂದ ಮಾತ್ರ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.</p>



<p class="wp-block-paragraph">ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೆ ಕಾಂಗೋ, ಉಗಾಂಡ ಸೇರಿದಂತೆ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸುವ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.</p>



<p class="wp-block-paragraph">ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರೋಗ್ಯ ತಪಾಸಣೆ, ಸ್ಕ್ರೀನಿಂಗ್ ಹಾಗೂ ಅಗತ್ಯವಿದ್ದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಸಾರ್ವಜನಿಕರು ಸಹ ಸದ್ಯಕ್ಕೆ ಆಫ್ರಿಕಾ ದೇಶಗಳಿಗೆ ಅನಗತ್ಯ ಪ್ರವಾಸ ತಪ್ಪಿಸುವಂತೆ ಸಲಹೆ ನೀಡಲಾಗಿದೆ.</p>



<p class="wp-block-paragraph">ಎಬೋಲಾ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ ಹಾಗೂ ಭೇದಿ ಪ್ರಮುಖವಾಗಿವೆ. ಸೋಂಕು ಗಂಭೀರ ಹಂತ ತಲುಪಿದರೆ ಲಿವರ್ ಮತ್ತು ಶ್ವಾಸಕೋಶ ವೈಫಲ್ಯ ಉಂಟಾಗಿ ಜೀವಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.</p>



<p class="wp-block-paragraph">ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ಅನುಭವದ ನಂತರ ಜಾಗತಿಕ ಆರೋಗ್ಯ ವ್ಯವಸ್ಥೆಗಳು ಈಗಾಗಲೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ, ಸೋಂಕಿನ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನಗಳು ಆರಂಭಗೊಂಡಿವೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="bzMBJPxEK2"><a href="https://samyuktakarnataka.in/news/international/pm-modi-gifts-indian-cultural-artifacts-to-world-leaders/">ವಿಶ್ವ ನಾಯಕರಿಗೆ ಭಾರತೀಯ ಪರಂಪರೆಯ ಉಡುಗೊರೆ ನೀಡಿದ ಮೋದಿ</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ವಿಶ್ವ ನಾಯಕರಿಗೆ ಭಾರತೀಯ ಪರಂಪರೆಯ ಉಡುಗೊರೆ ನೀಡಿದ ಮೋದಿ&#8221; &#8212; Samyukta Karnataka" src="https://samyuktakarnataka.in/news/international/pm-modi-gifts-indian-cultural-artifacts-to-world-leaders/embed/#?secret=nGEaEp4KW0#?secret=bzMBJPxEK2" data-secret="bzMBJPxEK2" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/international/ebola-virus-outbreak-global-health-emergency-india-alert/">ಕೋವಿಡ್ ಬಳಿಕ ಮತ್ತೊಂದು ಆತಂಕ: ಎಬೋಲಾ ವೈರಸ್ ಅಬ್ಬರ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>5 ದಿನಗಳಲ್ಲಿ 4 ಮಕ್ಕಳಿಗೆ ಜನ್ಮ: ಯಶಸ್ವಿ ಹೆರಿಗೆ ನಡೆಸಿದ ವೈದ್ಯರು</title>
		<link>https://samyuktakarnataka.in/news/india/uttar-pradesh-woman-gives-birth-to-quadruplets-normal-delivery/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 16 May 2026 11:12:29 +0000</pubDate>
				<category><![CDATA[ದೇಶ]]></category>
		<category><![CDATA[#Uttar Pradesh]]></category>
		<category><![CDATA[health]]></category>
		<guid isPermaLink="false">https://samyuktakarnataka.in/?p=98248</guid>

					<description><![CDATA[<p>ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ 31 ವರ್ಷದ ಮಹಿಳೆಯೊಬ್ಬರು ಐದು ದಿನಗಳ ಅವಧಿಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ವೈದ್ಯಕೀಯ ವಲಯದಲ್ಲಿ ಗಮನ ಸೆಳೆದಿದೆ. ಇನ್ನೂ ವಿಶೇಷವೆಂದರೆ, ನಾಲ್ಕು ಮಕ್ಕಳೂ ಸಾಮಾನ್ಯ ಹೆರಿಗೆಯ ಮೂಲಕ ಜನಿಸಿರುವುದು ವೈದ್ಯರನ್ನೇ ಅಚ್ಚರಿಗೆ ಗುರಿಮಾಡಿದೆ. ಅಮಿನಾ ಎಂಬ ಮಹಿಳೆ ಮೊರಾದಾಬಾದ್‌ನ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ನಾಲ್ಕು ನವಜಾತ ಶಿಶುಗಳೂ ವೈದ್ಯಕೀಯ [&#8230;]</p>
<p>The post <a href="https://samyuktakarnataka.in/news/india/uttar-pradesh-woman-gives-birth-to-quadruplets-normal-delivery/">5 ದಿನಗಳಲ್ಲಿ 4 ಮಕ್ಕಳಿಗೆ ಜನ್ಮ: ಯಶಸ್ವಿ ಹೆರಿಗೆ ನಡೆಸಿದ ವೈದ್ಯರು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಲಖನೌ:</strong> ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ 31 ವರ್ಷದ ಮಹಿಳೆಯೊಬ್ಬರು ಐದು ದಿನಗಳ ಅವಧಿಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ವೈದ್ಯಕೀಯ ವಲಯದಲ್ಲಿ ಗಮನ ಸೆಳೆದಿದೆ. ಇನ್ನೂ ವಿಶೇಷವೆಂದರೆ, ನಾಲ್ಕು ಮಕ್ಕಳೂ ಸಾಮಾನ್ಯ ಹೆರಿಗೆಯ ಮೂಲಕ ಜನಿಸಿರುವುದು ವೈದ್ಯರನ್ನೇ ಅಚ್ಚರಿಗೆ ಗುರಿಮಾಡಿದೆ.</p>



<p class="wp-block-paragraph">ಅಮಿನಾ ಎಂಬ ಮಹಿಳೆ ಮೊರಾದಾಬಾದ್‌ನ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ನಾಲ್ಕು ನವಜಾತ ಶಿಶುಗಳೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph">ವೈದ್ಯರ ಪ್ರಕಾರ, ಗರ್ಭಧಾರಣೆಯ ಆರಂಭಿಕ ಹಂತದಲ್ಲೇ ನಡೆಸಿದ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ನಾಲ್ಕು ಭ್ರೂಣಗಳಿರುವುದು ದೃಢಪಟ್ಟಿತ್ತು. ಇದರಿಂದ ಈ ಗರ್ಭಧಾರಣೆಯನ್ನು ಆರಂಭದಿಂದಲೇ ಹೆಚ್ಚಿನ ಅಪಾಯದ ಪ್ರಕರಣವೆಂದು ಪರಿಗಣಿಸಲಾಗಿತ್ತು.</p>



<p class="wp-block-paragraph">ಹೆಚ್ಚಿನ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರು “ಭ್ರೂಣ ಕಡಿತ” ವಿಧಾನವನ್ನು ಕುಟುಂಬಕ್ಕೆ ಸಲಹೆ ಮಾಡಿದ್ದರು. ಅಂದರೆ, ಉಳಿದ ಮಕ್ಕಳ ಸುರಕ್ಷಿತ ಹೆರಿಗೆಗಾಗಿ ಎರಡು ಭ್ರೂಣಗಳನ್ನು ಮಾತ್ರ ಮುಂದುವರಿಸುವ ಆಯ್ಕೆಯನ್ನು ನೀಡಲಾಗಿತ್ತು. ಆದರೆ ಕುಟುಂಬವು ನಾಲ್ಕೂ ಮಕ್ಕಳನ್ನು ಉಳಿಸಿಕೊಳ್ಳಲು ನಿರ್ಧರಿಸಿತು.</p>



<p class="wp-block-paragraph">ಗರ್ಭಾವಸ್ಥೆಯಲ್ಲಿ ಅಮಿನಾ ಅವರಿಗೆ ರಕ್ತದೊತ್ತಡ ಹಾಗೂ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ಕಾರಣದಿಂದಾಗಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು.</p>



<p class="wp-block-paragraph">ಮೇ 8ರಂದು ಮೊದಲ ಬಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮೇ 9ರಂದು ಮೊದಲ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವಿನ ತೂಕ ಸುಮಾರು 710 ಗ್ರಾಂ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ನಂತರ ವೈದ್ಯಕೀಯ ತಂಡ ತಾಯಿಯ ಸ್ಥಿತಿಯನ್ನು ಸ್ಥಿರಗೊಳಿಸಿ ಉಳಿದ ಹೆರಿಗೆಗಳನ್ನು ಕೆಲವು ದಿನಗಳ ಕಾಲ ಮುಂದೂಡಲು ಯಶಸ್ವಿಯಾಯಿತು.</p>



<p class="wp-block-paragraph">ಐದು ದಿನಗಳ ಬಳಿಕ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಾಗ ಅಮಿನಾ ಮೇ 14ರಂದು ಮತ್ತೊಬ್ಬ ಗಂಡು ಮಗು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು.</p>



<p class="wp-block-paragraph">ನವಜಾತ ಶಿಶುಗಳಲ್ಲಿ ಒಂದು ಸಂಪೂರ್ಣ ಆರೋಗ್ಯವಾಗಿದ್ದು, ಇನ್ನೆರಡು ಮಕ್ಕಳಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.</p>



<p class="wp-block-paragraph">ಈ ಪ್ರಕರಣವನ್ನು ವೈದ್ಯಕೀಯ ತಂಡ ಅತ್ಯಂತ ಅಪರೂಪದ ಹಾಗೂ ಸವಾಲಿನದ್ದೆಂದು ಬಣ್ಣಿಸಿದೆ. ವಿಶೇಷವಾಗಿ ನಾಲ್ಕು ಶಿಶುಗಳು ಪ್ರತ್ಯೇಕ ಚೀಲಗಳಲ್ಲಿ ಬೆಳೆಯುತ್ತಿದ್ದ ಕಾರಣ ಸಾಮಾನ್ಯ ಹೆರಿಗೆಯ ಮೂಲಕ ಸುರಕ್ಷಿತ ಹೆರಿಗೆ ಸಾಧ್ಯವಾಗಿರುವುದು ಗಮನಾರ್ಹ ಸಾಧನೆ ಎಂದು ವೈದ್ಯರು ಹೇಳಿದ್ದಾರೆ.</p>



<p class="wp-block-paragraph">ಈ ಚಿಕಿತ್ಸೆಯಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ ದೊಡ್ಡ ತಂಡ ಕಾರ್ಯನಿರ್ವಹಿಸಿತ್ತು. ಸಕಾಲಿಕ ಚಿಕಿತ್ಸೆ, ನಿರಂತರ ಮೇಲ್ವಿಚಾರಣೆ ಮತ್ತು ಕುಟುಂಬದ ಸಹಕಾರದಿಂದ ಈ ಹೆರಿಗೆ ಯಶಸ್ವಿಯಾಯಿತು ಎಂದು ವೈದ್ಯಕೀಯ ತಂಡ ಅಭಿಪ್ರಾಯಪಟ್ಟಿದೆ.</p>



<p class="wp-block-paragraph">ಶಿಶುಗಳ ತಂದೆ ಹಾಗೂ ದಿನಸಿ ಅಂಗಡಿ ಮಾಲೀಕರಾದ ಮೊಹಮ್ಮದ್ ಅಲಿಮ್ ಆಸ್ಪತ್ರೆ ಮತ್ತು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಮಿನಾ ಅವರ ಸಹೋದರಿ ಇಮ್ರಾನಾ ಪರ್ವೀನ್ ಕೂಡ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಮೆಚ್ಚಿಕೊಂಡಿದ್ದಾರೆ.</p>



<p class="wp-block-paragraph">ಹೆಚ್ಚಿನ ಅಪಾಯದ ಗರ್ಭಧಾರಣೆಯಲ್ಲಿ ತಾಯಿ ಮತ್ತು ಶಿಶುಗಳ ಜೀವಕ್ಕೂ ಅಪಾಯವಿರುವ ಸಂದರ್ಭಗಳಲ್ಲಿ ನಾಲ್ಕು ಮಕ್ಕಳ ಯಶಸ್ವಿ ಸಾಮಾನ್ಯ ಹೆರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="77XseUi6Un"><a href="https://samyuktakarnataka.in/entertainment/actor-ravi-mohan-announces-break-from-acting-amid-divorce-controversy/">ಆನ್‌ಲೈನ್ ಟೀಕೆ, ವೈವಾಹಿಕ ವಿವಾದ ನಡುವೆ ರವಿ ಮೋಹನ್ ಸ್ಪಷ್ಟನೆ</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ಆನ್‌ಲೈನ್ ಟೀಕೆ, ವೈವಾಹಿಕ ವಿವಾದ ನಡುವೆ ರವಿ ಮೋಹನ್ ಸ್ಪಷ್ಟನೆ&#8221; &#8212; Samyukta Karnataka" src="https://samyuktakarnataka.in/entertainment/actor-ravi-mohan-announces-break-from-acting-amid-divorce-controversy/embed/#?secret=5h9YZSVFH2#?secret=77XseUi6Un" data-secret="77XseUi6Un" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/uttar-pradesh-woman-gives-birth-to-quadruplets-normal-delivery/">5 ದಿನಗಳಲ್ಲಿ 4 ಮಕ್ಕಳಿಗೆ ಜನ್ಮ: ಯಶಸ್ವಿ ಹೆರಿಗೆ ನಡೆಸಿದ ವೈದ್ಯರು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಬಾಂಗ್ಲಾದೇಶದಲ್ಲಿ ದಡಾರ ಅಬ್ಬರ: 24 ಗಂಟೆಯಲ್ಲಿ 12 ಮಕ್ಕಳ ಸಾವು</title>
		<link>https://samyuktakarnataka.in/news/international/bangladesh-measles-outbreak-children-deaths-vaccine-crisis/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 08 May 2026 07:34:14 +0000</pubDate>
				<category><![CDATA[ವಿದೇಶ]]></category>
		<category><![CDATA[#international]]></category>
		<category><![CDATA[health]]></category>
		<category><![CDATA[healthproblems]]></category>
		<guid isPermaLink="false">https://samyuktakarnataka.in/?p=97761</guid>

					<description><![CDATA[<p>ಬಾಂಗ್ಲಾದೇಶದಲ್ಲಿ ದಡಾರ ಸೋಂಕಿನ (Measles Outbreak) ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲೇ 12 ಮಕ್ಕಳು ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯ ವರದಿ ಪ್ರಕಾರ, ಮೃತಪಟ್ಟ ಮಕ್ಕಳಲ್ಲಿ ಒಬ್ಬರಿಗೆ ದಡಾರ ಸೋಂಕು ದೃಢಪಟ್ಟಿದ್ದು, ಉಳಿದ 11 ಮಕ್ಕಳಲ್ಲಿ ದಡಾರಕ್ಕೆ ಸಂಬಂಧಿಸಿದ ಗಂಭೀರ ಲಕ್ಷಣಗಳು ಕಂಡುಬಂದಿವೆ. ರಾಜಧಾನಿ ಢಾಕಾ ವಿಭಾಗದಲ್ಲಿ ಅತಿ ಹೆಚ್ಚು ಆರು ಸಾವುಗಳು ವರದಿಯಾಗಿವೆ. [&#8230;]</p>
<p>The post <a href="https://samyuktakarnataka.in/news/international/bangladesh-measles-outbreak-children-deaths-vaccine-crisis/">ಬಾಂಗ್ಲಾದೇಶದಲ್ಲಿ ದಡಾರ ಅಬ್ಬರ: 24 ಗಂಟೆಯಲ್ಲಿ 12 ಮಕ್ಕಳ ಸಾವು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಬಾಂಗ್ಲಾದೇಶದಲ್ಲಿ ದಡಾರ ಸೋಂಕಿನ (Measles Outbreak) ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲೇ 12 ಮಕ್ಕಳು ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.</p>



<p class="wp-block-paragraph">ಆರೋಗ್ಯ ಇಲಾಖೆಯ ವರದಿ ಪ್ರಕಾರ, ಮೃತಪಟ್ಟ ಮಕ್ಕಳಲ್ಲಿ ಒಬ್ಬರಿಗೆ ದಡಾರ ಸೋಂಕು ದೃಢಪಟ್ಟಿದ್ದು, ಉಳಿದ 11 ಮಕ್ಕಳಲ್ಲಿ ದಡಾರಕ್ಕೆ ಸಂಬಂಧಿಸಿದ ಗಂಭೀರ ಲಕ್ಷಣಗಳು ಕಂಡುಬಂದಿವೆ. ರಾಜಧಾನಿ ಢಾಕಾ ವಿಭಾಗದಲ್ಲಿ ಅತಿ ಹೆಚ್ಚು ಆರು ಸಾವುಗಳು ವರದಿಯಾಗಿವೆ. ಜೊತೆಗೆ ಬಾರಿಶಾಲ್, ಖುಲ್ನಾ, ಮೈಮೆನ್ಸಿಂಗ್, ರಾಜ್‌ಶಾಹಿ ಮತ್ತು ಸಿಲ್ಹೆಟ್ ವಿಭಾಗಗಳಲ್ಲಿಯೂ ಮಕ್ಕಳ ಸಾವಿನ ಪ್ರಕರಣಗಳು ದಾಖಲಾಗಿವೆ.</p>



<p class="wp-block-paragraph">ಕಳೆದ 24 ಗಂಟೆಗಳಲ್ಲೇ ದೇಶಾದ್ಯಂತ 1,238 ಮಕ್ಕಳಲ್ಲಿ ದಡಾರದಂತಹ ಲಕ್ಷಣಗಳು ಕಾಣಿಸಿಕೊಂಡಿರುವುದು ಸೋಂಕಿನ ತೀವ್ರತೆಯನ್ನು ಸ್ಪಷ್ಟಪಡಿಸಿದೆ. ಮಾರ್ಚ್ 15ರಿಂದ ಇಲ್ಲಿವರೆಗೆ 57 ಪ್ರಯೋಗಾಲಯ-ದೃಢೀಕರಿಸಿದ ದಡಾರ ಸಾವುಗಳು ಹಾಗೂ ದಡಾರ ಸಂಬಂಧಿತ ಲಕ್ಷಣಗಳಿಂದ 279 ಸಾವುಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph">ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಈಗಾಗಲೇ 45,000ಕ್ಕೂ ಹೆಚ್ಚು ಮಕ್ಕಳು ದಡಾರದ ಲಕ್ಷಣಗಳನ್ನು ಅನುಭವಿಸಿದ್ದು, ಅವರಲ್ಲಿ 31,000ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಕ್ಕಳಲ್ಲಿ ಜ್ವರ, ಚರ್ಮದ ಮೇಲೆ ಗುಳ್ಳೆಗಳು, ಉಸಿರಾಟದ ತೊಂದರೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿವೆ.</p>



<p class="wp-block-paragraph">ಈ ನಡುವೆ ದಡಾರ ಪರೀಕ್ಷಾ ಕಿಟ್‌ಗಳ ಭಾರೀ ಕೊರತೆ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾವಿರಾರು ಮಾದರಿಗಳು ಪರೀಕ್ಷೆಗೆ ಬಾಕಿ ಉಳಿದಿದ್ದು, ದೇಶದ ಪ್ರಯೋಗಾಲಯಗಳು ಪ್ರತಿದಿನ ಸೀಮಿತ ಸಂಖ್ಯೆಯ ಪರೀಕ್ಷೆಗಳನ್ನು ಮಾತ್ರ ನಡೆಸಲು ಸಾಧ್ಯವಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph">UNICEF ಹಾಗೂ World Health Organization (WHO) ಈಗಾಗಲೇ ಬಾಂಗ್ಲಾದೇಶದಲ್ಲಿ ಲಸಿಕೆ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಮತ್ತು ಕಡಿಮೆಯಾದ ರೋಗನಿರೋಧಕ ವ್ಯಾಪ್ತಿಯ ಬಗ್ಗೆ ಎಚ್ಚರಿಕೆ ನೀಡಿದ್ದವು. ಮಧ್ಯಂತರ ಆಡಳಿತದ ಅವಧಿಯಲ್ಲಿ ಲಸಿಕೆ ಖರೀದಿ ಪ್ರಕ್ರಿಯೆಯಲ್ಲಿ ನಡೆದ ಬದಲಾವಣೆಗಳಿಂದ ಮಕ್ಕಳಿಗೆ ನಿಯಮಿತ ಲಸಿಕೆ ನೀಡುವ ಕಾರ್ಯ ಕುಂಠಿತಗೊಂಡಿದ್ದು, ಇದೇ ಈಗಿನ ಭಾರೀ ಸೋಂಕು ಸ್ಫೋಟಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>



<p class="wp-block-paragraph">ಆರೋಗ್ಯ ತಜ್ಞರ ಪ್ರಕಾರ, ದಡಾರ ಅತ್ಯಂತ ವೇಗವಾಗಿ ಹರಡುವ ಸೋಂಕುಗಳಲ್ಲೊಂದು. ಸರಿಯಾದ ಸಮಯದಲ್ಲಿ ಲಸಿಕೆ ನೀಡದಿದ್ದರೆ ಮಕ್ಕಳ ಜೀವಕ್ಕೆ ಅಪಾಯ ಉಂಟಾಗಬಹುದು. ಹೀಗಾಗಿ ಸರ್ಕಾರ ತುರ್ತು ಮಟ್ಟದಲ್ಲಿ ಲಸಿಕೆ ಅಭಿಯಾನವನ್ನು ಬಲಪಡಿಸಬೇಕು ಎಂಬ ಒತ್ತಾಯಗಳು ಹೆಚ್ಚುತ್ತಿವೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="ybHin1zgTQ"><a href="https://samyuktakarnataka.in/districts/bellari/ballari-sp-gunman-arrested-for-extorting-money-from-ration-rice-smuggler/">ಹಣ ವಸೂಲಿ ಆರೋಪ: ತಮ್ಮದೇ ಗನ್‌ಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳ್ಳಾರಿ SP</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ಹಣ ವಸೂಲಿ ಆರೋಪ: ತಮ್ಮದೇ ಗನ್‌ಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳ್ಳಾರಿ SP&#8221; &#8212; Samyukta Karnataka" src="https://samyuktakarnataka.in/districts/bellari/ballari-sp-gunman-arrested-for-extorting-money-from-ration-rice-smuggler/embed/#?secret=NA5YKCU43u#?secret=ybHin1zgTQ" data-secret="ybHin1zgTQ" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/international/bangladesh-measles-outbreak-children-deaths-vaccine-crisis/">ಬಾಂಗ್ಲಾದೇಶದಲ್ಲಿ ದಡಾರ ಅಬ್ಬರ: 24 ಗಂಟೆಯಲ್ಲಿ 12 ಮಕ್ಕಳ ಸಾವು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
