<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Gujarat Archives - Samyukta Karnataka</title>
	<atom:link href="https://samyuktakarnataka.in/tag/gujarat/feed/" rel="self" type="application/rss+xml" />
	<link>https://samyuktakarnataka.in/tag/gujarat/</link>
	<description>News that connects you to Karnataka since 1921</description>
	<lastBuildDate>Thu, 04 Jun 2026 08:03:08 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>Gujarat Archives - Samyukta Karnataka</title>
	<link>https://samyuktakarnataka.in/tag/gujarat/</link>
	<width>32</width>
	<height>32</height>
</image> 
	<item>
		<title>ಆಪರೇಷನ್ ಡೆಲ್ಟಾ ಹಂಟ್: 501 ಶಂಕಿತ ಅಕ್ರಮ ವಲಸಿಗರ ಬಂಧನ</title>
		<link>https://samyuktakarnataka.in/news/india/operation-delta-hunt-gujarat-police-detain-501-suspected-illegal-bangladeshi-nationals/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 04 Jun 2026 08:03:07 +0000</pubDate>
				<category><![CDATA[ದೇಶ]]></category>
		<category><![CDATA[Gujarat]]></category>
		<guid isPermaLink="false">https://samyuktakarnataka.in/?p=99784</guid>

					<description><![CDATA[<p>ಅಕ್ರಮ ವಲಸೆ ವಿರುದ್ಧ ಗುಜರಾತ್ ಸರ್ಕಾರ ರಾಜ್ಯಾದ್ಯಂತ ತಪಾಸಣೆ ನಡೆಸಿ 501 ಶಂಕಿತ ವಿದೇಶಿಗರನ್ನು ವಶಕ್ಕೆ ಪಡೆದ ಪೊಲೀಸರು ನವದೆಹಲಿ: ಅಕ್ರಮ ವಲಸೆ ಮತ್ತು ದಾಖಲೆರಹಿತ ವಿದೇಶಿ ಪ್ರಜೆಗಳ ವಿರುದ್ಧ ಗುಜರಾತ್ ಸರ್ಕಾರ ಕೈಗೊಂಡಿರುವ ‘ಆಪರೇಷನ್ ಡೆಲ್ಟಾ ಹಂಟ್’ ಕಾರ್ಯಾಚರಣೆಯ ಭಾಗವಾಗಿ ರಾಜ್ಯಾದ್ಯಂತ ನಡೆಸಿದ ಭಾರಿ ತಪಾಸಣೆಯಲ್ಲಿ 501 ಶಂಕಿತ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಘಟಕಗಳು, ಅಪರಾಧ [&#8230;]</p>
<p>The post <a href="https://samyuktakarnataka.in/news/india/operation-delta-hunt-gujarat-police-detain-501-suspected-illegal-bangladeshi-nationals/">ಆಪರೇಷನ್ ಡೆಲ್ಟಾ ಹಂಟ್: 501 ಶಂಕಿತ ಅಕ್ರಮ ವಲಸಿಗರ ಬಂಧನ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಅಕ್ರಮ ವಲಸೆ ವಿರುದ್ಧ ಗುಜರಾತ್ ಸರ್ಕಾರ ರಾಜ್ಯಾದ್ಯಂತ ತಪಾಸಣೆ ನಡೆಸಿ 501 ಶಂಕಿತ ವಿದೇಶಿಗರನ್ನು ವಶಕ್ಕೆ ಪಡೆದ ಪೊಲೀಸರು</strong></p>



<p class="wp-block-paragraph">ನವದೆಹಲಿ: ಅಕ್ರಮ ವಲಸೆ ಮತ್ತು ದಾಖಲೆರಹಿತ ವಿದೇಶಿ ಪ್ರಜೆಗಳ ವಿರುದ್ಧ ಗುಜರಾತ್ ಸರ್ಕಾರ ಕೈಗೊಂಡಿರುವ ‘ಆಪರೇಷನ್ ಡೆಲ್ಟಾ ಹಂಟ್’ ಕಾರ್ಯಾಚರಣೆಯ ಭಾಗವಾಗಿ ರಾಜ್ಯಾದ್ಯಂತ ನಡೆಸಿದ ಭಾರಿ ತಪಾಸಣೆಯಲ್ಲಿ 501 ಶಂಕಿತ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p>



<p class="wp-block-paragraph">ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಘಟಕಗಳು, ಅಪರಾಧ ವಿಭಾಗ, ಸೈಬರ್ ಸೆಲ್, ವಿಶೇಷ ಕಾರ್ಯಾಚರಣೆ ಗುಂಪುಗಳು ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು. ವಸತಿ ಪ್ರದೇಶಗಳು, ಕಾರ್ಮಿಕರ ವಸತಿ ಕೇಂದ್ರಗಳು, ನಿರ್ಮಾಣ ಸ್ಥಳಗಳು ಹಾಗೂ ಇತರ ಸಂಶಯಾಸ್ಪದ ಪ್ರದೇಶಗಳಲ್ಲಿ ಮುಂಜಾನೆ ದಾಳಿ ಮತ್ತು ತಪಾಸಣೆ ನಡೆಸಲಾಯಿತು.</p>



<p class="wp-block-paragraph"><strong>ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆ : </strong>ಅಧಿಕಾರಿಗಳ ಪ್ರಕಾರ, ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಗುರುತಿಸಲು ಮಾನವ ಗುಪ್ತಚರ ಮಾಹಿತಿ, ದೂರಸಂಪರ್ಕ ಡೇಟಾ ವಿಶ್ಲೇಷಣೆ ಮತ್ತು ದಾಖಲೆಗಳ ಪರಿಶೀಲನೆಯನ್ನು ಬಳಸಲಾಗಿದೆ. ಶಂಕಿತ ವ್ಯಕ್ತಿಗಳ ಗುರುತು, ವಾಸಸ್ಥಳ ಹಾಗೂ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸುವ ಉದ್ದೇಶದಿಂದ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿದೆ.</p>



<p class="wp-block-paragraph">ಆಪರೇಷನ್ ಡೆಲ್ಟಾ ಹಂಟ್‌ನ ಹಿಂದಿನ ಹಂತಗಳಲ್ಲಿಯೂ ಸಾವಿರಾರು ಶಂಕಿತ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ನೂರಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇತ್ತೀಚಿನ ಕಾರ್ಯಾಚರಣೆಯಲ್ಲಿ ಬಂಧಿತರ ಸಂಖ್ಯೆ 501ಕ್ಕೆ ಏರಿರುವುದು ಗಮನಾರ್ಹವಾಗಿದೆ.</p>



<p class="wp-block-paragraph"><strong>ನಕಲಿ ದಾಖಲೆಗಳ ಬಳಕೆಯ ಶಂಕೆ : </strong>ಪೊಲೀಸ್ ತನಿಖೆಯಲ್ಲಿ ಕೆಲವು ಶಂಕಿತ ವ್ಯಕ್ತಿಗಳು ನಕಲಿ ಅಥವಾ ವಂಚನೆಯ ಮೂಲಕ ಪಡೆದ ಗುರುತಿನ ದಾಖಲೆಗಳನ್ನು ಬಳಸಿರುವ ಸಾಧ್ಯತೆ ವ್ಯಕ್ತವಾಗಿದೆ. ವಿಶೇಷವಾಗಿ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳ ಸತ್ಯಾಸತ್ಯತೆ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ.</p>



<p class="wp-block-paragraph">ಅಕ್ರಮವಾಗಿ ವಾಸಿಸುತ್ತಿರುವವರಿಗೆ ವಸತಿ, ಉದ್ಯೋಗ ಅಥವಾ ದಾಖಲೆಗಳ ವ್ಯವಸ್ಥೆ ಕಲ್ಪಿಸುತ್ತಿರುವ ಸಾಧ್ಯತೆಯಿರುವ ವ್ಯಕ್ತಿಗಳು ಮತ್ತು ಜಾಲಗಳ ಮೇಲೂ ತನಿಖೆ ವಿಸ್ತರಿಸಲಾಗಿದೆ. ಈ ಸಂಬಂಧ ಕೆಲವರ ವಿಚಾರಣೆಯೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph"><strong>ಹರ್ಷ ಸಾಂಘವಿ ಹೇಳಿದ್ದೇನು? : </strong>ಗುಜರಾತ್ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಹರ್ಷ ಸಾಂಘವಿ, ಈ ಕಾರ್ಯಾಚರಣೆಯನ್ನು ಗುಪ್ತಚರ ಮಾಹಿತಿ ಆಧಾರಿತ ಸಮನ್ವಯಿತ ಪೊಲೀಸ್ ಕ್ರಮ ಎಂದು ವಿವರಿಸಿದ್ದಾರೆ. “ಆಪರೇಷನ್ ಡೆಲ್ಟಾ ಹಂಟ್‌ನ ಉದ್ದೇಶ ದಾಖಲೆರಹಿತ ನಿವಾಸಿಗಳನ್ನು ಗುರುತಿಸುವುದಷ್ಟೇ ಅಲ್ಲ, ಅವರಿಗೆ ನೆರವು ನೀಡುತ್ತಿರುವ ಜಾಲಗಳನ್ನು ಪತ್ತೆಹಚ್ಚುವುದೂ ಆಗಿದೆ. ರಾಜ್ಯದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಕಾರ್ಯಾಚರಣೆ ಮುಂದುವರಿಯಲಿದೆ” ಎಂದು ಅವರು ತಿಳಿಸಿದ್ದಾರೆ.</p>



<p class="wp-block-paragraph">ಹಲವು ನಗರಗಳಲ್ಲಿ ನಿರಂತರ ಕಾರ್ಯಾಚರಣೆ : ಅಹಮದಾಬಾದ್, ಸೂರತ್, ರಾಜ್‌ಕೋಟ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ ಹಲವು ಹಂತಗಳಲ್ಲಿ ತಪಾಸಣೆ ಮತ್ತು ಬಂಧನ ಕಾರ್ಯಾಚರಣೆಗಳು ನಡೆದಿವೆ. ರಾಜ್ಯ ಸರ್ಕಾರ ಅಕ್ರಮ ವಲಸೆಯನ್ನು ತಡೆಗಟ್ಟಲು ನಿರಂತರ ಕ್ರಮ ಕೈಗೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph">ಬಂಧಿತರ ರಾಷ್ಟ್ರೀಯತೆ, ದಾಖಲೆಗಳ ಪರಿಶೀಲನೆ ಹಾಗೂ ಕಾನೂನು ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಹಿರಂಗಗೊಳ್ಳುವ ನಿರೀಕ್ಷೆಯಿದೆ. ಅಧಿಕಾರಿಗಳು ಮುಂದಿನ ದಿನಗಳಲ್ಲೂ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.</p>



<p class="wp-block-paragraph">ಆಪರೇಷನ್ ಡೆಲ್ಟಾ ಹಂಟ್ ಇದೀಗ ಗುಜರಾತ್‌ನಲ್ಲಿ ಅಕ್ರಮ ವಲಸೆ ವಿರುದ್ಧ ನಡೆಯುತ್ತಿರುವ ಅತಿದೊಡ್ಡ ಜಾರಿ ಕಾರ್ಯಾಚರಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="CDrvDgvElj"><a href="https://samyuktakarnataka.in/news/india/neet-ug-2026-cancellation-student-suicide-akanksha-chaturvedi/">NEET ಪರೀಕ್ಷೆ: ವೈದ್ಯೆಯಾಗುವ ಕನಸು ಕಂಡ ವಿದ್ಯಾರ್ಥಿನಿ ಆತ್ಮಹತ್ಯೆ</a></blockquote><iframe class="wp-embedded-content" sandbox="allow-scripts" security="restricted"  title="“NEET ಪರೀಕ್ಷೆ: ವೈದ್ಯೆಯಾಗುವ ಕನಸು ಕಂಡ ವಿದ್ಯಾರ್ಥಿನಿ ಆತ್ಮಹತ್ಯೆ” — Samyukta Karnataka" src="https://samyuktakarnataka.in/news/india/neet-ug-2026-cancellation-student-suicide-akanksha-chaturvedi/embed/#?secret=LBdfrnho1D#?secret=CDrvDgvElj" data-secret="CDrvDgvElj" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/operation-delta-hunt-gujarat-police-detain-501-suspected-illegal-bangladeshi-nationals/">ಆಪರೇಷನ್ ಡೆಲ್ಟಾ ಹಂಟ್: 501 ಶಂಕಿತ ಅಕ್ರಮ ವಲಸಿಗರ ಬಂಧನ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ವಾಹನ ತಪಾಸಣೆ ವೇಳೆ ಕೋಟಿ ಕೋಟಿ ನಗದು ಪತ್ತೆ</title>
		<link>https://samyuktakarnataka.in/news/india/gujarat-dahod-unaccounted-cash-seized-from-car/</link>
		
		<dc:creator><![CDATA[Samyukta Karnataka]]></dc:creator>
		<pubDate>Sun, 17 May 2026 11:33:56 +0000</pubDate>
				<category><![CDATA[ದೇಶ]]></category>
		<category><![CDATA[Gujarat]]></category>
		<guid isPermaLink="false">https://samyuktakarnataka.in/?p=98344</guid>

					<description><![CDATA[<p>ಗುಜರಾತ್: ರಾಜ್ಯದ ದಾಹೋದ್ ಜಿಲ್ಲೆಯ ಲಿಮ್ಖೇಡಾ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ಎರ್ಟಿಗಾ ಕಾರಿನಿಂದ ₹2.56 ಕೋಟಿ ಮೌಲ್ಯದ ಲೆಕ್ಕವಿಲ್ಲದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಜರಾತ್‌ನ ಲಿಮ್ಖೇಡಾ ಪೊಲೀಸರು ನಡೆಸಿದ ದಿನನಿತ್ಯದ ವಾಹನ ತಪಾಸಣೆ ವೇಳೆ ಧನಪುರ ಚೌಕ್ಡಿ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಭಾರತೀಯ ಕರೆನ್ಸಿ ನೋಟುಗಳಿಂದ ತುಂಬಿದ್ದ ಮೂರು ಪಾರ್ಸೆಲ್‌ಗಳು ಪತ್ತೆಯಾಗಿವೆ. ಪಂಚ ಸಾಕ್ಷಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನು ಎಣಿಕೆ ಮಾಡಲಾಗಿದ್ದು, ಒಟ್ಟು ₹2,56,80,500 ನಗದು ಪತ್ತೆಯಾಗಿದೆ ಎಂದು [&#8230;]</p>
<p>The post <a href="https://samyuktakarnataka.in/news/india/gujarat-dahod-unaccounted-cash-seized-from-car/">ವಾಹನ ತಪಾಸಣೆ ವೇಳೆ ಕೋಟಿ ಕೋಟಿ ನಗದು ಪತ್ತೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಗುಜರಾತ್: </strong>ರಾಜ್ಯದ ದಾಹೋದ್ ಜಿಲ್ಲೆಯ ಲಿಮ್ಖೇಡಾ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ಎರ್ಟಿಗಾ ಕಾರಿನಿಂದ ₹2.56 ಕೋಟಿ ಮೌಲ್ಯದ ಲೆಕ್ಕವಿಲ್ಲದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>



<p class="wp-block-paragraph">ಗುಜರಾತ್‌ನ ಲಿಮ್ಖೇಡಾ ಪೊಲೀಸರು ನಡೆಸಿದ ದಿನನಿತ್ಯದ ವಾಹನ ತಪಾಸಣೆ ವೇಳೆ ಧನಪುರ ಚೌಕ್ಡಿ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಭಾರತೀಯ ಕರೆನ್ಸಿ ನೋಟುಗಳಿಂದ ತುಂಬಿದ್ದ ಮೂರು ಪಾರ್ಸೆಲ್‌ಗಳು ಪತ್ತೆಯಾಗಿವೆ.</p>



<p class="wp-block-paragraph">ಪಂಚ ಸಾಕ್ಷಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನು ಎಣಿಕೆ ಮಾಡಲಾಗಿದ್ದು, ಒಟ್ಟು ₹2,56,80,500 ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಹಣವನ್ನು ದಾಹೋದ್‌ನಲ್ಲಿರುವ ಒಂದು ಅಂಗಡಿಯಾ ಸಂಸ್ಥೆಯಿಂದ ವಡೋದರಾ ನಗರಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.</p>



<p class="wp-block-paragraph">ವಾಹನದ ಚಾಲಕ ರಾಜುಭಾಯಿ ನಿನಾಮ ವಿಚಾರಣೆಯ ವೇಳೆ ಹಣಕ್ಕೆ ಸಂಬಂಧಿಸಿದ ಯಾವುದೇ ಮಾನ್ಯ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದಾರೆ. ದಾಹೋದ್‌ನ ಭರತ್ ಚೋಪ್ರಾ ಎಂಬ ವ್ಯಕ್ತಿ ಈ ಹಣವನ್ನು ವಡೋದರಾಗೆ ತಲುಪಿಸಲು ನೀಡಿದ್ದಾನೆ ಎಂದು ಚಾಲಕ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.</p>



<p class="wp-block-paragraph">ಲಿಮ್ಖೇಡಾ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದೆ. ಬಳಿಕ ಹಣವನ್ನು ಸರ್ಕಾರಿ ಖಜಾನೆಯಲ್ಲಿ ಠೇವಣಿ ಇಡಲಾಗಿದೆ. ಪ್ರಕರಣದ ಕುರಿತು ಠಾಣೆ ಡೈರಿಯಲ್ಲಿ ದಾಖಲಾತಿ ಮಾಡಲಾಗಿದ್ದು, ಮುಂದಿನ ತನಿಖೆಗಾಗಿ Income Tax Department ಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.</p>



<p class="wp-block-paragraph">ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣಾ ಅವಧಿ, ಹವಾಲಾ ವ್ಯವಹಾರ ಹಾಗೂ ಅಕ್ರಮ ಹಣ ಸಾಗಾಟ ತಡೆಗಟ್ಟಲು ಪೊಲೀಸರು ಮತ್ತು ತೆರಿಗೆ ಇಲಾಖೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿವೆ. ಈ ಹಿನ್ನೆಲೆ ಲಿಮ್ಖೇಡಾದಲ್ಲಿ ಪತ್ತೆಯಾದ ಈ ದೊಡ್ಡ ಮೊತ್ತದ ನಗದು ಪ್ರಕರಣವೂ ಗಮನ ಸೆಳೆದಿದೆ.</p>



<p class="wp-block-paragraph">ಹಣದ ಮೂಲ, ಅದರ ನಿಜವಾದ ಮಾಲೀಕರು ಹಾಗೂ ಸಾಗಾಟದ ಉದ್ದೇಶದ ಬಗ್ಗೆ ಇದೀಗ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="2moKjd5kdj"><a href="https://samyuktakarnataka.in/news/india/cbse-reduces-revaluation-answer-sheet-fees-2026/">CBSE ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮರುಮೌಲ್ಯಮಾಪನ ಶುಲ್ಕ ಭಾರೀ ಇಳಿಕೆ</a></blockquote><iframe class="wp-embedded-content" sandbox="allow-scripts" security="restricted"  title="&#8220;CBSE ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮರುಮೌಲ್ಯಮಾಪನ ಶುಲ್ಕ ಭಾರೀ ಇಳಿಕೆ&#8221; &#8212; Samyukta Karnataka" src="https://samyuktakarnataka.in/news/india/cbse-reduces-revaluation-answer-sheet-fees-2026/embed/#?secret=fTtaYl7Vsm#?secret=2moKjd5kdj" data-secret="2moKjd5kdj" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/gujarat-dahod-unaccounted-cash-seized-from-car/">ವಾಹನ ತಪಾಸಣೆ ವೇಳೆ ಕೋಟಿ ಕೋಟಿ ನಗದು ಪತ್ತೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>IPL 2026 ಪ್ಲೇ-ಆಫ್ ಲೆಕ್ಕಾಚಾರ: ಗುಜರಾತ್ ಅಧಿಪತ್ಯ, RCBಗೆ ಟಾಪ್-2 ಸವಾಲು! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್</title>
		<link>https://samyuktakarnataka.in/sports/ipl-2026-play-off-prediction-gujarat-dominate-rcb-challenge-for-top-2/</link>
		
		<dc:creator><![CDATA[Samyuktha Karnataka]]></dc:creator>
		<pubDate>Wed, 13 May 2026 12:09:59 +0000</pubDate>
				<category><![CDATA[ಕ್ರೀಡೆ]]></category>
		<category><![CDATA[#BangaloreRoyals]]></category>
		<category><![CDATA[#SRH]]></category>
		<category><![CDATA[CSK]]></category>
		<category><![CDATA[dc]]></category>
		<category><![CDATA[gt]]></category>
		<category><![CDATA[Gujarat]]></category>
		<category><![CDATA[IPL 2026]]></category>
		<category><![CDATA[lsg]]></category>
		<category><![CDATA[Play-offs Prediction]]></category>
		<category><![CDATA[RCb]]></category>
		<category><![CDATA[sports]]></category>
		<category><![CDATA[top-2]]></category>
		<guid isPermaLink="false">https://samyuktakarnataka.in/?p=98039</guid>

					<description><![CDATA[<p>ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹದಿನಾರನೇ ಆವೃತ್ತಿಯು ರೋಚಕ ಹಂತಕ್ಕೆ ತಲುಪಿದ್ದು, ಪ್ಲೇ-ಆಫ್‌ ರೇಸ್ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. 56ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ದಾಖಲಿಸಿದ 82 ರನ್‌ಗಳ ಭರ್ಜರಿ ಜಯವು ಅಂಕಪಟ್ಟಿಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಫಲಿತಾಂಶದಿಂದ ಹೈದರಾಬಾದ್ ಮೂರನೇ ಸ್ಥಾನಕ್ಕೆ ಕುಸಿದರೆ, ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಗ್ರಸ್ಥಾನದಲ್ಲಿ ಗುಜರಾತ್ ಅಧಿಪತ್ಯ: ಆರ್‌ಸಿಬಿಗೆ ಸವಾಲು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ರಸ್ತುತ +0.551 ನೆಟ್ [&#8230;]</p>
<p>The post <a href="https://samyuktakarnataka.in/sports/ipl-2026-play-off-prediction-gujarat-dominate-rcb-challenge-for-top-2/">IPL 2026 ಪ್ಲೇ-ಆಫ್ ಲೆಕ್ಕಾಚಾರ: ಗುಜರಾತ್ ಅಧಿಪತ್ಯ, RCBಗೆ ಟಾಪ್-2 ಸವಾಲು! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು:</strong> ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹದಿನಾರನೇ ಆವೃತ್ತಿಯು ರೋಚಕ ಹಂತಕ್ಕೆ ತಲುಪಿದ್ದು, ಪ್ಲೇ-ಆಫ್‌ ರೇಸ್ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. 56ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ದಾಖಲಿಸಿದ 82 ರನ್‌ಗಳ ಭರ್ಜರಿ ಜಯವು ಅಂಕಪಟ್ಟಿಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಫಲಿತಾಂಶದಿಂದ ಹೈದರಾಬಾದ್ ಮೂರನೇ ಸ್ಥಾನಕ್ಕೆ ಕುಸಿದರೆ, ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.</p>



<p class="wp-block-paragraph"><strong>ಅಗ್ರಸ್ಥಾನದಲ್ಲಿ ಗುಜರಾತ್ ಅಧಿಪತ್ಯ: </strong>ಆರ್‌ಸಿಬಿಗೆ ಸವಾಲು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ರಸ್ತುತ +0.551 ನೆಟ್ ರನ್-ರೇಟ್‌ನೊಂದಿಗೆ ಪ್ಲೇ-ಆಫ್ ಪ್ರವೇಶಿಸುವ 99.6% ಅವಕಾಶವನ್ನು ಹೊಂದಿದೆ. ಅಲ್ಲದೆ, ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಅಲಂಕರಿಸುವ ಸಂಭವನೀಯತೆ 84.5% ರಷ್ಟಿದೆ. ಇತ್ತ ಇಂದು ರಾತ್ರಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿರುವ ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ-ಆಫ್ ತಲುಪಲು 88.1% ಅವಕಾಶವಿದೆ. ಒಂದು ವೇಳೆ ಇಂದು ಆರ್‌ಸಿಬಿ ಸೋತರೆ, ಅಂಕಪಟ್ಟಿಯ ಕೆಳಭಾಗದಲ್ಲಿರುವ ತಂಡಗಳ ಹಾದಿ ಸುಗಮವಾಗಲಿದೆ.</p>



<p class="wp-block-paragraph">ಹೈದರಾಬಾದ್ ಮತ್ತು ಪಂಜಾಬ್ ತಂಡಗಳ ಸ್ಥಿತಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟಾಪ್ 4 ತಲುಪಲು 76.8% ಅವಕಾಶ ಹೊಂದಿದ್ದರೂ, ಟಾಪ್ 2 ಸ್ಥಾನ ಪಡೆಯುವ ಸಾಧ್ಯತೆ ಕೇವಲ 35.5% ಕ್ಕೆ ಇಳಿಕೆಯಾಗಿದೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಶ್ರೇಯಸ್‌ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್, ಇನ್ನೂ 64.5% ಪ್ಲೇ-ಆಫ್ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಆದ್ರೆ ಅಗ್ರ ಎರಡು ಸ್ಥಾನಗಳ ರೇಸ್‌ನಲ್ಲಿ ಅವರು 28.8% ರಷ್ಟು ಮಾತ್ರ ಭರವಸೆ ಹೊಂದಿದ್ದಾರೆ.</p>



<p class="wp-block-paragraph"><strong>ಕೆಳಹಂತದ ತಂಡಗಳ ಹೋರಾಟ: </strong>ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ (53.9%) ಮತ್ತು ರಾಜಸ್ಥಾನ್ ರಾಯಲ್ಸ್ (53.8%) ಪ್ಲೇ-ಆಫ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ (12.8%) ಮತ್ತು ಕೆಕೆಆರ್ (3.2%) ತಂಡಗಳ ಹಾದಿ ಅತ್ಯಂತ ಕಠಿಣವಾಗಿದೆ.</p>



<p class="wp-block-paragraph"><strong>ಪ್ಲೇ-ಆಫ್ ವೇಳಾಪಟ್ಟಿ:</strong> ಮೇ 26 ರಿಂದ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಕ್ವಾಲಿಫೈಯರ್ ಮೇ 26 ರಂದು ನಡೆಯಲಿದೆ. ಮೇ 27 ಮತ್ತು 29 ರಂದು ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ನಡೆಯಲಿದ್ದು, ಮೇ 31 ರ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಹಾಫೈನಲ್ ಜರುಗಲಿದೆ.</p>
<p>The post <a href="https://samyuktakarnataka.in/sports/ipl-2026-play-off-prediction-gujarat-dominate-rcb-challenge-for-top-2/">IPL 2026 ಪ್ಲೇ-ಆಫ್ ಲೆಕ್ಕಾಚಾರ: ಗುಜರಾತ್ ಅಧಿಪತ್ಯ, RCBಗೆ ಟಾಪ್-2 ಸವಾಲು! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
