<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>filmstar Archives - Samyukta Karnataka</title>
	<atom:link href="https://samyuktakarnataka.in/tag/filmstar/feed/" rel="self" type="application/rss+xml" />
	<link>https://samyuktakarnataka.in/tag/filmstar/</link>
	<description>News that connects you to Karnataka since 1921</description>
	<lastBuildDate>Sat, 16 May 2026 10:34:56 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>filmstar Archives - Samyukta Karnataka</title>
	<link>https://samyuktakarnataka.in/tag/filmstar/</link>
	<width>32</width>
	<height>32</height>
</image> 
	<item>
		<title>ಆನ್‌ಲೈನ್ ಟೀಕೆ, ವೈವಾಹಿಕ ವಿವಾದ ನಡುವೆ ರವಿ ಮೋಹನ್ ಸ್ಪಷ್ಟನೆ</title>
		<link>https://samyuktakarnataka.in/entertainment/actor-ravi-mohan-announces-break-from-acting-amid-divorce-controversy/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 16 May 2026 10:32:32 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#Divorce]]></category>
		<category><![CDATA[actor]]></category>
		<category><![CDATA[filmstar]]></category>
		<guid isPermaLink="false">https://samyuktakarnataka.in/?p=98240</guid>

					<description><![CDATA[<p>“ನನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ”: ನಟನ ಭಾವುಕ ಹೇಳಿಕೆ ಚೆನ್ನೈ: ತಮಿಳು ಚಿತ್ರರಂಗದ ನಟ ಹಾಗೂ ನಿರ್ಮಾಪಕ ರವಿ ಮೋಹನ್ ತಮ್ಮ ವೈಯಕ್ತಿಕ ಜೀವನ, ವೈವಾಹಿಕ ವಿವಾದ ಮತ್ತು ಮಾನಸಿಕ ಒತ್ತಡದ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಟನೆಯಿಂದ ವಿರಾಮ ಪಡೆಯುವುದಾಗಿ ಘೋಷಿಸಿದ್ದಾರೆ. ಶನಿವಾರ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ಬೆಳವಣಿಗೆಗಳಿಂದಾಗಿ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. “ನಾನು ಎದುರಿಸುತ್ತಿರುವ ಅನಗತ್ಯ ಅವಮಾನ ಮತ್ತು ಸೈಬರ್ ಬೆದರಿಕೆಯನ್ನು [&#8230;]</p>
<p>The post <a href="https://samyuktakarnataka.in/entertainment/actor-ravi-mohan-announces-break-from-acting-amid-divorce-controversy/">ಆನ್‌ಲೈನ್ ಟೀಕೆ, ವೈವಾಹಿಕ ವಿವಾದ ನಡುವೆ ರವಿ ಮೋಹನ್ ಸ್ಪಷ್ಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>“ನನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ”: ನಟನ ಭಾವುಕ ಹೇಳಿಕೆ</strong></p>



<p class="wp-block-paragraph"><strong>ಚೆನ್ನೈ: </strong>ತಮಿಳು ಚಿತ್ರರಂಗದ ನಟ ಹಾಗೂ ನಿರ್ಮಾಪಕ ರವಿ ಮೋಹನ್ ತಮ್ಮ ವೈಯಕ್ತಿಕ ಜೀವನ, ವೈವಾಹಿಕ ವಿವಾದ ಮತ್ತು ಮಾನಸಿಕ ಒತ್ತಡದ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಟನೆಯಿಂದ ವಿರಾಮ ಪಡೆಯುವುದಾಗಿ ಘೋಷಿಸಿದ್ದಾರೆ.</p>



<p class="wp-block-paragraph">ಶನಿವಾರ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ಬೆಳವಣಿಗೆಗಳಿಂದಾಗಿ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. “ನಾನು ಎದುರಿಸುತ್ತಿರುವ ಅನಗತ್ಯ ಅವಮಾನ ಮತ್ತು ಸೈಬರ್ ಬೆದರಿಕೆಯನ್ನು ಸಹಿಸಲು ಕಷ್ಟವಾಗುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>



<p class="wp-block-paragraph">ಪತ್ನಿ ಆರತಿ ರವಿ ಅವರೊಂದಿಗಿನ ವೈವಾಹಿಕ ಭಿನ್ನಾಭಿಪ್ರಾಯದ ವಿಚಾರ ಕಳೆದ ಕೆಲ ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಗಾಯಕಿ ಕೆನೀಶಾ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಈ ವಿವಾದ ಮತ್ತಷ್ಟು ತೀವ್ರಗೊಂಡಿತ್ತು.</p>



<p class="wp-block-paragraph">ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿ ಮೋಹನ್, “ಹಲವರು ನನ್ನನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ. ಯಾರಿಗಾದರೂ ಏನಾದರೂ ಹೇಳಬೇಕಿದ್ದರೆ ನೇರವಾಗಿ ಬಂದು ಹೇಳಲಿ. ಪರೋಕ್ಷವಾಗಿ ಗುರಿಯಾಗಿಸುವುದು ಬೇಡ” ಎಂದು ಎಚ್ಚರಿಕೆ ನೀಡಿದರು.</p>



<p class="wp-block-paragraph">“ನಾನು ವಿಚ್ಛೇದನದ ಹಂತವನ್ನು ದಾಟಿ ಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಮಾತ್ರ ಹಿಂದಿರುಗುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಚಾರವೂ ನನಗೆ ಗೊತ್ತಿದೆ. 23 ವರ್ಷಗಳಿಂದ ಹಗಲು-ರಾತ್ರಿ ದುಡಿದು ನಾನು ಈ ಸ್ಥಾನಕ್ಕೇರಿದ್ದೇನೆ” ಎಂದು ಹೇಳಿದರು.</p>



<p class="wp-block-paragraph">ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಅವರು, “ನನ್ನ ಮಕ್ಕಳ ಶಿಕ್ಷಣಕ್ಕಾಗಿ ₹50 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇನೆ. ನಾನು ಕಟ್ಟಿದ ಮನೆಯನ್ನು ಬಿಟ್ಟು ಇಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ” ಎಂದು ನೋವು ಹಂಚಿಕೊಂಡರು.</p>



<p class="wp-block-paragraph">ಇದೇ ವೇಳೆ ತಮ್ಮ ಕೈಗಳಲ್ಲಿ ಕಂಡುಬಂದ ಗಾಯಗಳ ಕುರಿತು ಮಾತನಾಡುತ್ತಾ, “ನನ್ನ ಮಕ್ಕಳನ್ನು ನೋಡಲು ಅವಕಾಶ ಕೊಡುತ್ತಿಲ್ಲ. ಆ ನೋವಿನಿಂದ ನಾನು ನನ್ನನ್ನೇ ನೋಯಿಸಿಕೊಳ್ಳಲು ಆರಂಭಿಸಿದ್ದೆ” ಎಂದು ಭಾವುಕರಾದರು.</p>



<p class="wp-block-paragraph">ಮಹಿಳೆಯರ ಗೌರವ ಮತ್ತು ಹಕ್ಕುಗಳ ಬಗ್ಗೆ ತಾವು ಸದಾ ನಿಂತಿದ್ದೇನೆ ಎಂದು ಹೇಳಿದ ಅವರು, “ನಾನು ಮಹಿಳೆಯರ ವಿರುದ್ಧ ಎಂದಿಗೂ ಮಾತನಾಡಿಲ್ಲ. ನನ್ನ ಸಿನಿಮಾಗಳಲ್ಲೂ ಮಹಿಳಾ ಸಬಲೀಕರಣದ ಪರ ನಿಂತಿದ್ದೇನೆ. ನನ್ನ ತಾಯಿ ನನ್ನನ್ನು ಆ ರೀತಿ ಬೆಳೆಸಿಲ್ಲ” ಎಂದು ಸ್ಪಷ್ಟಪಡಿಸಿದರು.</p>



<p class="wp-block-paragraph">ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾದ ಗಾಯಕಿ ಕೆನೀಶಾ ಕುರಿತು ಮಾತನಾಡಿದ ಅವರು, “ಒಬ್ಬ ಹುಡುಗಿಯನ್ನು ಅನಗತ್ಯವಾಗಿ ಸೈಬರ್ ಬೆದರಿಕೆಗೆ ಒಳಪಡಿಸಲಾಗಿದೆ. ಅವಳು ಏನು ತಪ್ಪು ಮಾಡಿದ್ದಳು?” ಎಂದು ಪ್ರಶ್ನಿಸಿದರು.</p>



<p class="wp-block-paragraph">ಕೆಲವು ಹಿರಿಯ ನಟರು ಮತ್ತು ಚಿತ್ರರಂಗದ ವ್ಯಕ್ತಿಗಳು ತಮ್ಮ ವೈಯಕ್ತಿಕ ಬದುಕಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದರು. “ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ” ಎಂದು ಹೇಳಿದರು.</p>



<p class="wp-block-paragraph">ಸಹನಟರೊಂದಿಗೆ ಸ್ಪರ್ಧೆ ಮಾಡುವುದರಲ್ಲಿ ತಾನು ಎಂದಿಗೂ ನಂಬಿಕೆ ಇಟ್ಟಿಲ್ಲ ಎಂದು ಹೇಳಿದ ರವಿ ಮೋಹನ್, “ಸಾಮಾಜಿಕ ಜಾಲತಾಣಗಳು ಒಬ್ಬ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ತೋರಿಸುವುದಿಲ್ಲ. ನನ್ನನ್ನು ನಿಜವಾಗಿ ಅರಿತಿರುವ ಜನರೇ ನನಗೆ ಮುಖ್ಯ” ಎಂದು ಹೇಳಿದರು.</p>



<p class="wp-block-paragraph">ಕೊನೆಯಲ್ಲಿ ಅಭಿಮಾನಿಗಳಲ್ಲಿ ಸಮಯ ಮತ್ತು ಸ್ಥಳಾವಕಾಶಕ್ಕಾಗಿ ಮನವಿ ಮಾಡಿದ ಅವರು, “ಮೌನವಾಗಿ ನೋವು ಅನುಭವಿಸುವ ಪುರುಷರ ಸ್ಥಿತಿ ನನಗೆ ಅರ್ಥವಾಗುತ್ತದೆ. ನಾನು ಮತ್ತೆ ಮರಳುವವರೆಗೆ ಸ್ವಲ್ಪ ಸಮಯ ನೀಡಿ” ಎಂದು ವಿನಂತಿಸಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ವೈವಾಹಿಕ ವಿವಾದ, ಸೈಬರ್ ಬೆದರಿಕೆ ಹಾಗೂ ಮಾನಸಿಕ ಒತ್ತಡದ ನಡುವೆ ನಟ ರವಿ ಮೋಹನ್ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಟನೆಯಿಂದ ವಿರಾಮ ಪಡೆಯುವುದಾಗಿ ಭಾವನಾತ್ಮಕವಾಗಿ ಘೋಷಿಸಿದ್ದಾರೆ.<a href="https://t.co/0oxuxJcJHV">https://t.co/0oxuxJcJHV</a> <a href="https://t.co/gw2OYLhgy1">pic.twitter.com/gw2OYLhgy1</a></p>&mdash; Samyukta Karnataka (@SamyuktaKarnatk) <a href="https://twitter.com/SamyuktaKarnatk/status/2055597332323053892?ref_src=twsrc%5Etfw">May 16, 2026</a></blockquote><script async src="https://platform.twitter.com/widgets.js" charset="utf-8"></script>
</div></figure>
<p>The post <a href="https://samyuktakarnataka.in/entertainment/actor-ravi-mohan-announces-break-from-acting-amid-divorce-controversy/">ಆನ್‌ಲೈನ್ ಟೀಕೆ, ವೈವಾಹಿಕ ವಿವಾದ ನಡುವೆ ರವಿ ಮೋಹನ್ ಸ್ಪಷ್ಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>&#8220;ತಪ್ಪಾದ ರೈಲು ಹತ್ತಿದ್ದರೆ ಇಳಿಯುವುದೇ ಲೇಸು&#8221;: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ!</title>
		<link>https://samyuktakarnataka.in/entertainment/hansika-motwanis-marriage-ends/</link>
		
		<dc:creator><![CDATA[Samyuktha Karnataka]]></dc:creator>
		<pubDate>Sat, 18 Apr 2026 11:32:50 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#sandalwood]]></category>
		<category><![CDATA[actreslife]]></category>
		<category><![CDATA[bollywood]]></category>
		<category><![CDATA[Bollywoodcinema]]></category>
		<category><![CDATA[filmstar]]></category>
		<category><![CDATA[Tollywood]]></category>
		<guid isPermaLink="false">https://samyuktakarnataka.in/?p=95794</guid>

					<description><![CDATA[<p>ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ತಮ್ಮ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಸ್ಪಷ್ಟನೆ ಸಿಕ್ಕಿದ್ದು, ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ವಿವಾಹ ಸಂಬಂಧ ಕಾನೂನಾತ್ಮಕವಾಗಿ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ ಮಾರ್ಚ್ 11, 2026ರಂದು ಈ ಜೋಡಿಗೆ ಪರಸ್ಪರ ಒಪ್ಪಿಗೆಯ ವಿಚ್ಛೇದನ ಮಂಜೂರು ಮಾಡಿದೆ. 2022ರ ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿ, ಕೇವಲ ಒಂದೂವರೆ ವರ್ಷದಲ್ಲಿ ಭಿನ್ನಾಭಿಪ್ರಾಯದ ಕಾರಣದಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. [&#8230;]</p>
<p>The post <a href="https://samyuktakarnataka.in/entertainment/hansika-motwanis-marriage-ends/">&#8220;ತಪ್ಪಾದ ರೈಲು ಹತ್ತಿದ್ದರೆ ಇಳಿಯುವುದೇ ಲೇಸು&#8221;: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ತಮ್ಮ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಸ್ಪಷ್ಟನೆ ಸಿಕ್ಕಿದ್ದು, ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ವಿವಾಹ ಸಂಬಂಧ ಕಾನೂನಾತ್ಮಕವಾಗಿ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ ಮಾರ್ಚ್ 11, 2026ರಂದು ಈ ಜೋಡಿಗೆ ಪರಸ್ಪರ ಒಪ್ಪಿಗೆಯ ವಿಚ್ಛೇದನ ಮಂಜೂರು ಮಾಡಿದೆ.</p>



<p class="wp-block-paragraph">2022ರ ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿ, ಕೇವಲ ಒಂದೂವರೆ ವರ್ಷದಲ್ಲಿ ಭಿನ್ನಾಭಿಪ್ರಾಯದ ಕಾರಣದಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ವಿಶೇಷವೆಂದರೆ ವಿಚ್ಛೇದನದ ಸಂದರ್ಭದಲ್ಲಿ ಹನ್ಸಿಕಾ ಅಥವಾ ಸೊಹೇಲ್ ಪರಸ್ಪರ ಯಾವುದೇ ರೀತಿಯ ಮಾಸಾಶನ ಅಥವಾ ಜೀವನಾಂಶದ ಬೇಡಿಕೆಯನ್ನು ಇಟ್ಟಿಲ್ಲ. ಗೌರವಯುತವಾಗಿಯೇ ಈ ಸಂಬಂಧದಿಂದ ಹೊರಬರಲು ಇಬ್ಬರೂ ನಿರ್ಧರಿಸಿದ್ದಾರೆ.</p>



<p class="wp-block-paragraph">ವಿಚ್ಛೇದನದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹನ್ಸಿಕಾ, ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. &#8220;ನಾನು ಈಗಿರುವ ಜಾಗದಲ್ಲಿ ಅತ್ಯಂತ ಸಂತೋಷವಾಗಿದ್ದೇನೆ. ಜೀವನದಲ್ಲಿ ನಮಗೆ ಕ್ಲಿಕ್‌ಬೈಟ್ ಹೆಡ್‌ಲೈನ್ಸ್‌ಗಿಂತ ನೆಮ್ಮದಿ ಮುಖ್ಯ. ತಪ್ಪಾದ ರೈಲು ಹತ್ತಿದಾಗ ಅದರಲ್ಲಿ ನೋವು ಅನುಭವಿಸುತ್ತಾ ಪ್ರಯಾಣಿಸುವುದಕ್ಕಿಂತ, ಆದಷ್ಟು ಬೇಗ ಕೆಳಗಿಳಿಯುವುದು ಬುದ್ಧಿವಂತಿಕೆ,&#8221; ಎಂದು ಮಾರ್ಮಿಕವಾಗಿ ಹೇಳಿದ್ದಾರೆ.</p>



<p class="wp-block-paragraph">ಸಮಾಜವು ಮಹಿಳೆಯರ ಮದುವೆ ಮತ್ತು ತಾಯ್ತನದ ಬಗ್ಗೆ ಹೇರುವ ನಿಯಮಗಳನ್ನು ಹನ್ಸಿಕಾ ತೀವ್ರವಾಗಿ ಟೀಕಿಸಿದ್ದಾರೆ. &#8220;ಮದುವೆಗೆ ಇಂತಿಷ್ಟೇ ವಯಸ್ಸು ಇರಬೇಕು ಎಂದು ನಿರ್ಧರಿಸುವವರು ಯಾರು? ಸಾಮಾಜಿಕ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವ ಸಂಬಂಧದಲ್ಲೂ ನಿಮ್ಮ ಆತ್ಮಗೌರವವನ್ನು ಕಳೆದುಕೊಳ್ಳಬೇಡಿ. ನಿಮ್ಮನ್ನು ನೀವು ಮೊದಲು ಗೌರವಿಸಲು ಕಲಿಯಿರಿ,&#8221; ಎಂದು ಕಿವಿಮಾತು ಹೇಳಿದರು.</p>



<p class="wp-block-paragraph">ಒಟ್ಟಾರೆ.. ಹನ್ಸಿಕಾ ತಮ್ಮ ಕುಟುಂಬದ ಬೆಂಬಲದೊಂದಿಗೆ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದು, ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ನೇರ ಮತ್ತು ಧೈರ್ಯದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.</p>
<p>The post <a href="https://samyuktakarnataka.in/entertainment/hansika-motwanis-marriage-ends/">&#8220;ತಪ್ಪಾದ ರೈಲು ಹತ್ತಿದ್ದರೆ ಇಳಿಯುವುದೇ ಲೇಸು&#8221;: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>&#8216;ಜನ ನಾಯಗನ್ʼ: ₹500 ಕೋಟಿ ಸಿನಿಮಾಗೆ ಪೈರಸಿ ಪೆಟ್ಟು, ವಿಜಯ್ ಕೊನೆಯ ಸಿನಿಮಾದ ದೃಶ್ಯಗಳು ಸೋರಿಕೆ!</title>
		<link>https://samyuktakarnataka.in/entertainment/jananayagan-500-core-movie-hit-by-piracy-vijay/</link>
		
		<dc:creator><![CDATA[Samyuktha Karnataka]]></dc:creator>
		<pubDate>Fri, 10 Apr 2026 10:27:20 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#ThalapathyVijay]]></category>
		<category><![CDATA[filmstar]]></category>
		<category><![CDATA[Jananayagan]]></category>
		<category><![CDATA[Piracy]]></category>
		<category><![CDATA[Tamil cinema]]></category>
		<category><![CDATA[Thalapathy]]></category>
		<category><![CDATA[Tollywood]]></category>
		<guid isPermaLink="false">https://samyuktakarnataka.in/?p=95237</guid>

					<description><![CDATA[<p>ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಧ್ರುವತಾರೆ ದಳಪತಿ ವಿಜಯ್ ನಟನ ವೃತ್ತಿಯ ಅಂತಿಮ ಸಿನಿಮಾ ಎನ್ನಲಾದ ‘ಜನ ನಾಯಗನ್’ (Jananayagan) ಚಿತ್ರಕ್ಕೆ ಸಂಕಷ್ಟಗಳು ಬೆನ್ನೇರಿ ಬಂದಿವೆ. ಜನವರಿ 9ಕ್ಕೆ ನಿಗದಿಯಾಗಿದ್ದ ಬಿಡುಗಡೆ ದಿನಾಂಕವು, ಕೆಲವು ಕಾನೂನು ಕಾರಣಗಳಿಂದ ವಿಳಂಬವಾಗುತ್ತಿರುವ ಬೆನ್ನಲ್ಲೇ, ಚಿತ್ರದ ಅತೀ ಮುಖ್ಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾಹಿತಿಯ ಪ್ರಕಾರ ಸುಮಾರು 5 ನಿಮಿಷಗಳ ಸುದೀರ್ಘ ವಿಡಿಯೋ ಕ್ಲಿಪ್ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ವಿಜಯ್ ಪಾತ್ರದ ಸಖತ್‌ [&#8230;]</p>
<p>The post <a href="https://samyuktakarnataka.in/entertainment/jananayagan-500-core-movie-hit-by-piracy-vijay/">&#8216;ಜನ ನಾಯಗನ್ʼ: ₹500 ಕೋಟಿ ಸಿನಿಮಾಗೆ ಪೈರಸಿ ಪೆಟ್ಟು, ವಿಜಯ್ ಕೊನೆಯ ಸಿನಿಮಾದ ದೃಶ್ಯಗಳು ಸೋರಿಕೆ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು:</strong> ದಕ್ಷಿಣ ಭಾರತದ ಚಿತ್ರರಂಗದ ಧ್ರುವತಾರೆ ದಳಪತಿ ವಿಜಯ್ ನಟನ ವೃತ್ತಿಯ ಅಂತಿಮ ಸಿನಿಮಾ ಎನ್ನಲಾದ ‘ಜನ ನಾಯಗನ್’ (Jananayagan) ಚಿತ್ರಕ್ಕೆ ಸಂಕಷ್ಟಗಳು ಬೆನ್ನೇರಿ ಬಂದಿವೆ. ಜನವರಿ 9ಕ್ಕೆ ನಿಗದಿಯಾಗಿದ್ದ ಬಿಡುಗಡೆ ದಿನಾಂಕವು, ಕೆಲವು ಕಾನೂನು ಕಾರಣಗಳಿಂದ ವಿಳಂಬವಾಗುತ್ತಿರುವ ಬೆನ್ನಲ್ಲೇ, ಚಿತ್ರದ ಅತೀ ಮುಖ್ಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.</p>



<p class="wp-block-paragraph">ಮಾಹಿತಿಯ ಪ್ರಕಾರ ಸುಮಾರು 5 ನಿಮಿಷಗಳ ಸುದೀರ್ಘ ವಿಡಿಯೋ ಕ್ಲಿಪ್ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ವಿಜಯ್ ಪಾತ್ರದ ಸಖತ್‌ ಅದ್ದೂರಿಯಾಗಿ ಪರಿಚಯಿಸಿ ಮತ್ತು ಸಿನಿಮಾದ ಶೀರ್ಷಿಕೆಯನ್ನು ಅನಾವರಣಗೊಳಿಸುವ ಪ್ರಮುಖ ಸನ್ನಿವೇಶಗಳಿವೆ. ವಿಜಯ್ ತಮ್ಮ ಸಿನಿ ಪಯಣ ಮುಗಿಸಿ ಪೂರ್ಣಾವಧಿಯ ರಾಜಕಾರಣಿಯಾಗಿ ಹೊರಹೊಮ್ಮುತ್ತಿರುವ ಈ ಹಂತದಲ್ಲಿ, ಕೊನೆಯ ಚಿತ್ರದ ದೃಶ್ಯಗಳು ಈ ರೀತಿ ಸೋರಿಕೆಯಾಗಿರುವುದು ಸಿನಿಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಚಿತ್ರದ ಸಂಕಲನ ನಡೆಯುತ್ತಿರುವ ಹಂತದಲ್ಲಿಯೇ ಈ ವಿಡಿಯೋ ಹೊರಬಂದಿರುವುದು ಚಿತ್ರತಂಡದ ಭದ್ರತೆಯ ಬಗ್ಗೆ ಪ್ರಶ್ನೆ ಎತ್ತಿದೆ.</p>



<figure class="wp-block-image size-full is-resized"><img fetchpriority="high" decoding="async" width="600" height="338" src="https://samyuktakarnataka.in/wp-content/uploads/2026/04/vijaydalapati-1.jpg" alt="" class="wp-image-95247" style="width:528px;height:auto" srcset="https://samyuktakarnataka.in/wp-content/uploads/2026/04/vijaydalapati-1.jpg 600w, https://samyuktakarnataka.in/wp-content/uploads/2026/04/vijaydalapati-1-300x169.jpg 300w, https://samyuktakarnataka.in/wp-content/uploads/2026/04/vijaydalapati-1-150x85.jpg 150w" sizes="(max-width: 600px) 100vw, 600px" /></figure>



<p class="wp-block-paragraph">ಹಾಗೇ ಈ ಆಘಾತಕಾರಿ ಬೆಳವಣಿಗೆಯ ಬಗ್ಗೆ ನಟ ಸಿ.ಬಿ. ಸತ್ಯರಾಜ್ ಪ್ರತಿಕ್ರಿಯಿಸಿದ್ದು, &#8220;ಒಂದು ಚಿತ್ರವನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಹಣ ಮತ್ತು ನೂರಾರು ಜನರ ಶ್ರಮ ಬೇಕಾಗುತ್ತದೆ. ಇಂತಹ ಕೃತ್ಯಗಳು ಚಿತ್ರೋದ್ಯಮಕ್ಕೆ ಮಾರಕ. ಯಾರೂ ಇಂತಹ ವಿಡಿಯೋಗಳನ್ನು ವೀಕ್ಷಿಸಬೇಡಿ ಮತ್ತು ಹಂಚಿಕೊಳ್ಳಬೇಡಿ,&#8221; ಎಂದು ಮನವಿ ಮಾಡಿದ್ದಾರೆ. ಖ್ಯಾತ ಚಿತ್ರ ವಿಮರ್ಶಕ ಅಮುತ ಭಾರತಿ ಪ್ರಕಾರ, ₹400 ರಿಂದ ₹500 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಮೇಲೆ ವಿತರಕರು ಮತ್ತು ನಿರ್ಮಾಪಕರು ಭಾರಿ ನಂಬಿಕೆ ಇಟ್ಟಿದ್ದಾರೆ. ಇಂತಹ ಸಮಯದಲ್ಲಿ ಪೈರಸಿ ಆದ್ರೆ ಚಿತ್ರದ ಬಾಕ್ಸ್ ಆಫೀಸ್ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದರು.</p>



<p class="wp-block-paragraph">ನಂತರ ಸೋರಿಕೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯ್ ಫ್ಯಾನ್ಸ್‌ಗಳೆಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.</p>



<p class="wp-block-paragraph">ಒಟ್ಟಾರೆ.. ಈಗ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಪಡೆದು, ಅತೀ ಶೀಘ್ರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದೇ ಸೂಕ್ತ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಇದೆಲ್ಲದರ ಬಗ್ಗೆ ವಿಜಯ್‌ ದಳಪತಿಯ ನಿಲುವು ಏನು ಮತ್ತು ಈ ಗೊಂದಲದ ಕುರಿತು ವಿಜಯ್‌ ಇನ್ನೂ ಯಾವ ಹೇಳಿಕೆಯನ್ನು ನೀಡಿಲ್ಲ.</p>
<p>The post <a href="https://samyuktakarnataka.in/entertainment/jananayagan-500-core-movie-hit-by-piracy-vijay/">&#8216;ಜನ ನಾಯಗನ್ʼ: ₹500 ಕೋಟಿ ಸಿನಿಮಾಗೆ ಪೈರಸಿ ಪೆಟ್ಟು, ವಿಜಯ್ ಕೊನೆಯ ಸಿನಿಮಾದ ದೃಶ್ಯಗಳು ಸೋರಿಕೆ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಮಹಾಕುಂಭಮೇಳದ &#8216;ಕಣ್ಣಿನ ಸುಂದರಿ&#8217; ಈಗ ವಿವಾದದ ಸುಳಿಯಲ್ಲಿ: ಇದು ಪ್ರೇಮವೋ ?, ಕೇರಳ ಸ್ಟೋರಿ&#8217; ಮಾದರಿಯ ಸಂಚೋ?</title>
		<link>https://samyuktakarnataka.in/entertainment/monalisa-the-eye-catcher-of-the-mahakumbh-mela-is-now-in-the-throes-of-controversy/</link>
		
		<dc:creator><![CDATA[Samyuktha Karnataka]]></dc:creator>
		<pubDate>Thu, 12 Mar 2026 07:39:40 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[eyesbeauty]]></category>
		<category><![CDATA[filmstar]]></category>
		<category><![CDATA[mahakumbhamel]]></category>
		<category><![CDATA[maliwood]]></category>
		<category><![CDATA[monalisa]]></category>
		<category><![CDATA[monalisabhosle]]></category>
		<category><![CDATA[thekeralastory]]></category>
		<guid isPermaLink="false">https://samyuktakarnataka.in/?p=93221</guid>

					<description><![CDATA[<p>ತಿರುವನಂತಪುರ: ಕಳೆದ ವರ್ಷ ಪ್ರಯಾಗ್‌ರಾಜ್‌ನ ಪವಿತ್ರ ಮಹಾಕುಂಭಮೇಳದ ಮರಳಿನ ಮೇಲೆ, ಕೈಯಲ್ಲಿ ರುದ್ರಾಕ್ಷಿ ಮತ್ತು ಹೂಮಾಲೆಗಳನ್ನು ಹಿಡಿದು, ಮುಗ್ಧ ನಗುವಿನಿಂದ ಕೋಟ್ಯಂತರ ಭಾರತೀಯರ ಮನಗೆದ್ದಿದ್ದ &#8216;ಕುಂಭಮೇಳದ ಹುಡುಗಿ&#8217; ಮೊನಾಲಿಸಾ ಭೋಸ್ಥೆ. ಈಗ ದೇಶಾದ್ಯಂತ ಭಾರಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕೇವಲ 18 ವರ್ಷದ ಈ ಯುವತಿ ಸದ್ದಿಲ್ಲದೆ ಕೇರಳದ ದೇವಸ್ಥಾನವೊಂದರಲ್ಲಿ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿರುವುದು ಈಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಫೇಸ್‌ಬುಕ್ ಪ್ರೇಮ ಮತ್ತು &#8216;ದಿ ಕೇರಳ ಸ್ಟೋರಿ&#8217;: ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಮೊನಾಲಿಸಾ, ಮಹಾರಾಷ್ಟ್ರದ ಫರ್ಮಾನ್ [&#8230;]</p>
<p>The post <a href="https://samyuktakarnataka.in/entertainment/monalisa-the-eye-catcher-of-the-mahakumbh-mela-is-now-in-the-throes-of-controversy/">ಮಹಾಕುಂಭಮೇಳದ &#8216;ಕಣ್ಣಿನ ಸುಂದರಿ&#8217; ಈಗ ವಿವಾದದ ಸುಳಿಯಲ್ಲಿ: ಇದು ಪ್ರೇಮವೋ ?, ಕೇರಳ ಸ್ಟೋರಿ&#8217; ಮಾದರಿಯ ಸಂಚೋ?</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ತಿರುವನಂತಪುರ:</strong> ಕಳೆದ ವರ್ಷ ಪ್ರಯಾಗ್‌ರಾಜ್‌ನ ಪವಿತ್ರ ಮಹಾಕುಂಭಮೇಳದ ಮರಳಿನ ಮೇಲೆ, ಕೈಯಲ್ಲಿ ರುದ್ರಾಕ್ಷಿ ಮತ್ತು ಹೂಮಾಲೆಗಳನ್ನು ಹಿಡಿದು, ಮುಗ್ಧ ನಗುವಿನಿಂದ ಕೋಟ್ಯಂತರ ಭಾರತೀಯರ ಮನಗೆದ್ದಿದ್ದ &#8216;ಕುಂಭಮೇಳದ ಹುಡುಗಿ&#8217; ಮೊನಾಲಿಸಾ ಭೋಸ್ಥೆ. ಈಗ ದೇಶಾದ್ಯಂತ ಭಾರಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕೇವಲ 18 ವರ್ಷದ ಈ ಯುವತಿ ಸದ್ದಿಲ್ಲದೆ ಕೇರಳದ ದೇವಸ್ಥಾನವೊಂದರಲ್ಲಿ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿರುವುದು ಈಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.</p>



<p class="wp-block-paragraph"><strong>ಫೇಸ್‌ಬುಕ್ ಪ್ರೇಮ ಮತ್ತು &#8216;ದಿ ಕೇರಳ ಸ್ಟೋರಿ&#8217;: </strong>ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಮೊನಾಲಿಸಾ, ಮಹಾರಾಷ್ಟ್ರದ ಫರ್ಮಾನ್ ಖಾನ್ ಎಂಬಾತನನ್ನು ವಿವಾಹವಾಗಿದ್ದಾಳೆ. ಮಾಹಿತಿಯ ಪ್ರಕಾರ ಇವರ ಪರಿಚಯವಾಗಿದ್ದು ಕೇವಲ ಆರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ, ಪವಿತ್ರ ಕುಂಭಮೇಳದ ಸಂಕೇತದಂತಿದ್ದ ಹುಡುಗಿ ಇಷ್ಟು ಬೇಗ ಅನ್ಯಧರ್ಮದ ಯುವಕನ ಪ್ರೇಮಪಾಶಕ್ಕೆ ಸಿಲುಕಿದ್ದು ಹೇಗೆ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದನ್ನು ಅನೇಕರು &#8216;ದಿ ಕೇರಳ ಸ್ಟೋರಿ&#8217; ಸಿನಿಮಾದ ವಾಸ್ತವ ರೂಪ ಎಂದು ಬಣ್ಣಿಸುತ್ತಿದ್ದಾರೆ.</p>



<p class="wp-block-paragraph"><strong>ತಂದೆಯ ಕಣ್ಣೀರು, ಪೊಲೀಸ್ ಠಾಣೆ ಮೆಟ್ಟಿಲೇರಿದ ಹೈಡ್ರಾಮಾ:</strong> ಮೊನಾಲಿಸಾ ತಂದೆ ಜೈ ಸಿಂಗ್ ಭೋಸ್ಥೆ ಈ ಮದುವೆಯನ್ನು ತೀವ್ರವಾಗಿ ವಿರೋಧಿಸಿದ್ದರು. ತನ್ನ ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಅಥವಾ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ನಂತರ ಅಲ್ಲಿಂದ ಕರೆದೊಯ್ಯಲು ಕೇರಳದ ಶೂಟಿಂಗ್ ಸ್ಪಾಟ್‌ಗೆ ಧಾವಿಸಿದ್ದರು.</p>



<p class="wp-block-paragraph">ಆದ್ರೆ ಮೊನಾಲಿಸಾ ತನ್ನ ತಂದೆಯ ವಿರುದ್ಧವೇ ಪೊಲೀಸ್ ದೂರು ನೀಡಿ, ತಾನು ಫರ್ಮಾನ್ ಜೊತೆಗೇ ಇರುವುದಾಗಿ ಪಟ್ಟು ಹಿಡಿದರು. ಕಾನೂನಿನ ಪ್ರಕಾರ 18 ವರ್ಷ ತುಂಬಿರುವುದರಿಂದ ಪೊಲೀಸರು ತಂದೆಯನ್ನು ಅಸಹಾಯಕರನ್ನಾಗಿ ಮಾಡಿ ಕಳುಹಿಸಿಕೊಟ್ಟಿದ್ದಾರೆ.</p>



<p class="wp-block-paragraph"><strong>ರಾಜಕೀಯ ನಾಯಕರ ಉಪಸ್ಥಿತಿ:</strong> ಉರಿಯುವ ಬೆಂಕಿಗೆ ತುಪ್ಪ!: ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿರುವುದು ಕೇರಳದ ರಾಜಕೀಯ ಗಣ್ಯರ ನಡೆ. ಈ ಅಂತರ್ಧರ್ಮೀಯ ವಿವಾಹದಲ್ಲಿ ಕೇರಳದ ಶಿಕ್ಷಣ ಸಚಿವ ವಿ. ಶಿವಶೆಟ್ಟಿ ಮತ್ತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. &#8220;ಹಿಂದೂ ಧರ್ಮದ ಪವಿತ್ರ ಮಾಲೆಗಳನ್ನು ಮಾರುತ್ತಿದ್ದ ಹುಡುಗಿಯ ಮದುವೆಗೆ ಎಡಪಂಥೀಯ ನಾಯಕರು ಬೆಂಬಲ ನೀಡುತ್ತಿರುವುದು ಒಂದು ನಿರ್ದಿಷ್ಟ ಅಜೆಂಡಾದ ಭಾಗವೇ?&#8221; ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.</p>



<p class="wp-block-paragraph"><strong>ಸಿನಿಮಾ ರಂಗದ ಎಂಟ್ರಿ ಮತ್ತು ಅಸಲಿ ಆತಂಕ:</strong> ಪ್ರಸ್ತುತ ಮೊನಾಲಿಸಾ &#8216;ನಾಗಮ್ಮ&#8217; ಮತ್ತು &#8216;ದಿ ಡೈರಿ ಆಫ್ ಮಣಿಪುರ್&#8217; ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಒಂದು ಕಡೆ ಇದು ಕೇವಲ ಪ್ರಚಾರಕ್ಕಾಗಿ ನಡೆದ ಗಿಮಿಕ್ ಎಂಬ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಾವಿರಾರು ವರ್ಷಗಳ ಸನಾತನ ಸಂಪ್ರದಾಯದ ಭಾಗವಾಗಿದ್ದ ಹುಡುಗಿಯೊಬ್ಬಳು ಹೀಗೆ ದಿಢೀರ್ ನಿರ್ಧಾರ ತೆಗೆದುಕೊಂಡಿರುವುದು ಹಿಂದೂ ಧರ್ಮೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.</p>



<p class="wp-block-paragraph">ಒಟ್ಟಾರೆ.. ಕುಂಭಮೇಳದ ಆ ಮುಗ್ಧ ಮುಖದ ಹಿಂದೆ ಇಷ್ಟೊಂದು ದೊಡ್ಡ ವಿವಾದ ಅಡಗಿದೆ ಎಂದು ಯಾರೂ ಊಹಿಸಿರಲಿಲ್ಲ. ಈ ಮದುವೆ ಸುಖಾಂತ್ಯ ಕಾಣುತ್ತದೆಯೇ ಅಥವಾ ಮತ್ತೊಂದು ವಿವಾದಾತ್ಮಕ ಇತಿಹಾಸಕ್ಕೆ ನಾಂದಿ ಹಾಡುತ್ತದೆಯೇ? ಕಾದು ನೋಡಬೇಕಿದೆ.</p>
<p>The post <a href="https://samyuktakarnataka.in/entertainment/monalisa-the-eye-catcher-of-the-mahakumbh-mela-is-now-in-the-throes-of-controversy/">ಮಹಾಕುಂಭಮೇಳದ &#8216;ಕಣ್ಣಿನ ಸುಂದರಿ&#8217; ಈಗ ವಿವಾದದ ಸುಳಿಯಲ್ಲಿ: ಇದು ಪ್ರೇಮವೋ ?, ಕೇರಳ ಸ್ಟೋರಿ&#8217; ಮಾದರಿಯ ಸಂಚೋ?</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
